ಸೋಮವಾರ, ಜೂನ್ 16, 2025
HomeCinemaಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ….! ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾದ ಜಯಂತಿ…!!

ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ….! ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾದ ಜಯಂತಿ…!!

- Advertisement -

ಕನ್ನಡ ಚಿತ್ರರಂಗದ ಅಭಿನಯ ಶಾರದೆ ಖ್ಯಾತಿಯ ನಟಿ ಜಯಂತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ ಜಯಂತಿಯವರ ಆಸೆಯಂತೆ ಅವರ ಕಣ್ಣುಗಳನ್ನು ಡಾ.ರಾಜ್ ಐ ಬ್ಯಾಂಕ್ ಗೆ ಡೊನೇಟ್ ಮಾಡಲಾಗಿದೆ.

Jayanthi1 1

ಕತ್ತಲೆಯಲ್ಲಿ ಬದುಕು ನಡೆಸುವ ಅಂಧರಿಗೆ ನೆರವಾಗುವುದು ಪುಣ್ಯದ ಕೆಲಸ. ಹೀಗಾಗಿ ಮರಣಾನಂತರ ನೇತ್ರದಾನ ಮಾಡಿ ಎಂದು ಡಾ.ರಾಜ್ ಕುಮಾರ್ ಕರೆ ನೀಡಿದ್ದರು. ಅಷ್ಟೇ ಅಲ್ಲ ತಾವು ಕೂಡ ನೇತ್ರದಾನ ಮಾಡಿದ್ದರು.

Jayanthi2 1

ಡಾ.ರಾಜ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಕೂಡ ಡಾ.ರಾಜ್ ಆದರ್ಶವನ್ನೇ ಪಾಲಿಸಿದ್ದು, ತಮ್ಮ ನೇತ್ರದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿರುವ ಡಾ.ರಾಜ್ ಕುಮಾರ್ ಐ ಬ್ಯಾಂಕ್ ಗೆ ದಾನ ಮಾಡಲಾಗಿದೆ.

Jayanthi3 1

ವಯೋಸಹಜ ಕಾಯಿಲೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಜಯಂತಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸದಾ ಕೃತಕ ಆಮ್ಲಜನಕದ ಸಹಾಯದಿಂದಲೇ ಜಯಂತಿಯವರು ಉಸಿರಾಡುತ್ತಿದ್ದರು. ಜಯಂತಿಯವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

Jayanthi5 1

ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಜಯಂತಿಯವರ ಅಂತ್ಯಸಂಸ್ಕಾರ ನಡೆಯಿತು. ಪುತ್ರ ಕೃಷ್ಣಕುಮಾರ್ ಜಯಂತಿಯವರ ಅಂತಿಮ ವಿಧಿವಿಧಾನ ನಡೆಸಿದರು.

RELATED ARTICLES

Most Popular