ಚಿಕ್ಕಮಗಳೂರು: ಮಾನವ ಸಂಕುಲಕ್ಕೆ ಮಹಾಮಾರಿಯಾಗಿ ಪರಿಣಮಿಸಿರುವ ಕೊರೋನಾ ಎರಡನೇ ಅಲೆ ಅಬ್ಬರ ಹೆಚ್ಚುತ್ತಲೇ. ವಾಕ್ಸಿನ್ ಇನ್ನೂ ಜನಸಾಮಾನ್ಯರಿಗೆ ಲಭ್ಯವಾಗದೇ ಮೂರನೇ ಅಲೆಯ ಭಯವೂ ಎದುರಾಗಿದೆ. ಈ ಮಧ್ಯೆ ಮಾರಕ ಕೊರೋನಾಗೆ ಮನೆಯಂಗಳದ ಪಾರಿಜಾತ ಉತ್ತರ ಎಂಬ ಸಂಶೋಧನೆಯೊಂದು ಬಹಿರಂಗಗೊಂಡಿದೆ.
ಚಿಕ್ಕಮಗಳೂರು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ, ಮನೆಯಂಗಳದ ಹೂವಿನ ಗಿಡ ಪಾರಿಜಾತ ಮಾರಕ ಕರೋನಾಕ್ಕೆ ಮದ್ದು ಎಂದಿದ್ದು, ಕಷಾಯ ಮಾಡಿ ಕುಡಿಯುವ ವಿಧಾನವನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ಎಲ್ಲರೂ ಇದನ್ನು ಬಳಸುವಂತೆ ಸೂಚಿಸಿದ್ದಾರೆ.
ಕೊರೋನಾ ಮಹಾಮಾರಿಗೆ ಪಾರಿಜಾತದ ಕಷಾಯ ಮದ್ದು. 5 ಪಾರಿಜಾತದ ಎಲೆಯನ್ನು , ಕಾಳುಮೆಣಸು,ಶುಂಠಿ ಕುದಿಸಿ ಅದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಕೊರೋನಾದಿಂದ ಮುಕ್ತರಾಗಬಹುದು ಎಂದು ವಿನಯ್ ಗುರೂಜಿ ಹೇಳಿದ್ದಾರೆ.
ಇದೊಂದು ಆರ್ಯುವೇದ ಔಷಧಿಯಾಗಿದ್ದು, ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಕೊರೋನಾವನ್ನು ನಿಯಂತ್ರಿಸುತ್ತದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.
ಈಗಾಗಲೇ ವಿಶ್ವದಾದ್ಯಂತ ಕೊರೋನಾಕ್ಕೆ ಔಷಧಿ ಕಂಡುಹಿಡಿಯುವ ಪ್ರಯತ್ನನಡೆದಿದ್ದು, ಈಗಾಗಲೇ ಕೋವಾಕ್ಸಿನ್, ಕೋವಿಶಿಲ್ಡ್ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ.
ಇವೆಲ್ಲದರ ಮಧ್ಯೆ ಮನೆಯಂಗಳದ ಸಸ್ಯವನ್ನೇ ಬಳಸಿಕೊಂಡು ಮಾರಕ ರೋಗವನ್ನು ತಡೆಯುವ ವಿಧಾನವನ್ನು ವಿನಯ್ ಗುರೂಜಿ ಸೂಚಿಸಿದ್ದಾರೆ.
Comments are closed.