ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ :06-05-2020

ನಿತ್ಯಭವಿಷ್ಯ :06-05-2020

- Advertisement -

ಮೇಷರಾಶಿ
ಸಾಂಸಾರಿಕ ಚಿಂತೆ ಮನೋವ್ಯಾಕುಲಕ್ಕೆ ಕಾರಣವಾಗದಂತೆ ಶ್ರೀದೇವರನ್ನು ಪ್ರಾರ್ಥಿಸಿರಿ. ಉದ್ಯೋಗದಲ್ಲಿ ಅಡೆತಡೆಗಳು ಆತಂಕಕ್ಕೆ ಕಾರಣವಾದೀತು. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಸಮಾಧಾನ ತರಲಿದೆ. ಅನಗತ್ಯ ನಾನಾ ಆಲೋಚನೆ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್ ನವರಿಗೆ ಅನುಕೂಲ, ಉದ್ಯಮಿಗಳಿಗೆ ಸುದಿನ, ಹಣಕಾಸು ವಿಚಾರದಲ್ಲಿ ಚೇತರಿಕೆ, ಈ ದಿನ ಮಿಶ್ರ ಫಲ ಯೋಗ.

ವೃಷಭರಾಶಿ
ಉದ್ಯೋಗದಲ್ಲಿ ಕಿರಿಕಿರಿ, ಬೆಲೆ ಬಾಳುವ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಕಾರ್ಮಿಕ ವರ್ಗದವರಿಗೆ ಆರ್ಥಿಕವಾಗಿ ಉತ್ತಮ ಫ‌ಲವಿರುತ್ತದೆ. ಆಗಾಗ ಖರ್ಚುವೆಚ್ಚಗಳಿಂದ ಆತಂಕ ತಂದೀತು. ರಿಪೇರಿ ಕೆಲಸಕ್ಕಾಗಿ ಧನವ್ಯಯವಾಗಲಿದೆ. ಸಮ್ಮತವಲ್ಲದ ಆಚಾರ ವಿಚಾರದಲ್ಲಿ ಜಾಗ್ರತೆ ವಹಿಸಿರಿ. ಸಹೋದರರಿಂದ ಸಹಾಯ ಲಭಿಸುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಪ್ರಯತ್ನ.

ಮಿಥುನರಾಶಿ
ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಆದಾಯ, ಅಧಿಕವಾದ ಹಣ ಖರ್ಚು, ಮಹಿಳೆಯರಿಗೆ ವೃತ್ತಿರಂಗದಲ್ಲಿ ಯಶೋ ಲಾಭವಿದೆ. ಯೋಗ್ಯವಯಸ್ಕರಿಗೆ ಕಂಕಣಬಲದ ಪ್ರಸ್ತಾವ ಬರುವುದು. ಮುಂದುವರಿಸಿಕೊಂಡು ಹೋಗಿರಿ. ಆರೋಗ್ಯದಲ್ಲಿ ಜಾಗ್ರತೆ ವಹಿಸುವುದು ಅಗತ್ಯವಿದೆ. ಮಾನಸಿಕ ನೆಮ್ಮದಿಗೆ ಭಂಗ, ಮನೆಯಲ್ಲಿ ಗೊಂದಲಮಯ ವಾತಾವರಣ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.

ಕಟಕರಾಶಿ
ಉದ್ಯೋಗದಲ್ಲಿ ಏಳಿಗೆ-ಬಡ್ತಿ, ಸಂಪಾದನೆಗಾಗಿ ಅಧಿಕ ತಿರುಗಾಟ, ವ್ಯಾಪಾರ ವ್ಯವಹಾರಗಳಲ್ಲಿ ಅನಾವಶ್ಯಕ ಖರ್ಚುಗಳು ಬಂದಾವು. ಕುಟುಂಬ ಸದಸ್ಯರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಬಂಧುಮಿತ್ರರ ಸಹಕಾರ ಮುನ್ನಡೆಗೆ ಸಾಧಕವಾಗಲಿದೆ. ಸರಕಾರಿ ಕೆಲಸದಲ್ಲಿ ಜಯ. ನಂಬಿದ ಜನರಿಂದ ಸಂಕಷ್ಟಕ್ಕೆ ಸಿಲುಕುವಿರಿ, ಕೌಟುಂಬಿಕ ಜೀವನದಲ್ಲಿ ಆಂತರಿಕ ಸಮಸ್ಯೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ.

ಸಿಂಹರಾಶಿ
ಕಾರ್ಯ ಪ್ರಗತಿಗಾಗಿ ನಿರಂತರ ಪ್ರಯತ್ನ, ಯತ್ನ ಕಾರ್ಯಗಳಲ್ಲಿ ವಿಳಂಬ, ತಾಳ್ಮೆ, ಸಮಾಧಾನ, ಧೈರ್ಯ ಪ್ರಯತ್ನ ಬಲದಿಂದ ಮುಂದುವರಿದಲ್ಲಿ ಹಿಡಿದ ಕೆಲಸದಲ್ಲಿ ಜಯ ಸಿಗಲಿದೆ. ಮಾತಿನಲ್ಲಿ ನಿಷ್ಠುರವಾಗದಂತೆ ಜಾಗ್ರೆತೆ ವಹಿಸಿರಿ. ವಿವಿಧಮೂಲದಿಂದ ಧನ ಪ್ರಾಪ್ತಿಯಾಗಲಿದೆ. ಬಂಧುಗಳೊಂದಿಗೆ ವೈಮನಸ್ಸು, ಹಿತ ಶತ್ರುಗಳ ಬಾಧೆ, ಆರೋಗ್ಯದ ಬಗ್ಗೆ ಎಚ್ಚರಿಕೆ, ಪರರಿಂದ ಅಲ್ಪ ಸಹಕಾರ.

ಕನ್ಯಾರಾಶಿ
ದೂರ ಪ್ರಯಾಣಕ್ಕೆ ಮನಸ್ಸು, ಸ್ತ್ರೀಯರಿಗೆ ಅನುಕೂಲ, ಇಲ್ಲ ಸಲ್ಲದ ಅಪವಾದ, ನಿರುದ್ಯೋಗಿಗಳು ಉತ್ತಮ ಉದ್ಯೋಗವನ್ನು ಹೊಂದಲಿದ್ದಾರೆ. ಅಧಿಕಾರಿ ವರ್ಗದವರಿಗೆ ಕಾರ್ಯಾನುಕೂಲಕ್ಕೆ ಸಾಧಕವಾದೀತು. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ವೃತ್ತಿಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ. ಅತೀ ಬುದ್ಧಿವಂತಿಕೆಯಿಂದ ಸಂಕಷ್ಟ, ಸೈಟ್, ಜಮೀನು ಖರೀದಿಗೆ ಆಲೋಚನೆ, ಹಣಕಾಸು ಸಮಸ್ಯೆ, ಸಾಲ ಬಾಧೆ.

ತುಲಾರಾಶಿ
ಹಿತ ಶತ್ರುಗಳಿಂದ ತೊಂದರೆ, ಕೃಷಿಯಲ್ಲಿ ಲಾಭ, ಮಿತ್ರರಿಂದ ಸಹಾಯ, ಕೂಡಿಟ್ಟ ಹಣ ನಾನಾ ರೀತಿಯಲ್ಲಿ ಖರ್ಚಾದೀತು. ಬಂಧು ಮಿತ್ರರ ಸಹಕಾರದಿಂದ ಕಾರ್ಯಸಾಧನೆ ಆಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಗೆ ಸಾಧಕವಾದ ವಾತಾವರಣವಿರುತ್ತದೆ. ಸದುಪಯೋಗಿಸಿದರೆ ಉತ್ತಮ. ಪ್ರಿಯ ಜನರ ಭೇಟಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಚಿಂತಿತ ಕೆಲಸಕಾರ್ಯಗಳು ಅಡೆತಡೆಗಳಿದ್ದರೂ ಕಾರ್ಯಸಾಧನೆಯಾಗಲಿದೆ. ಕಾಂಟ್ರಾಕ್ಟ್ ವೃತ್ತಿಯವರಿಗೆಆರ್ಥಿಕವಾಗಿ ಲಾಭವಿದೆ. ಭೂಖರೀದಿಗೆ ಮನಸ್ಸು ಮಾಡಬಹುದು. ನೆಂಟರ ಆಗಮನವಿದ್ದೀತು. ಸಾಲ ಮಾಡುವ ಪರಿಸ್ಥಿತಿ, ವಾಹನ ರಿಪೇರಿಯಿಂದ ಖರ್ಚು, ಚಂಚಲ ಮನಸ್ಸು, ಆತಂಕದ ವಾತಾವರಣ, ಸರಿಯಾದ ಸಮಯಕ್ಕೆ ಊಟ ಲಭಿಸುವುದಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಧನಸ್ಸುರಾಶಿ
ಸಂಪಾದನೆಗೆ ನಾನಾ ರೀತಿಯ ಕೆಲಸ ಮಾಡುವಿರಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸುಖ ಭೋಜನ ಪ್ರಾಪ್ತಿ, ತೀರ್ಥಯಾತ್ರೆಗೆ ಹೋಗಲು ಮನಸ್ಸು, ಕೆಲಸಕಾರ್ಯಗಳು ಯಥಾಪ್ರಕಾರ ಮುನ್ನಡೆಯಲಿವೆ. ಅನಿರೀಕ್ಷಿತ ಶುಭವಾರ್ತೆ ಸಂತಸ ತಂದೀತು. ದೇಹಾರೋಗ್ಯದಲ್ಲಿ ಜಾಗ್ರತೆ ವಹಿಸಿರಿ. ಉತ್ತಮ ಚಿಂತನೆಗಳು, ನಿರ್ಧಾರಗಳು ಸದ್ಯದಲ್ಲೇ ನೆರವೇರಲಿವೆ. ಗೃಹ, ಉದ್ಯೋಗ, ಸ್ಥಳ ಬದಲಾವಣೆ ಸಾಧ್ಯತೆ.

ಮಕರರಾಶಿ
ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ನಿಮಗೆ ಯಶಸ್ಸು ಇದೆ. ಆರ್ಥಿಕ ಸ್ಥಿತಿಯಲ್ಲಿ ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳಿಗೆ ವಿದ್ಯಾ ಲಾಭವಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಿಸಿರಿ. ಇಲ್ಲ ಸಲ್ಲದ ಅಪವಾದ, ಸ್ನೇಹಿತರಿಂದ ನಿಂದನೆ, ಗೌರವಕ್ಕೆ ಧಕ್ಕೆ, ಪರರಿಗೆ ವಂಚನೆ, ಆತ್ಮೀಯರ ವರ್ತನೆಯಿಂದ ವೈಮನಸ್ಸು, ನೀಚ ಜನರ ಸಹವಾಸದಿಂದ ಸಂಕಷ್ಟ.

ಕುಂಭರಾಶಿ
ಯತ್ನ ಕೆಲಸ ಕಾರ್ಯಗಳಲ್ಲಿ ಜಯ, ಮನೆಗೆ ಬಂಧುಗಳು-ಹಿರಿಯರು ಆಗಮನ, ಸಂಸಾರ ಸಂಬಂಧಿತ ಕೆಲಸಕಾರ್ಯಗಳು ನಡೆಯಲಿವೆ. ಅನಿರೀಕ್ಷಿತ ಋಣ ವಿಮೋಚನೆಯಾಗಲಿದೆ. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣ ಸಂತಸ ತಂದೀತು. ದಾಂಪತ್ಯದಲ್ಲಿ ಸಾಮರಸ್ಯವಿದೆ. ಶುಭ ಸುದ್ದಿ ಕೇಳುವಿರಿ, ಹಣಕಾಸು ಅನುಕೂಲ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಈ ದಿನ ಶುಭ ಫಲ ಯೋಗ.

ಮೀನರಾಶಿ
ಮಾಡುವ ಕೆಲಸದಲ್ಲಿ ಶ್ರದ್ಧೆ, ಉತ್ತಮ ಬುದ್ಧಿ ಶಕ್ತಿ, ಸ್ತ್ರೀಯರಿಗೆ ಲಾಭ, ಸಂಚಾರದ ಬಗ್ಗೆ ಜಾಗ್ರತೆ ವಹಿಸಿರಿ. ಧನಾಗಮನವಿದ್ದರೂ ಖರ್ಚುವೆಚ್ಚಗಳು ಅಧಿಕವಾಗಲಿವೆ. ಬಂಧುಗಳೊಡನೆ ಸಣ್ಣಪುಟ್ಟ ವಿಚಾರದಲ್ಲಿ ನಿಷ್ಠುರಕ್ಕೆ ಕಾರಣರಾಗದಿರಿ. ಚಿಂತಿತ ಕಾರ್ಯಕ್ಕೆ ಅಡೆತಡೆ ಇರುತ್ತದೆ. ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ತಾಳ್ಮೆಯಿಂದ ವಹಿಸುವುದು ಉತ್ತಮ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular