ಸಿಎಂ ಪೀಠಕ್ಕೆ ಶಿರಬಾಗಿ ನಮಸ್ಕರಿಸಿದ ಡಿಕೆ ಶಿವಕುಮಾರ್

ಡಿ.ಕೆ. ಶಿವಕುಮಾರ್ ಅವರು, ವಿಧಾನಸಭೆಯ ಹೊಸ್ತಿಲನ್ನು ಸ್ಪರ್ಶಿಸಿ ಶಿರಬಾಗಿ ನಮಸ್ಕರಿಸಿದರು.

By Suma G | ಸುಮಾ ಜಿ.

1 min read

WhatsAppPost
CM DK Shivakumar
Photo: Media Houses

ಮುಂಗಾರು ಅಧಿವೇಶನ ಆರಂಭ: ಸಿಎಂ ಪೀಠಕ್ಕೆ ಶಿರಬಾಗಿ ನಮಸ್ಕರಿಸಿದ ಡಿ.ಕೆ. ಶಿವಕುಮಾರ್

ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಾರಂಭವಾದ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ವಿಧಾನಸಭೆಯ ಹೊಸ್ತಿಲಿಗೆ ಹಾಗೂ ಮುಖ್ಯಮಂತ್ರಿಗಳ ಪೀಠಕ್ಕೆ ಶಿರಬಾಗಿ ನಮಸ್ಕರಿಸಿದರು.

ಗೌರವ ನಮನ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಧಾನಸೌಧದಲ್ಲಿ ಆರಂಭವಾದ ಶಾಸನಸಭೆಯ ಅಧಿವೇಶನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ವಿಧಾನಸಭೆಯ ಹೊಸ್ತಿಲನ್ನು ಸ್ಪರ್ಶಿಸಿ ಶಿರಬಾಗಿ ನಮಸ್ಕರಿಸಿದರು. ನಂತರ ಮುಖ್ಯಮಂತ್ರಿಗಳ ಆಸನದ (CM Chair) ಕಡೆಗೆ ಮುಖ ಮಾಡಿ ಗೌರವ ಸಲ್ಲಿಸಿದರು. ಯಾರೇ ಮುಖ್ಯಮಂತ್ರಿಯಾಗಲಿ ಎಲ್ಲರಿಗೂ ಸಿಎಂ ಆಸನ ಹಾಗೂ ಅಧಿವೇಶನಗಳ ಬಗ್ಗೆ ಗೌರವ ಇದ್ದೇ ಇರುತ್ತದೆ. ಆದರೆ ಪ್ರತಿ ಬಾರಿಯೂ ನಾಯಕರ ಈ ನಡೆ ಜನತೆಗೆ ಇಷ್ಟವಾಗುತ್ತದೆ. ಈ ಒಂದು ಫೋಟೋ ಇದೀಗ ಸಾಕಷ್ಟು ಕಡೆ ವೈರಲ್‌ ಕೂಡ ಆಗುತ್ತಿದೆ.

ಮೊದಲ ಅಧಿವೇಶನ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ಇದು ಮೊದಲ ವಿಧಾನಮಂಡಲ ಅಧಿವೇಶನವಾಗಿದೆ.

ದಿನದ ಕಲಾಪ ಆರಂಭದಲ್ಲಿ ಅವರು ಪ್ರತಿಪಕ್ಷದ ನಾಯಕರು ಹಾಗೂ ಇತರ ಶಾಸಕರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.

Topics

ಸಂಬಂಧಿತ ಸುದ್ದಿಗಳು