ಬೆಳಗಾವಿಯ 400 ಕೋಟಿ ದರೋಡೆಗೆ ಬಿಗ್ ಟ್ವಿಸ್ಟ್: ಗುಜರಾತ್ ರಾಜಕಾರಣಿಯ ನಂಟು!

ಬೆಳಗಾವಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿಯ 400 ಕೋಟಿ ರೂಪಾಯಿ ದರೋಡೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೇವಲ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸೀಮಿತವಾಗಿದ್ದ ಈ ಹಗರಣದ ತನಿಖೆ ಈಗ ಗುಜರಾತ್ ಅಂಗಳಕ್ಕೆ ತಲುಪಿದ್ದು, ಪ್ರಭಾವಿ ರಾಜಕಾರಣಿಯೊಬ್ಬರ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸಿನಿಮೀಯ ಮಾದರಿಯ ದರೋಡೆ ನಡೆದಿದ್ದು ಹೇಗೆ?

​ಈ ಪ್ರಕರಣದ ಮೂಲ ಕಥೆಯೇ ರೋಚಕವಾಗಿದೆ. ಅಕ್ಟೋಬರ್ 22 ರಂದು ಗೋವಾದಿಂದ ಎರಡು ಕಂಟೇನರ್‌ಗಳಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣವನ್ನು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಬೆಳಗಾವಿಯ ದಟ್ಟ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಬಳಿ ಬರುತ್ತಿದ್ದಂತೆ ನೆಟ್‌ವರ್ಕ್ ಇಲ್ಲದ ಜಾಗ ನೋಡಿ ಕಂಟೇನರ್‌ಗಳನ್ನು ದರೋಡೆ ಮಾಡಲಾಗಿತ್ತು. ವಿಶೇಷವೆಂದರೆ, ಇಷ್ಟೊಂದು ದೊಡ್ಡ ಮೊತ್ತದ ಹಣ ಕಳೆದುಕೊಂಡರೂ ಯಾರೊಬ್ಬರೂ ಪೊಲೀಸ್ ದೂರು ನೀಡಿರಲಿಲ್ಲ!

ತನಿಖೆಯಲ್ಲಿ ಬಯಲಾದ ಪ್ರಮುಖ ಅಂಶಗಳು:

ಪೊಲೀಸ್ ತನಿಖೆ ಚುರುಕು:

​ಸದ್ಯ ಮಹಾರಾಷ್ಟ್ರದ ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ವಿರಾಟ್ ಎಂಬಾತನನ್ನು ಬಂಧಿಸಲಾಗಿದೆ. ಈ ದರೋಡೆಯ ಹಿಂದೆ ಕೇವಲ ನಾಲ್ಕು ಜನರಿದ್ದಾರೋ ಅಥವಾ ಇದೊಂದು ಅಂತರರಾಜ್ಯ ದಂಧೆಯೇ ಎಂಬುದು ಸದ್ಯದಲ್ಲೇ ಬಯಲಾಗಲಿದೆ.

Exit mobile version