ಬೆಂಗಳೂರು : ಕನ್ನಡ ಆಂಕರ್ ಅನುಶ್ರೀ ವಿರುದ್ದ ಗಂಭೀರ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ದ ಇದೀಗ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ, ಕನ್ನಡ ವಿರೋಧಿ, ಸ್ನೇಹಿತನಿಗೆ ಮೋಸ ಮಾಡಿರುವ ಸಂಬರಗಿ ಓರ್ವ ಮೋಸಗಾರ ಎಂದೆಲ್ಲಾ ಆರೋಪಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ದ ಸಾಕಷ್ಟು ಆರೋಪಗಳನ್ನು ಮಾಡಿರುವ ಚಕ್ರವರ್ತಿ ಚಂದ್ರಚೂಡ್, ಬಿಜೆಪಿ ಪಕ್ಷದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಲುವಾಗಿ ಪ್ರಚಾರದ ಗಿಮಿಕ್ ನಡೆಸುತ್ತಿದ್ದಾರೆ. ಸಂಬರಗಿಯ ಹೋರಾಟೆಲ್ಲಾ ಬರಿ ಸುಳ್ಳು, ಯಾವುದೇ ಕೇಸ್ನಲ್ಲಿಯೂ ಸಂಬರಗಿ ಇದುವರೆಗೆ ಯಾವುದೇ ಸಾಕ್ಷ್ಯವನ್ನು ಕೊಟ್ಟಿಲ್ಲ. ರಾಗಿಣಿ, ಸಂಜನಾ ಹಾಗೂ ಜಮೀರ್ ವಿರುದ್ದ ಆರೋಪಿಸಿದ್ದರೂ ಸಾಕ್ಷ್ಯ ನೀಡದೆ ಪೊಲೀಸರ ಬಳಿಯಲ್ಲಿ ಕೇವಲ ಮಾತನಾಡುತ್ತಲೇ ಕಾಲ ಕಳೆದಿದ್ದಾನೆ. ಸ್ನೇಹಿತನಿಗೆ ಕಾರು ಕೊಡಿಸುವುದಾಗಿ ಹೇಳಿದ್ದ ಸಂಬರಗಿ ಕಾರನ್ನು ತಾನೇ ಇಟ್ಟುಕೊಳ್ಳುವ ಮೂಲಕ ಸ್ನೇಹಿತನಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಶಾಂತ್ ಸಂಬರಗಿ ಓರ್ವ ಮೋಸಗಾರ. ಮೀಟೂ ಕೇಸ್ನಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆದ. ಅರ್ಜು ಸರ್ಜಾ ಪರವಾಗಿ ಮಾತನಾಡಿದ. ಇದುವರೆಗೂ ಒಂದೇ ಒಂದು ಸಾಕ್ಷ್ಯವನ್ನೂ ಕೊಟ್ಟಿಲ್ಲ. ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಲು ಕ್ರೈಸ್ತ ಮಿಶನರಿ ಇಂದ ಹಣ ಬರ್ತಿತ್ತು. ಹಾಗಾಗಿ ಅವನು ಆರೋಪ ಮಾಡಿದ್ದ. ರಾತ್ರೋ ರಾತ್ರಿ ರೇಂಜ್ ರೋವರ್ ಕಾರು ಪಡೆದು ಸ್ನೇಹಿತನಿಗೆ ಮೋಸ ಮಾಡಿದ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಬಿಗ್ಬಾಸ್ನಲ್ಲಿ ಆರಂಭಗೊಂಡಿದ್ದ ಚಂದ್ರಚೂಡ್ ಹಾಗೂ ಸಂಬರಗಿ ನಡುವಿನ ಜಗಳ ಇದೀಗ ತಾರಕಕ್ಕೇರಿದೆ. ಪ್ರಶಾಂತ್ ಸಂಬರಗಿ ವಿರುದ್ದ ಸಾಕಷ್ಟು ಆರೋಪಗಳನ್ನು ಚಂದ್ರಚೂಡ್ ಮಾಡಿದ್ದಾರೆ.
ಇದನ್ನೂ ಓದಿ : ಒಂದೇ ದಿನ ಚಕ್ರವರ್ತಿ ಎರಡೆರಡು ಸಿನಿಮಾ ಅನೌನ್ಸ್….! ಮಧ್ಯಂತರದಲ್ಲಿ ಗನ್ ಹಿಡಿದ ಚಂದ್ರಚೂಡ್….!!
ಇದನ್ನೂ ಓದಿ : ವಾಟ್ಸಾಪ್ ನಲ್ಲಿ ಮಾನಹಾನಿ : ಪ್ರಶಾಂತ್ ಸಂಬರಗಿ ವಿರುದ್ದ FIR ದಾಖಲು
(Chakravarthy Chandrachud Aligation with Prashanth Sambargi )