ಹೆಂಡ್ತಿ ಎಂದು ಶ್ರೀಮಂತ ಎಂದು ಬಿಲ್ಡಪ್​ ತೋರಿಸಿದ್ದ ಸರಗಳ್ಳ ಅಂದರ್​

ಬಂಧಿತ ಆರೋಪಿಗಳನ್ನು 36 ವರ್ಷದ ಗುರುಪ್ರಸಾದ್​ ಅಲಿಯಾಸ್​ ಗುರು, 20 ವರ್ಷದ ರೋಹಿತ್​ ಅಲಿಯಾಸ್​ ಗೆದ್ವಾ, 19 ವರ್ಷದ ನಂಜೇಗೌಡ ಅಲಿಯಾಸ್​ ಕಾಶಿ ಹಾಗೂ 20 ವರ್ಷದ ಮಾದೇಶ್​ ಅಲಿಯಾಸ್​ ಮಾದ ಎಂದು ಗುರುತಿಸಲಾಗಿದೆ.

ಪತ್ನಿಯ ಎದುರು ತಾನು ಆಗರ್ಭ ಶ್ರೀಮಂತ ಎಂದು ಹೇಳಿಕೊಂಡಿದ್ದ ಪತಿರಾಯನೊಬ್ಬ ತನ್ನ ಸ್ಟೇಟಸ್​ ಮೇಂಟೇನ್​ ಮಾಡಲು ಸರಗಳ್ಳತನಕ್ಕೆ ಇಳಿದು ಇದೀಗ ಪೊಲೀಸ್​ ಠಾಣಾ ಅತಿಥಿಯಾದ ಘಟನೆಯೊಂದು ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬಂಧಿತ ಆರೋಪಿಗಳನ್ನು 36 ವರ್ಷದ ಗುರುಪ್ರಸಾದ್​ ಅಲಿಯಾಸ್​ ಗುರು, 20 ವರ್ಷದ ರೋಹಿತ್​ ಅಲಿಯಾಸ್​ ಗೆದ್ವಾ, 19 ವರ್ಷದ ನಂಜೇಗೌಡ ಅಲಿಯಾಸ್​ ಕಾಶಿ ಹಾಗೂ 20 ವರ್ಷದ ಮಾದೇಶ್​ ಅಲಿಯಾಸ್​ ಮಾದ ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೊಲೀಸರು 70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಸಿಎಂ ಕುರ್ಚಿ ಕೈ ತಪ್ಪುತ್ತಾ ಸಿದ್ದರಾಮಯ್ಯಗೆ? ರಾಷ್ಟ್ರ ರಾಜಕಾರಣಕ್ಕೆ ಟಗರು ಎಂಟ್ರಿ!

ಈ ಕಳ್ಳರ ಪೈಕಿ ಗುರುಪ್ರಸಾದ್​ ಎಂಬಾತನೇ ಈ ಎಲ್ಲಾ ಕಳ್ಳತನಗಳ ಮಾಸ್ಟರ್​ಮೈಂಡ್​. ಪತ್ನಿಯ ಎದುರು ತಾನು ಶ್ರೀಮಂತ ಎಂದು ತೋರಿಸಿಕೊಳ್ಳುವ ಹುಚ್ಚು. ಇದೇ ಚಟ ಈತನನ್ನು ಕಳ್ಳತನದ ಹಾದಿಗೆ ದೂಡಿತ್ತು. ಉಳಿದ ಯುವಕರೊಂದಿಗೆ ಗ್ಯಾಂಗ್​ ಕಟ್ಟಿದ್ದ ಈತ ಶ್ರೀಮಂತನಾಗುವ ಸುಲಭ ಮಾರ್ಗ ಎಂಬಂತೆ ಸರಗಳ್ಳತನದ ಕೆಲಸಕ್ಕೆ ಇಳಿದಿದ್ದ ಎನ್ನಲಾಗಿದೆ.
ಒಂಟಿ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ ಈ ಗ್ಯಾಂಗ್​, ಚಿನ್ನದ ಸರ ಎಗರಿಸಿ ಎಸ್ಕೇಪ್​ ಆಗುತ್ತಿತ್ತು. ಇದೇ ಹಣದಲ್ಲಿ ಶೋಕಿ ಮಾಡಿಕೊಂಡು ಹಾಯಾಗಿದ್ದ ಗುರುಪ್ರಸಾದ್​ & ಗ್ಯಾಂಗ್​ಗೆ ಪೊಲೀಸರು ಇದೀಗ ಖೆಡ್ಡಾ ತೋಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಚ್ 30ರಂದು ಕಿರುಗಾವಲು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ವಿಶೇಷ ತಂಡ ರಚಿಸಿ ಶೋಧ ಕಾರ್ಯಕ್ಕೆ ಇಳಿದಿದ್ದರು. ಕೊನೆಗೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸರು 475 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್​ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಮೇಲೆ ವಿವಿಧ ಠಾಣೆಗಳಲ್ಲಿ ಒಟ್ಟೂ 16 ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.

Exit mobile version