ಹೊಸ ವರ್ಷ ಶುರುವಾಗಿದ್ದೇ ಆಗಿದ್ದು, ಸಾಲು ಸಾಲು ಸಿನಿಮಾಗಳು ರಿಲೀಸ್ ಅಗುತ್ತಿವೆ. ಅದರಲ್ಲೂ ಸ್ಟಾರ್ ಸಿನಿಮಾ ಹವಾ ಕ್ರಿಯೇಟ್ ಮಾಡಲು ಒಬ್ಬರಾದ ಮೇಲೋಬ್ಬರು ಡೇಟ್ ಅನೌನ್ಸ್ ಮಾಡುತ್ತಿದ್ದಾರೆ. ಲೇಟ್ ಆದ್ರೂ ಲೇಟೇಸ್ಟ್ ಆಗಿ ಎಂಟ್ರಿ ಕೊಡುತ್ತಿರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳ ತಂಡವೊಂದು ಹಾಡು ಕ್ರಿಯೇಟ್ ಮಾಡಿದ್ದಾರೆ.
ಸುಧೀರ್ ಶಾಸ್ತ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡಿಗೆ ಚಂದನ್ ಧ್ವನಿ ನೀಡಿದ್ದಾರೆ. ಸಿ ವೇದ ಮೂರ್ತಿ ಬಂಡವಾಳ ಹಾಕಿರುವ ಈ ಹಾಡನ್ನು ಮೀಡಿಯಾ ಹಂಟರ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ದರ್ಶನ್ ರಾಬರ್ಟ್, ಸುದೀಪ್ ಕೋಟಿಗೊಬ್ಬ 3, ಧ್ರುವ ದರ್ಜಾ ಪೊಗರು, ಯಶ್ ಕೆಜಿಎಫ್-2, ಪುನೀತ್ ಯುವರತ್ನ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಾಡಿನಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿರುವ ಸಂತಸದಲ್ಲಿರುವ ಅಭಿಮಾನಿಗಳಿಗೆ ಈ ಹಾಡು ಖಂಡಿತವಾಗಿದೆ. ವಿಭಿನ್ನ ರೀತಿಯ ಹಾಡು ಇದೀಗ ಸಾಮಾಜಿಕ ಜಾಲತಾದಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದಿಂದ ಯಾರೆಲ್ಲಾ ಸ್ಟಾರ್ ನಟರು ಯುವಕರ ಈ ಹಾಡನ್ನು ಮೆಚ್ಚಿಕೊಳ್ಳಲ್ಲಿದ್ದಾರೆ ನೋಡಬೇಕಿದೆ.
ಕೊರೊನಾ ಭಯ ಬಿಟ್ಟು ಜನರನ್ನು ಸಿನಿಮಾ ಥಿಯೇಟರ್ ಕರೆತರುವ ಉದ್ದೇಶದಿಂದಲೇ ಈ ಹಾಡನ್ನು ರಚಿಸಲಾಗಿದೆ. ಕೊರೊನ ಭಯವನ್ನ ಬಿಟ್ಟು ಸಿನಿಮಾ ವನ್ನ ಥಿಯೇಟರ್ ನಲ್ಲೆ ನೋಡಿ ಕನ್ನಡ ಸಿನಿಮಾವನ್ನ ಬೆಳಸಿ ಅನ್ನುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
( Ba Guru Kannada Cinema Nodona Kannada Album Song Relase)