Sigandur Chowdeshwari Temple: ಪತ್ರದಲ್ಲೇ ಕಷ್ಟ ಆಲಿಸುವ ತಾಯಿ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶಿಷ್ಟ ಆಚರಣೆ

ದೂರದ ಊರುಗಳಿಂದ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಅಥವಾ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಲು ಮುಜುಗರ ಪಡುವ ಭಕ್ತರು ತಾಯಿ ಚೌಡೇಶ್ವರಿಗೆ ಪತ್ರ ಬರೆಯುತ್ತಾರೆ.

ಮಲೆನಾಡಿನ ಹಸಿರು ಮಡಿಲು, ಶರಾವತಿ ಹಿನ್ನೀರಿನ ಮಧ್ಯೆ ನೆಲೆಸಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವು (Goddess Sigandur Chowdeshwari) ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಲಕ್ಷಾಂತರ ಭಕ್ತರ ನಂಬಿಕೆಯ ಸಂಕೇತವಾಗಿದೆ. ಇಲ್ಲಿನ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಪದ್ಧತಿಯೆಂದರೆ “ದೇವಿಗೆ ಪತ್ರ ಬರೆಯುವುದು”. ಭಕ್ತರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಪತ್ರದ ಮೂಲಕ ತಾಯಿಗೆ ನಿವೇದಿಸಿಕೊಳ್ಳುವ ಈ ಸಂಪ್ರದಾಯ ಇಂದಿಗೂ ಸಜೀವವಾಗಿದೆ.

ಏನಿದು ಪತ್ರ ಬರೆಯುವ ಪದ್ಧತಿ?

ದೂರದ ಊರುಗಳಿಂದ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಅಥವಾ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಲು ಮುಜುಗರ ಪಡುವ ಭಕ್ತರು ತಾಯಿ ಚೌಡೇಶ್ವರಿಗೆ ಪತ್ರ ಬರೆಯುತ್ತಾರೆ.

ಪತ್ರ ತಲುಪಿದ ಮೇಲೆ ಏನಾಗುತ್ತದೆ?

ಆಧುನಿಕತೆಯ ಕಾಲದಲ್ಲೂ ಮುರಿಯದ ನಂಬಿಕೆ

ಇಂದಿನ ಡಿಜಿಟಲ್ ಯುಗದಲ್ಲೂ ಸಿಗಂದೂರು ದೇವಸ್ಥಾನಕ್ಕೆ ಬರುವ ಪತ್ರಗಳ ಸಂಖ್ಯೆ ಕಡಿಮೆಯಾಗಿಲ್ಲ. ಮೊಬೈಲ್, ಇಂಟರ್ನೆಟ್ ಇದ್ದರೂ ಭಕ್ತರು ತಾಯಿಗೆ ಪತ್ರ ಬರೆಯುವ ಮೂಲಕ ತಮ್ಮ ಭಕ್ತಿಯನ್ನು ಮತ್ತು ನಂಬಿಕೆಯನ್ನು ಪ್ರಕಟಪಡಿಸುತ್ತಾರೆ. ನಂಬಿಕೆಗೆ ಸಾಕ್ಷಿಯಾಗಿರುವ ಈ ವಿಶಿಷ್ಟ ಪದ್ಧತಿ ಸಿಗಂಧೂರು ಕ್ಷೇತ್ರವನ್ನು ಇತರ ದೇವಸ್ಥಾನಗಳಿಗಿಂತ ಭಿನ್ನವಾಗಿಸಿದೆ.

Exit mobile version