ಕರ್ನಾಟಕದಲ್ಲಿ ‘ಬಿಸಿ ರಾತ್ರಿ’ಗಳ ಭೀತಿ: 30 ವರ್ಷಗಳಲ್ಲೇ ದಾಖಲೆ ಬರೆದ ತಾಪಮಾನ; ಈ ಜಿಲ್ಲೆಗಳಿಗೆ ಉಷ್ಣಾಘಾತದ ಎಚ್ಚರಿಕೆ!

ಕರ್ನಾಟಕದಲ್ಲಿ ವರುಣನ ಅಬ್ಬರದ ನಡುವೆಯೂ ಬೆವರಳಿಸುತ್ತಿದೆ ಸೆಖೆ: ಹಗಲಿಗಿಂತ ರಾತ್ರಿಯೇ ಹೆಚ್ಚು ಅಪಾಯಕಾರಿ! 3 ದಶಕಗಳ ದಾಖಲೆ ಬ್ರೇಕ್.

ಬೆಂಗಳೂರು: ರಾಜ್ಯದಲ್ಲಿ ಹವಾಮಾನ ವೈಪರೀತ್ಯದ ಆಟ ಶುರುವಾಗಿದೆ. ಒಂದೆಡೆ ಮಳೆಯ ಸಿಂಚನವಾಗುತ್ತಿದ್ದರೆ, ಮತ್ತೊಂದೆಡೆ ತಾಪಮಾನವು ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸುತ್ತಿದೆ. ಕಳೆದ ಮೂರು ದಶಕಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ‘ಬಿಸಿ ರಾತ್ರಿ’ಗಳ (Hot Nights) ಅನುಭವವಾಗುತ್ತಿದ್ದು, ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲು ಶುರು ಮಾಡಿದೆ.

ರಾಜ್ಯದ ಶೇ. 93ರಷ್ಟು ಜಿಲ್ಲೆಗಳಲ್ಲಿ ಉಷ್ಣಾಘಾತದ ಭೀತಿ!

ಇತ್ತೀಚಿನ ಹವಾಮಾನ ವರದಿಗಳ ಪ್ರಕಾರ, ಕರ್ನಾಟಕದ ಶೇಕಡಾ 93ರಷ್ಟು ಜಿಲ್ಲೆಗಳು ಉಷ್ಣಾಘಾತದ (Heatwave) ಅಪಾಯದ ಅಂಚಿನಲ್ಲಿವೆ. ಹಗಲಿನಲ್ಲಿ ಸೂರ್ಯನ ಶಾಖಕ್ಕೆ ತತ್ತರಿಸುವ ಜನರಿಗೆ ರಾತ್ರಿಯ ವೇಳೆಯೂ ತಂಪಾದ ಗಾಳಿ ಸಿಗುತ್ತಿಲ್ಲ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸದ್ಯ ‘ರೆಡ್ ಝೋನ್’ ನಲ್ಲಿದ್ದು, ಇಲ್ಲಿನ ಜನಜೀವನ ತತ್ತರಿಸಿ ಹೋಗಿದೆ.

Also Read : ಕರಾವಳಿಯಲ್ಲಿ ವರುಣನ ಅಟ್ಟಹಾಸ: ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ದಿನ ‘ಎಲ್ಲೋ ಅಲರ್ಟ್’ ಘೋಷಣೆ

ಕೇವಲ ಕರಾವಳಿ ಮಾತ್ರವಲ್ಲದೆ ಮಲೆನಾಡು, ಸಿಲಿಕಾನ್ ಸಿಟಿ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಂತಹ ನಗರ ಪ್ರದೇಶಗಳಲ್ಲಿಯೂ ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಾಂಕ್ರೀಟ್ ಕಾಡುಗಳ ಹೆಚ್ಚಳ ಮತ್ತು ಹಸಿರು ಕಡಿಮೆಯಾಗಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಉಷ್ಣಾಘಾತ – ಯಾವ ಜಿಲ್ಲೆಗಳು ಯಾವ ವಲಯದಲ್ಲಿವೆ ?

ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಹೀಟ್ ಸ್ಟ್ರೋಕ್ ಎಚ್ಚರಿಕೆ

ರಾತ್ರಿ ವೇಳೆ ದೇಹವು ತಂಪಾಗಲು ಅವಕಾಶ ಸಿಗದಿದ್ದರೆ ಅದು ‘ಹೀಟ್ ಸ್ಟ್ರೋಕ್’ಗೆ ದಾರಿ ಮಾಡಿಕೊಡುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ನಿದ್ರಾಹೀನತೆ, ಅತಿಯಾದ ಬೆವರುವಿಕೆ, ಸುಸ್ತು ಮತ್ತು ರಕ್ತದೊತ್ತಡದಲ್ಲಿ ಏರಿಳಿತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಈ ಹವಾಮಾನ ಬದಲಾವಣೆಯಿಂದ ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದಾರೆ.

Also Read : ನಿಮ್ಮ ಮಗು ಸೇಫ್ ಆಗಿದೆಯೇ ? ಬೆಂಗಳೂರಲ್ಲಿ ಕುಡಿದು ಶಾಲಾ ಬಸ್ ಚಲಾಯಿಸಿದ 59 ಡ್ರೈವರ್‌ ಅರೆಸ್ಟ್‌

ಹೀಟ್ ಸ್ಟ್ರೋಕ್ ಎಚ್ಚರಿಕೆ : ಮುಂಜಾಗ್ರತಾ ಕ್ರಮಗಳು

ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಪ್ರತಿಯೊಬ್ಬರೂ ಜಾಗರೂಕರಾಗಿರುವುದು ಇಂದಿನ ಅಗತ್ಯವಾಗಿದೆ.

karnataka temperature rise red zone districts heat wave alert health risks

Exit mobile version