ಡಿಕೆಶಿ ಸಂಪುಟದಲ್ಲಿ ಭಾರಿ ಬದಲಾವಣೆ? 3-5 ಸಚಿವರಿಗೆ ಕೊಕ್? ಹೈಕಮಾಂಡ್‌ಗೆ ತಲೆನೋವಾದ ಕರ್ನಾಟಕ ಕಾಂಗ್ರೆಸ್!

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಯಾಗಿದೆ. ವಿಧಾನಮಂಡಲದ ಮುಂಗಾರು ಅಧಿವೇಶನ ಅನಿರೀಕ್ಷಿತವಾಗಿ ಅಂತ್ಯಗೊಳ್ಳುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್‌ ಪಡಸಾಲೆಯಲ್ಲಿ

WhatsAppPost
Karnataka Cabinet Major reshuffle 3 to 5 ministers to be dropped
Karnataka Cabinet Major reshuffle 3 to 5 ministers to be dropped

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಯಾಗಿದೆ. ವಿಧಾನಮಂಡಲದ ಮುಂಗಾರು ಅಧಿವೇಶನ ಅನಿರೀಕ್ಷಿತವಾಗಿ ಅಂತ್ಯಗೊಳ್ಳುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್ಪಡಸಾಲೆಯಲ್ಲಿಸಂಪುಟ ಪುನಾರಚನೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

ಸಂಪುಟದಿಂದ ಮೂರರಿಂದ ಐದು ಮಂದಿ ಹಾಲಿ ಸಚಿವರಿಗೆ ಕೋಕ್ ನೀಡಿ, ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ತಯಾರಿ ನಡೆಸುತ್ತಿದೆ ಎನ್ನಲಾಗುತ್ತಾ ಇದೆ. 

ಅಧಿವೇಶನ ಅಂತ್ಯ ಬೆನ್ನಲ್ಲೇ ಸಂಪುಟ ಬದಲಾವಣೆ ಚರ್ಚೆ:

ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಮುಂಗಾರು ಅಧಿವೇಶನ ನಿಗದಿತ ಅವಧಿಗಿಂತ ಮೂರು ದಿನ ಮುಂಚಿತವಾಗಿಯೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ, ಸರ್ಕಾರದಲ್ಲಿ ಸಚಿವ ಸಂಪುಟ ಬದಲಾವಣೆಯ ಚರ್ಚೆ ತೀವ್ರ ಕಾವು ಪಡೆದುಕೊಂಡಿದೆ.

ಉನ್ನತ ಮೂಲಗಳ ಪ್ರಕಾರ, ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಸಚಿವರ ಕಾರ್ಯವೈಖರಿ ಮತ್ತು ಸಂಪುಟ ಪುನಾರಚನೆ ಕುರಿತು ಪ್ರಾಥಮಿಕ ಮಾತುಕತೆಗಳು ಮುಗಿದಿವೆ. ಬಾರಿ 3 ರಿಂದ 5 ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡಲು ಕಾಂಗ್ರೆಸ್ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ದೆಹಲಿಗೆ ಸಿಎಂ, ಡಿಸಿಎಂ ಪ್ರವಾಸ ಸಾಧ್ಯತೆ:

ಪ್ರಮುಖ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಮಟ್ಟದ ನಾಯಕರಿಗೆ ದೆಹಲಿಯಿಂದ ಬುಲಾವ್ ಬರುವ ಸಾಧ್ಯತೆಯಿದೆ. ಗುರುವಾರ ಇವರೆಲ್ಲರೂ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಹಂತದ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಹೈಕಮಾಂಡ್ಗೆ ತಲೆನೋವಾದ ಪ್ರಾದೇಶಿಕ ಹಾಗೂ ಜಾತಿ ಸಮೀಕರಣ:

ಸಂಪುಟದಲ್ಲಿ ಹಿರಿತನಕ್ಕೆ ಸೂಕ್ತ ಆದ್ಯತೆ ನೀಡಿಲ್ಲ ಹಾಗೂ ಜಾತಿ ಸಮೀಕರಣ ಸರಿದೂಗಿಸಿಲ್ಲ ಎಂಬ ಅಸಮಾಧಾನ ಹಲವು ನಾಯಕರಲ್ಲಿದೆ. ಮೂರು-ನಾಲ್ಕು ಬಾರಿ ಗೆದ್ದ ಹಿರಿಯ ಶಾಸಕರ ತೀವ್ರ ಅಸಮಾಧಾನ ಮತ್ತು ಬೆಂಗಳೂರು, ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗಗಳ ಪ್ರಾದೇಶಿಕ ಲೆಕ್ಕಾಚಾರವೇ ಈಗ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದಲ್ಲದೆ, ಜನತಾ ಪರಿವಾರದ ಹಿನ್ನೆಲೆಯ 17 ಮಂದಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೂ ಕೆಲ ಮೂಲ ಕಾಂಗ್ರೆಸ್ ಹಿರಿಯರು ತೀವ್ರ ಆಕ್ಷೇಪವೆತ್ತಿದ್ದಾರೆ ಎನ್ನಲಾಗುತ್ತಿದೆ.

ಅಸಮಾಧಾನಿತರು ಹಾಗೂ ಮಹಿಳಾ ನಾಯಕರಿಗೆ ಚಾನ್ಸ್?

ಪಕ್ಷದೊಳಗಿನ ಅಸಮಾಧಾನ ಶಮನಗೊಳಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಒಬ್ಬರು ಮಹಿಳಾ ಶಾಸಕರು ಸೇರಿದಂತೆ ಕೆಲ ಪ್ರಮುಖ ರೆಬೆಲ್ ಹಾಗೂ ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.

ಒಟ್ಟಿನಲ್ಲಿ, ಒಂದೆಡೆ ಹಿರಿಯ ನಾಯಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಕೆಲ ಸಚಿವರು ಆತಂಕದಲ್ಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ವರಿಷ್ಠರ ಸಭೆಯ ಬಳಿಕವಷ್ಟೇ ಸಂಪುಟ ಸರ್ಜರಿಯ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Topics

ಸಂಬಂಧಿತ ಸುದ್ದಿಗಳು