ಧರ್ಮಸ್ಥಳ ಬುರುಡೆ ಕೇಸ್​ : ಮೂಲ ಪ್ರಕರಣ, ಎಸ್​ಐಟಿ ವಿಚಾರಣೆ ರದ್ದತಿಗೆ ಕೋರ್ಟ್​ ಮೆಟ್ಟಿಲೇರಿದ ಬುರುಡೆ ಗ್ಯಾಂಗ್​

Dharmasthala Burude case: ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಬುರುಡೆ ಗ್ಯಾಂಗ್​ ಪ್ರಕರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್​ ಎದುರಾಗಿದೆ. ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಗೆ ಅಪಪ್ರಚಾರ ಮಾಡಲು ಪ್ಲಾನ್​ ರೂಪಿಸಿದ್ದ ಬುರುಡೆ ಗ್ಯಾಂಗ್​ನ ತಂತ್ರ ಅವರಿಗೆ ತಿರುಮಂತ್ರವಾದ ಹಿನ್ನೆಲೆಯಲ್ಲಿ ಇದೀಗ ದೂರುದಾರ ಚಿನ್ನಯ್ಯ ನೀಡಿರುವ ಹೇಳಿಕೆ ಆಧರಿಸಿ ಧರ್ಮಸ್ಥಳ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನೇ ರದ್ದು ಮಾಡುವಂತೆ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಇದು ಮಾತ್ರವಲ್ಲದೇ ಸೌಜನ್ಯ ಪರ ಹೋರಾಟಗಾರರು ಎಂದು ಗುರುತಿಸಿಕೊಂಡಿರುವ ಗಿರೀಶ್​ ಮಟ್ಟಣ್ಣವರ್​, ಮಹೇಶ್​ ಶೆಟ್ಟಿ ತಿಮರೋಡಿ, ಟಿ. ಜಯಂತ್​ ಹಾಗೂ ವಿಠ್ಠಲಗೌಡ ವಿಚಾರಣೆಗೆ ಹಾಜರಾಗುವಂತೆ ಅ.24ರಂದು ನೀಡಿರುವ ನೋಟಿಸ್​ ರದ್ದುಗೊಳಿಸಿ ಎಂದು ವಕೀಲ ಬಾಲನ್​ ಮೂಲಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ನೋಟಿಸ್​ ರದ್ದು ಮಾಡುವಂತೆ ಹೈಕೋರ್ಟ್​ ಮನವಿ ನೀಡಿರುವ ಬುರುಡೆ ಗ್ಯಾಂಗ್​, ನಮಗೆ ಖುದ್ದಾಗಿ ನೋಟಿಸ್​ ನೀಡದೇ ವಾಟ್ಸಾಪ್​ ಹಾಗೂ ಇಮೇಲ್​ ಸಂದೇಶ ಕಳಿಸಲಾಗಿದೆ. ಅನವಶ್ಯಕವಾಗಿ ನಮ್ಮನ್ನು ಹಲವು ಬಾರಿ ವಿಚಾರಣೆಗೆ ಕರೆದು 100 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.

Also Ready: ಅರಣ್ಯ ಇಲಾಖೆ ಉದ್ಯೋಗದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

ದೂರಿನಲ್ಲಿರುವ ಒಟ್ಟೂ 164 ಹೇಳಿಕೆಗಳಲ್ಲಿ ನಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ. ಹೀಗಿರುವಾಗ ನಮಗೆ ಸುಖಾ ಸುಮ್ಮನೇ ಎಸ್​ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡುತ್ತಿದೆ ಎಂದು ಅರ್ಜಿಯಲ್ಲಿ ಕಾರಣ ಉಲ್ಲೇಖಿಸಿದ್ದಾರೆ.

ಬುರುಡೆ ಪ್ರಕರಣದ ಸೂತ್ರಧಾರಿಗಳು ಎನಿಸಿಕೊಂಡಿರುವ ಈ ನಾಲ್ವರಿಗೆ ಅ.24ರಂದು ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್​ ನೀಡಿತ್ತು. ಈ ನೋಟಿಸ್​ನ ಅನ್ವಯ ಈ ನಾಲ್ವರು ಅ.27ರಂದು ಎಸ್​ಐಟಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ತಮ್ಮ ಮೊಬೈಲ್​ ಫೋನ್​​ ಸ್ವಿಚ್​ ಮಾಡಿಕೊಂಡಿದ್ದ ಈ ನಾಲ್ವರು ವಕೀಲರನ್ನು ಎಸ್​ಐಟಿ ಕಚೇರಿಗೆ ಕಳುಹಿಸಿಕೊಟ್ಟು ಒಂದು ವಾರದ ಸಮಯಾವಕಾಶ ಕೇಳಿದ್ದರು.

ಸುಳ್ಳು ಕತೆಗಳನ್ನು ಕಟ್ಟಿ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಹುನ್ನಾರ ಮಾಡಿದ್ದ ಈ ನಾಲ್ವರು ಬುರುಡೆ ಗ್ಯಾಂಗ್​ ಪ್ರತಿನಿಧಿಗಳು ಇದೀಗ ತಾವೇ ತೋಡಿದ್ದ ಖೆಡ್ಡಾಗೆ ಬಿದ್ದಿದ್ದಾರೆ. ಪ್ರಕರಣದ ವಿಚಾರಣೆ ಇನ್ನಷ್ಟು ಆಳಕ್ಕೆ ಇಳಿದರೆ ತಮ್ಮ ಬಣ್ಣ ಬಟಾಬಯಲಾಗಬಹುದು ಎಂಬ ಭಯಕ್ಕೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ FIR NO 39/2025 ಮೂಲ ಪ್ರಕರಣ ಹಾಗೂ ಎಸ್​ಐಟಿ ನೀಡಿರುವ ನೋಟಿಸ್​ ರದ್ದತಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

Also Read: Areca nut: 70,000 ರೂಪಾಯಿ ಗಡಿದಾಟಿದ ರಾಶಿ ಅಡಿಕೆ : ಅಡಿಕೆ ಬೆಳೆಗಾರರಿಗೆ ಬಂಪರ್‌

Exit mobile version