ತುಮಕೂರು : Minister BC Nagesh : ಶಿಕ್ಷಣ ಇಲಾಖೆಯಲ್ಲಿ ಕಮೀಷನ್ ಆರೋಪ ಮಾಡಿ ರುಪ್ಸಾ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದೆ. ಆದ್ರೆ ಈ ದೂರು ನೀಡುವ ಮೊದಲು ರುಪ್ಸಾ ಯಾರಿಗಾದರೂ ದೂರು ಕೊಟ್ಟಿದೆಯಾ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (Minister BC Nagesh is angry) ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ಮಂತ್ರಿಯಾದಾಗಿನಿಂದ ಯಾವುದೇ ಆರೋಪ ಬಂದ್ರು ಅದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇವೆ. ಅನೇಕ ಸುಧಾರಣೆಗಳನ್ನು ತಂದಂತಹ ಇಲಾಖೆ ಅಂದ್ರೆ ಅದು ಶಿಕ್ಷಣ ಇಲಾಖೆ. ಈಗ ಆಧಾರ ರಹಿತವಾಗಿ ಆರೋಪ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಾಳೆ ನಾಡಿದ್ದು ನಮ್ಮ ಅಧಿಕಾರಿಗಳು ಆಧಾರ ಸಮೇತ ಪೂರ್ಣ ವಿವರಗಳನ್ನು ಕೊಡ್ತಾರೆ ಎಂದು ಸಚಿವ ನಾಗೇಶ್ ಹೇಳಿದ್ರು.
ನಮ್ಮ ಇಲಾಖೆಯ ಅಧಿಕಾರಿಗಳು ಕಮೀಷನ್ ಕೇಳಿದ್ದರು ಎಂದು ರುಪ್ಸಾದವರು ಎಲ್ಲಾದರೂ ಕಂಪ್ಲೇಂಟ್ ಕೊಟ್ಟಿದ್ದಾರಾ, ನನ್ನ ಕೈಯಲ್ಲಿ ಕೊಟ್ಟಿದ್ದಾರ ಎಂದು ಪ್ರಶ್ನಿಸಿದ ಸಚಿವರು ನನ್ನ ಕೈಯಲ್ಲಿ ಬೇಡ ಬಿ.ಇ.ಓ ಕಮೀಷನ್ ಕೇಳಿದ್ರೆ ಡಿ.ಡಿ.ಪಿ.ಐ ಕೈಯಲ್ಲಿ ಕೊಡಲಿ. ಡಿ.ಡಿ.ಪಿ.ಐ ಕಮೀಷನ್ ಕೇಳಿದ್ರೆ ಕಮೀಷನರ್ ಕೈಯಲ್ಲಿ ಕೊಡಲಿ. ಈ ರೀತಿ ಕೊಟ್ಟಿರುವ ಯಾವುದಾದರೂ ದೂರು ಇದೆಯಾ ಎಂದು ನಾಗೇಶ್ ಪ್ರಶ್ನಿಸಿದರು.
ಈ ರೀತಿ ದೂರು ನೀಡಿಯೂ ನಾಗೇಶ್ ಕ್ರಮ ಕೈಗೊಂಡಿಲ್ಲ ಅಂದ್ರೆ ಆಗ ಆರೋಪ ಮಾಡುವುದಕ್ಕೆ ಒಂದು ಅರ್ಥ ಇದೆ. ಆದ್ರೆ ಯಾವುದೇ ಆಧಾರ ರಹಿತವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Congress workers’ outrage :24 ಗಂಟೆಯೊಳಗೆ ಚಿರತೆ ಸೆರೆ ಹಿಡಿಯಿರಿ: ಇಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ- ಬೆಳಗಾವಿಯಲ್ಲಿ ಕೈ ಕಾರ್ಯಕರ್ತೆಯರ ಆಕ್ರೋಶ
ಬೆಳಗಾವಿ : Congress workers’ outrage : ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅವಿತಿರುವ ಚಿರತೆಯನ್ನು ಹಿಡಿಯೋದಕ್ಕೆ ಇನ್ನು ಸಾಧ್ಯ ಆಗಿಲ್ಲ. ಈ ಚಾಲಾಕಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಇಂದು 24ನೇ ದಿನಕ್ಕೆ ಕಾಲಿಟ್ಟಿದೆ. ಪದೇ ಪದೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿರುವ ಚಿರತೆ ಸೆರೆ ಹಿಡಿಯಲು ಆನೆಯನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿನ್ನೆ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಇಂದು ಸಹ ಮಳೆ ಕಾರಣಕ್ಕೆ ಕೇವಲ ನೂರು ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯಿತು.
ಬೆಳಗಾವಿ ಜನರ ನಿದ್ದೆಗೆಡಿಸಿರುವ ಈ ಚಿರತೆಯನ್ನು ಹಿಡಿಯುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುವಂತಾಗಿದೆ. ಚಿರತೆಯ ಹೆಜ್ಜೆ ಗುರುತು ಆಧರಿಸಿ ಶೋಧ ಕಾರ್ಯವನ್ನು ಇಂದು ಮುಂದುವರಿಸಲಾಯಿತು. ಗಾಲ್ಫ್ ಮೈದಾನದ ಒಳಗೆ ಮತ್ತು ಹೊರಗೆ ಸಿಬ್ಬಂದಿ ನಿರಂತರವಾಗಿ ಗಸ್ತು ಹೊಡೆಯುತ್ತಿದ್ದು, ಅರಣ್ಯ ಇಲಾಖೆಯ ಸಿ.ಸಿ.ಎಫ್ ಮಂಜುನಾಥ, ಡಿ.ಎಫ್.ಒ ಅಂಥೋನಿ, ಎ.ಸಿ.ಎಸಫ್ ಮಲ್ಲಿನಾಥ ಕುಸನಾಳ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಟ್ರ್ಯಾಪ್ ಕ್ಯಾಮೆರಾ, ಬಲೆ ಹಾಕಿ, ಜೆ.ಸಿ.ಬಿ ಗಳನ್ನು ಬಳಸಿ ಕಾರ್ಯಾಚರಣೆ ಮುಂದುವರಿಸಿದ್ದು ಎರಡು ಆನೆಗಳನ್ನು ಬಳಸಿಕೊಳ್ಳಲಾಯಿತು.
ಇನ್ನು ಇಪ್ಪತ್ತನಾಲ್ಕು ದಿನವಾದರೂ ಚಿರತೆ ಹಿಡಿಯಲು ಸಾಧ್ಯವಾಗದಿರುವುದಕ್ಕೆ ಕೈ ಕಾರ್ಯಕರ್ತೆಯರು ಇಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆಯಿತು. ಕಾಂಗ್ರೆಸ್ ಕಾರ್ಯಕರ್ತೆ ಆಯೀಷಾ ಸನದಿ ನೇತ್ರತ್ವದಲ್ಲಿ ಗಾಲ್ಫ್ ಮೈದಾನದ ಬಳಿ ಕೈಯಲ್ಲಿ ಕೋಲು ಹಿಡಿದುಕೊಂಡು ಕೈ ಕಾರ್ಯಕರ್ತೆಯರು ಬಂದರು. ಇಪ್ಪತ್ತನಾಲ್ಕು ದಿನ ಕಳೆದರು ಒಂದು ಚಿರತೆಯನ್ನು ಹಿಡಿಯುವುದಕ್ಕೆ ಆಗಿಲ್ಲ ಉಮೇಶ್ ಕತ್ತಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಸತೀಶ್ ಜಾರಕಿಹೊಳಿಯವರನ್ನು ಸೋಲಿಸುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳುತ್ತಾರೆ, ಆದ್ರೆ ಒಂದು ಚಿರತೆ ಹಿಡಿಯುವುದಕ್ಕೆ ಸಾಧ್ಯ ಆಗದವರು ಸತೀಶ್ ಜಾರಕಿಹೊಳಿಯವರನ್ನು ಸೋಲಿಸುತ್ತಾರ ಎಂದು ವ್ಯಂಗ್ಯವಾಡಿದರು. ಸಚಿವ ಉಮೇಶ್ ಕತ್ತಿ ಒಂದು ದಿನವಾದರೂ ಈ ಸ್ಥಳಕ್ಕೆ ಭೇಟಿ ನೀಡಿದ್ರಾ ಎಂದು ಪ್ರಶ್ನಿಸಿದ ಕೈ ಕಾರ್ಯಕರ್ತೆಯರು ಸತೀಶ್ ಜಾರಕಿಹೊಳಿ ಸಚಿವರಾಗಿದ್ರೆ ಇಲ್ಲೆ ಇರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನುಳಿದ ಇಪ್ಪತ್ತನಾಲ್ಕು ಗಂಟೆಯಲ್ಲಿ ಚಿರತೆ ಸೆರೆ ಹಿಡಿಯಲು ಸಾಧ್ಯ ಆಗದಿದ್ರೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.
ಇದನ್ನು ಓದಿ : POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್ ಆದ ಪತ್ನಿ
ಇದನ್ನೂ ಓದಿ :Congress to elect new president : ಎಐಸಿಸಿ ಅಧ್ಯಕ್ಷರ ಆಯ್ಕೆಗೆ ದಿನಾಂಕ ಫಿಕ್ಸ್ : ಅ.17ರಂದು ಚುನಾವಣೆ
Minister BC Nagesh is angry against those who have accused the education department