Bus accident : ರಾಜ್ಯ ಸಾರಿಗೆ ಬಸ್ ಪಲ್ಟಿ : 20 ಕ್ಕೂ ಅಧಿಕ ಮಂದಿಗೆ ಗಾಯ

Published by
Kannada News Next Desk

ಮಹಾರಾಷ್ಟ್ರ : ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರಾಜ್ಯ ಸಾರಿಗೆ ಬಸ್‌ವೊಂದು (Bus accident) ಭೀಕರ ಅಪಘಾತಕ್ಕೆ ತುತ್ತಾಗಿದೆ. ಈ ಆಘಾತಕಾರಿ ಅಪಘಾತದಲ್ಲಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬುಲ್ಧಾನಾದಿಂದ ಮಲ್ಕಾಪುರಕ್ಕೆ ತೆರಳುತ್ತಿದ್ದಾಗ ರಾಜೂರ್ ಘಾಟ್‌ನಲ್ಲಿ ಎಸ್‌ಟಿ ಕಾರ್ಪೊರೇಷನ್ ಬಸ್‌ನ ಮುಂಭಾಗದ ಟೈರ್ ಒಡೆದಿದ್ದು, ಬಸ್ ಹಿಂದೆ ಹೋಗಲಾರಂಭಿಸಿದೆ. ಚಾಲಕ ಬಸ್ ನಿಲ್ಲಿಸಲು ಯತ್ನಿಸಿದರಾದರೂ ಅಷ್ಟರಲ್ಲಿ ಬಸ್ ಸ್ಕಿಡ್ ಆಗಿ ಬಂಡೆಯ ಮೇಲೆ ಪಲ್ಟಿಯಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ಭೀಕರ ಅಪಘಾತದಲ್ಲಿ ಬಸ್‌ನಲ್ಲಿದ್ದ 20 ರಿಂದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Jammu and Kashmir Crime : ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆಗೈದ ಬಿಎಸ್‌ಎಫ್‌ ಯೋಧರು

ಇದನ್ನೂ ಓದಿ : Algeria Wildfires rage : ಕಾಡ್ಗಿಚ್ಚಿನಿಂದಾಗಿ 10 ಸೈನಿಕರು ಸೇರಿ 25 ಮಂದಿ ಸಾವು

ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಆಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಬುಲ್ಧಾನಾ ಜನರಲ್ ಆಸ್ಪತ್ರೆಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಬಸ್‌ನಲ್ಲಿ ರಾಜೂರ್, ಮೋಟಾಲ ಮತ್ತು ತಾರ್ಖೇಡ್‌ನ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಬುಲ್ಧಾನಕ್ಕೆ ಬರುತ್ತಿದ್ದರು ಎಂದು ವರದಿಯಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಖಾಸಗಿ ವಾಹನ ಚಾಲಕರು ಅವರ ಮುಂದಿನ ಪ್ರಯಾಣಕ್ಕೆ ಸಹಾಯ ಮಾಡಿದರು.

Bus accident: State transport bus overturns: More than 20 people injured

This post was last modified on ಜುಲೈ 25, 2023 3:31 ಅಪರಾಹ್ನ

Share