ನವದೆಹಲಿ : ಕರ್ವಾ ಚೌತ್ (Karwa Chauth)ಆಚರಣೆಯು ಮುತ್ತೈದೆಯರು ಅದು ಹೆಚ್ಚಾಗಿ ಉತ್ತರಭಾರತದಲ್ಲಿ ಆಚರಿಸುತ್ತಾರೆ. ಕರ್ವಾ ಚೌತ್ ಉಪವಾಸವನ್ನು ಸಂಪ್ರದಾಯಕವಾಗಿ ದೆಹಲಿ, ಹರಿಯಾಣ, ರಾಜಸ್ಥಾನ, ಪಂಜಾಬ್, ಜಮ್ಮು, ಪಶ್ಚಿಮ ಉತ್ತರಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಬಹಳ ಹಿಂದಿನ ಕಾಲದಿಂದಲೂ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯಸ್ಸು ಮತ್ತು ಆರೋಗ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಈ ವತ್ರಚಾರಣೆಯನ್ನು ಆಚರಿಸುತ್ತಾ ಬಂದಿದ್ದಾರೆ. ಹಾಗೆ ಅವಿವಾಹಿತ ಮಹಿಳೆಯರು ಕೂಡ ಈ ಆಚರಣೆಯನ್ನು ಆಚರಿಸುತ್ತಾರೆ. ಬೆಳಗ್ಗೆ ಸುರ್ಯೋದಯದಿಂದ ಪ್ರಾರಂಭಗೊಂಡು ಚಂದ್ರೋದಯದವರೆಗೂ ಪೂರ್ತಿ ದಿನ ಉಪವಾಸವಿದ್ದು ಈ ವ್ರತವನ್ನು ಆಚರಿಸುತ್ತಾರೆ.
ಹಿಂದೂ ಕ್ಯಾಲೆಂಡರ್ನ ಪ್ರಕಾರ ಕಾರ್ತಿಕ ಮಾಸದ ಹುಣ್ಣಿಮೆಯ ನಂತರದ ನಾಲ್ಕನೆಯ ದಿನ ಈ ವ್ರತವನ್ನು ಆಚರಣೆ ಮಾಡುತ್ತಿದ್ದರಿಂದ ಇದಕ್ಕೆ ಚೌತ್ ಎಂಬ ಹೆಸರು ಬಂದಿದೆ. ಕರ್ವಾ ಎಂದರೆ ಮಣ್ಣಿನ ಹೂಜಿ ಅಥವಾ ಮಣ್ಣಿನ ಸಣ್ಣ ಮಡಿಕೆ ಎನ್ನುವ ಅರ್ಥವನ್ನು ನೀಡುತ್ತದೆ. ಇದು ಶಾಂತಿ ಹಾಗೂ ಸಮೃದ್ಧಿಯ ಪ್ರತೀಕವಾಗಿದೆ. ಕರ್ವಾ ಚೌತ್ಗಾಗಿ ಮಹಿಳೆಯರು ಕರ್ವಾ ದೀಪಗಳು, ಮತ್ತಿ, ಮೆಹೆಂದಿ ಮತ್ತು ಅಲಂಕರಿಸಿದ ಪೂಜೆ ತಟ್ಟೆ ಮುಂತಾದ ಅಲಂಕಾರಗಳು, ಆಭರಣಗಳು ಮತ್ತು ಪೂಜಾ ಸಾಮಾಗ್ರಿಗಳನ್ನು ಖರೀದಿಸುವ ಮೂಲಕ ಕೆಲವು ದಿನಗಳ ಮುಂಚಿತವಾಗಿ ತಯಾರಿಯನ್ನು ನಡೆಸುತ್ತಾರೆ. ಹಾಗಾಗಿ ಅಲ್ಲಿನ ಸುತ್ತಮುತ್ತ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
ಈ ದಿನ ವಿವಾಹಿತ ಮಹಿಳೆಯರು ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿ ತಮ್ಮ ಅತ್ತೆ ನೀಡುವ ಸರಗಿಯನ್ನು ತಿನ್ನುತ್ತಾರೆ. ಇದಾದ ನಂತರ ಪೂರ್ತಿ ದಿನ ನೀರನ್ನು ಸೇವಿಸದೇ ಉಪವಾಸವನ್ನು ಮಾಡಬೇಕಾಗುತ್ತದೆ. ಸಾಯಂಕಾಲ ಹದಿನಾರು ಅಲಂಕಾರವನ್ನು ಮಾಡುವ ಮೂಲಕ ಶಿವ-ಪಾರ್ವತಿ, ಗಣೇಶ, ಕಾರ್ತಿಕೇಯ ಹಾಗೂ ಚಂದ್ರನನ್ನು ಪೂಜಿಸುತ್ತಾರೆ. ಶಿವನ ಪೂರ್ತಿ ಕುಟುಂಬವನ್ನು ಈ ವ್ರಚಾರಣೆಯಲ್ಲಿ ಪೂಜಿಸುವುದರಿಂದ ಸುಖ ಮತ್ತು ಸಮೃದ್ಧಿಯನ್ನು ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಮಣ್ಣಿನ ಮಡಿಕೆ ಅಂದರೆ ಕರ್ವಾದಲ್ಲಿ ಖಾದ್ಯವನ್ನು ಇಟ್ಟು ಪೂಜೆ ಮಾಡಿ ನಂತರ ರಾತ್ರಿಯಲ್ಲಿ ಚಂದ್ರನಿಗೆ ಅರ್ಕವನ್ನು ಅರ್ಪಿಸಿ, ಗಣೇಶ ಹಾಗೂ ಚತುರ್ಥಿ ಮಾತೆಗೆ ಅರ್ಪಿಸುತ್ತಾರೆ. ನಂತರ ತಮ್ಮ ಪತಿಯ ಮುಖವನ್ನು ಜರಡಿಯಲ್ಲಿ ನೋಡಿ ಹಾಗೆ ಪತಿಯ ಕೈಯಿಂದ ನೀರನ್ನು ಸೇವಿಸಿ ಉಪವಾಸವನ್ನು ಮುರಿಯುತ್ತಾರೆ. ಈ ಆಚರಣೆಯಿಂದ ಪತಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಊಟಕ್ಕೆ ಉಪಯೋಗಿಸುವ ದೊಡ್ಡ ತಟ್ಟೆಯಲ್ಲಿ ವಿವಿಧ ವಸ್ತುಗಳನ್ನು ಇಡಲಾಗುತ್ತದೆ. ಈ ಆಚರಣೆಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾಗೂ ಸಂಸ್ಕೃತಿಯಿಂದ ಸಂಸ್ಕೃತಿಗೆ ತಟ್ಟೆಯಲ್ಲಿರುವ ವಸ್ತುಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಅದರಲ್ಲಿ ಸಾಮಾನ್ಯವಾಗಿ ರೋಲಿ, ಅಕ್ಕಿ, ನೀರು ತುಂಬಿದ ಕರ್ವಾ (ಮಣ್ಣಿನ ಲೋಟ), ಒಂದು ತರದ ಸ್ವೀಟ್, ದೀವಟಿಗೆ, ಸ್ವಲ್ಪ ಹಣ ಮತ್ತು ಕುಂಕುಮ ಇದು ಎಲ್ಲಾ ರಾಜ್ಯದ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಇರುತ್ತದೆ. ರಾಜಸ್ಥಾನ ಇದರೊಂದಿಗೆ ಗೋಧಿ ಹಾಗೂ ಮಣ್ಣುನ್ನು ಸೇರಿಸಿ ಇಡುತ್ತಾರೆ.
ಪಂಜಾಬ್ಗಳಲ್ಲಿ ಇದರೊಂದಿಗೆ ಕೆಂಪು ನೂಲು, ಲೋಹದ ಚೌಕಟ್ಟಿನ ಸಾರಣಿಗೆ ಮತ್ತು ಉಪವಾಸವನ್ನು ಮುಕ್ತಯಾಗೊಳಿಸಲು ಒಂದು ಲೋಟ ನೀರನ್ನು ತಟ್ಟೆಯಲ್ಲಿ ಇಡುತ್ತಾರೆ. ಮತ್ತೆ ಮಹಿಳೆಯರು ತಮ್ಮನ್ನು ತಾವು ಶೃಂಗರಿಸಿಕೊಳ್ಳುತ್ತಾರೆ ಇದರಲ್ಲಿ ಕೂಡ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಹೆಚ್ಚಿನ ಮಹಿಳೆಯರು ಕೈಗಳಿಗೆ ಮದರಂಗಿ, ಕೈ ತುಂಬ ಬಳೆ, ಕೆಂಪು ಸೀರೆಯನ್ನು ಉಟ್ಟು, ತಲೆತುಂಬಾ ಸೀರೆ ಸೆರಗನ್ನು ಹೊದ್ದುಕೊಂಡು,ಆಭರಣಗಳನ್ನು ತೊಟ್ಟು ಅದರಲ್ಲಿ ಮಂಗಳ ಸೂತ್ರ ಪ್ರಮುಖವಾಗಿ ಕಾಣಿಸುವಂತೆ ಸಿಂಗರಿಸಿಕೊಳ್ಳುತ್ತಾರೆ.
ಈ(Karwa Chauth) ವ್ರತಚಾರಣೆಯ ಪೂರ್ತಿ ದಿನ ಪೂಜೆ, ಹಬ್ಬದ ಅಡುಗೆ ಇನ್ನಿತರ ಕಾರ್ಯಗಳ ಮೂಲಕ ತಲ್ಲೀನರಾಗಿರುತ್ತಾರೆ. ಸಂಜೆ ವೇಳೆಯಲ್ಲಿ ಊರಿನಲ್ಲಿ ವ್ರತ ಆಚರಿಸುವಾಗ ಎಲ್ಲಾ ಮಹಿಳೆಯರು ಒಂದೇ ಪ್ರದೇಶದಲ್ಲಿ ಸೇರಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಾರೆ. ಹಾಡು, ನೃತ್ಯ, ಹಾಸ್ಯ, ಅನುಕರಣೆ, ತಮ್ಮ ತಮ್ಮ ಉಡುಗೆಯ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಈ ವ್ರತವನ್ನು ಆಚರಿಸುವಾಗ ಹೆಚ್ಚಾಗಿ ಗಾಢ ಬಣ್ಣದ ಸೀರೆ ಅಥವಾ ಲೆಹೆಂಗಾವನ್ನು ಧರಿಸುತ್ತಾರೆ.
ಇದನ್ನೂ ಓದಿ : Ramesh Aravind : ಯಕ್ಷಗಾನ ವೇಷತೊಟ್ಟ ನಟ ರಮೇಶ್ ಅರವಿಂದ್ : ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ಯಾಕೆ ?
ಈ ವ್ರತ ಆಚರಣೆಯನ್ನು ಹಬ್ಬದ ರೂಪದಲ್ಲಿ ಆಚರಿಸುತ್ತಾರೆ. ಹಾಗಾಗಿ ಪ್ರತಿ ಮನೆಗಳಲ್ಲಿಯೂ ವಿವಿಧ ರೀತಿಯ ಹಬ್ಬದ ಅಡುಗೆಯನ್ನು ತಯಾರಿಸುತ್ತಾರೆ. ಈ ಹಬ್ಬದಲ್ಲಿ ಇಂತಹದ್ದೇ ತಿಂಡಿ ಮಾಡಬೇಕೆನ್ನುವ ನಿರ್ಬಂಧವಿಲ್ಲದೇ ಇರುವುದರಿಂದ ತಮಗೆ ಇಷ್ಟದ ಖಾದ್ಯಗಳನ್ನು ಮಾಡುತ್ತಾರೆ. ಇನ್ನು ಕೆಲವರು ಕಚೋರಿ, ಸಬ್ಜಿ ಮೊದಲಾದ ಖಾದ್ಯಗಳನ್ನು ತಯಾರಿಸಿದರೆ, ಇನ್ನೂ ಕೆಲವು ಸಂಪ್ರದಾಯಗಳಲ್ಲಿ ಸರ್ಗಿ ಎಂಬ ತಟ್ಟೆ ಊಟವನ್ನು ತಯಾರಿಸಲಾಗುತ್ತದೆ. ಈ ವ್ರತದಲ್ಲಿ ಹೆಚ್ಚಾಗಿ ಮಾಥಸ್ ಮತ್ತು ಪುವಾಸ್ ಎಂಬ ಎರಡು ಆಹಾರ ಖಾದ್ಯಗಳನ್ನು ಪೂಜೆಗೆ ಅಗತ್ಯವಾಗಿರುತ್ತದೆ.
Do you know the importance of Karva Chauth celebration in North India?