ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋ ಡಿಲೀಟ್​ ಮಾಡಿದ ದೂತ ಸಮೀರ್​..!

ಧರ್ಮಸ್ಥಳ ಬುರುಡೆ ಪ್ರಕರಣ ದೇಶವ್ಯಾಪಿ ಸದ್ದು ಮಾಡುವುದರ ಹಿಂದೆ ಯುಟ್ಯೂಬರ್​ ಸಮೀರ್​ ಎಂ.ಡಿ ಪಾತ್ರ ಕೂಡ ಮಹತ್ವದ್ದು ಎಂಬುದನ್ನು ತಳ್ಳಿ ಹಾಕುವಂತೆಯೇ ಇಲ್ಲ. ಊರ ಗೌಡರು ಎಂಬ ಹೆಸರನ್ನು ನೀಡಿ ಧರ್ಮಸ್ಥಳದ ವಿರುದ್ಧ ಕಪ್ಪು ಚುಕ್ಕೆ ಮೂಡಿಸುವ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದ. ಆದರೆ ಇದೀಗ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋಗಳನ್ನು ಸಮೀರ್​ ಎಂ.ಡಿ ಡಿಲೀಟ್​ ಮಾಡಿದ್ದಾರೆ.
ತಮ್ಮ ದೂತ ಯುಟ್ಯೂಬ್​ ಚಾನೆಲ್​ನಲ್ಲಿ ಎಐ ವಿಡಿಯೋ ಮೂಲಕ ಸೌಜನ್ಯಾ ಪ್ರಕರಣ, ಅನನ್ಯಾ ಭಟ್​, ವೇದವಲ್ಲಿ, ನಂತರ ಈ ಬುರುಡೆ ಪ್ರಕರಣಗಳ ವಿಡಿಯೋಗಳನ್ನು ಬಿತ್ತರಿಸಿದ್ದ ಸಮೀರ್​ ಈಗ ಸೈಲೆಂಟ್​ ಆಗಿದ್ದಾನೆ. ಈ ವಿಡಿಯೋಗಳನ್ನು ಆತನೇ ಡಿಲೀಟ್​ ಮಾಡಿದ್ದಾನೋ, ಅಥವಾ ಡಿಲೀಟ್​ ಮಾಡಿಸಲಾಗಿದೆಯೋ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.

ಧರ್ಮಸ್ಥಳ ಸೌಜನ್ಯಾ ಪ್ರಕರಣದಲ್ಲಿ ಸಮೀರ್​ ಎಂ.ಡಿ ಮಾಡಿದ್ದ ವಿಡಿಯೋ ನೋಡಿ ರಾಜ್ಯಾದ್ಯಂತ ಜನರು ಧರ್ಮಸ್ಥಳದ ವಿರುದ್ಧ ತಿರುಗಿಬಿದ್ದಿದ್ದರು. ಇದಾದ ಬಳಿಕ ಬುರುಡೆ ಪ್ರಕರಣದಲ್ಲಿ ಭೀಮನ ಪಾತ್ರ ಸೃಷ್ಟಿಸಿದ್ದ ಸಮೀರ್​ ಅಲ್ಲಿಯೂ ಕಟ್ಟು ಕತೆಗಳ ಮೂಲಕ ಜನರ ನಂಬಿಕೆ ಗಳಿಸಿದ್ದ. ಆದರೆ ಯಾವಾಗ ಈ ಪ್ರಕರಣದಲ್ಲಿ ಎಸ್​ಐಟಿ ಎಂಟ್ರಿಯಾಯ್ತೋ ಸಮೀರ್​ ಮತ್ತಾತನ ಗ್ಯಾಂಗ್​ನ ಕರಾಳ ಮುಖ ಬಯಲಾಗಿತ್ತು. ಇದಾದ ಬಳಿಕ ಸಮೀರ್​​ ವಿಡಿಯೋ ಮೂಲಕ ಬುರುಡೆ ಬಿಡ್ತಿದ್ದಾನೆ ಎಂಬುದನ್ನು ಜನ ಅರಿತಿದ್ದರು.
ಅಲ್ಲದೇ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಸಮೀರ್​ ಎಂಡಿಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ಎಸ್​ಐಟಿ ಅಧಿಕಾರಿಗಳು ಅನೇಕ ಬಾರಿ ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದರು. ಇದರಿಂದ ಸುಸ್ತಾದ ದೂತ.. ವಿಡಿಯೋ ಡಿಲೀಟ್​ ಮಾಡಿರುವ ಸಾಧ್ಯತೆಗಳು ಹೆಚ್ಚಿವೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ : ಇಂದು ಕೋರ್ಟ್‌ಗೆ ಎಸ್‌ ಐಟಿಯಿಂದ ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಇನ್ನು ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳು ನಿನ್ನೆ ಬೆಳ್ತಂಗಡಿ ನ್ಯಾಯಾಲಯಕ್ಕೆ 4 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಮಾಜಿ ಮಾಸ್ಕ್​ ಮ್ಯಾನ್​ ಚಿನ್ನಯ್ಯ, ಮಹೇಶ್​ ತಿಮರೋಡಿ, ಗಿರೀಶ್​ ಮಟ್ಟಣನವರ್​, ವಿಠ್ಠಲಗೌಡ ಸೇರಿದಂತೆ 6 ಮಂದಿಯ ಹೆಸರು ಜಾರ್ಚ್​ಶೀಟ್​ನಲ್ಲಿ ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ.

Exit mobile version