ಬ್ರಹ್ಮಾವರ : ಹೆತ್ತು ಹೊತ್ತು ಸಾಕಿ ಸಲಹಿದ್ದ ಮಗನೇ ಇದೀಗ, ಹೆತ್ತವರನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಗಾಂಧಿನಗರದಲ್ಲಿ ನಡೆದಿದೆ.
ಜಾಹೀದ್ ಆಲಿ ( 31 ವರ್ಷ) ಎಂಬಾತನೇ ಹೆತ್ತವರು ಕೊಲೆಗೈದ ಆರೋಪಿ. ಕೋಪದಲ್ಲಿ ನಿನ್ನೆ ತಡರಾತ್ರಿ ಜಾಹೀದ್ ಆಲಿ ಸುತ್ತಿಗೆಯಿಂದ ತನ್ನ ತಂದೆ, ತಾಯಿಯನ್ನು ಹತ್ಯೆಗೈದಿದ್ದಾನೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ.