ತುಮಕೂರು ಮೆಟ್ರೋ ಬೆನ್ನಲ್ಲೇ ರೈಲ್ವೆ ಚತುಷ್ಪಥ ಭಾಗ್ಯ! ಕಲ್ಪತರು ನಾಡಿನ ಜನತೆಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!

ಬೆಂಗಳೂರು: ಬೆಂಗಳೂರು ಮತ್ತು ಕಲ್ಪತರು ನಾಡು ತುಮಕೂರು ನಡುವೆ ನಿತ್ಯ ರೈಲಿನಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಭಾಗದ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ಬೆಂಗಳೂರು-ತುಮಕೂರು ಚತುಷ್ಪಥ (Quadruple) ರೈಲು ಮಾರ್ಗ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

 ಬೆಂಗಳೂರು ಮತ್ತು ಕಲ್ಪತರು ನಾಡು ತುಮಕೂರು ನಡುವೆ ನಿತ್ಯ ರೈಲಿನಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಭಾಗದ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ಬೆಂಗಳೂರು-ತುಮಕೂರು ಚತುಷ್ಪಥ (Quadruple) ರೈಲು ಮಾರ್ಗ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಸುಮಾರು 6,000 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಇದರಿಂದ ಉಭಯ ನಗರಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿತಗೊಳ್ಳಲಿದೆ. ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ವಿವರವಾದ ಯೋಜನಾ ವರದಿ (DPR) ಸಿದ್ಧವಾಗಿದ್ದು, ತಾಂತ್ರಿಕ ಸಮಿತಿಯ ಅನುಮೋದನೆ ದೊರೆತಿದೆ. ಮುಂದಿನ ಹಂತವಾಗಿ ಕೇಂದ್ರ ಸಚಿವ ಸಂಪುಟ ಮತ್ತು ನೀತಿ ಆಯೋಗದ ಒಪ್ಪಿಗೆ ಸಿಗಲಿದ್ದು, ಮುಂದಿನ 5 ರಿಂದ 6 ತಿಂಗಳುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ವಾಹನ ಸವಾರರೇ ಗಮನಿಸಿ… ಟ್ರಾಫಿಕ್ ದಂಡ ಪಾವತಿಸುವವರಿಗೆ ಬಂಪರ್ ಆಫರ್: ಇಂದಿನಿಂದಲೇ ಶೇ. 50 ರಿಯಾಯಿತಿ ಅನ್ವಯ!

ಪ್ರಯಾಣಿಕರಿಗೆ ಸಿಗುವ ಲಾಭಗಳೇನು?

ತುಮಕೂರು ಮೆಟ್ರೋ ವಿಸ್ತರಣೆಗೂ ಪೂರಕ:

ರೈಲ್ವೆ ಯೋಜನೆಯ ಬೆನ್ನಲ್ಲೇ ಬೆಂಗಳೂರು ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಿಸುವ ರಾಜ್ಯ ಸರ್ಕಾರದ ಆಲೋಚನೆಗೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ತುಮಕೂರು ನಗರವನ್ನು ಬೆಂಗಳೂರಿಗೆ ಸರಿಸಮನಾದ ಸ್ಯಾಟಲೈಟ್ ಸಿಟಿಯಾಗಿ ಬೆಳೆಸಲು ಈ ಮೂಲಸೌಕರ್ಯಗಳು ವೇಗ ನೀಡಲಿವೆ ಎಂದು ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version