ಭಾನುವಾರ, ಏಪ್ರಿಲ್ 27, 2025
HomeagriculturePM Kisan Yojana Benefits : ಈ ರೈತರಿಗೆ ಇನ್ಮುಂದೆ ಸಿಗಲ್ಲ ಪಿಎಂ ಕಿಸಾನ್‌ ಹಣ

PM Kisan Yojana Benefits : ಈ ರೈತರಿಗೆ ಇನ್ಮುಂದೆ ಸಿಗಲ್ಲ ಪಿಎಂ ಕಿಸಾನ್‌ ಹಣ

- Advertisement -

ನವದೆಹಲಿ : ಕೇಂದ್ರ ಸರಕಾರ ರೈತರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ. ಪಿಎಂ ಕಿಸಾನ್ ಯೋಜನೆಯ 14 ನೇ ಕಂತು (PM Kisan Yojana Benefits)‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದೇಶದ ಕೋಟಿಗಟ್ಟಲೆ ರೈತರು ಈ ಕಂತಿಗಾಗಿ ಕಾದು ಕುಳಿತಿದ್ದಾರೆ. ಹೌದು ಈ ಯೋಜನೆಯ 13 ಕಂತು ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, ರೈತರಿಗೆ ಮಾರ್ಚ್‌ ತಿಂಗಳಾರ್ಧದಲ್ಲಿ ದೊರಕಿದೆ. ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಇರುವ ರೈತರು ಕೃಷಿ ಚುಟುವಟಿಕೆ ಸಂಬಂಧಿಸಿದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಕಂತಿನಲ್ಲಿ ಸಿಗುವ ಹಣವು ಬಿತ್ತನೆ ಬೀಜದ ಖರೀದಿಗೆ ಸಹಾಯಕಾರಿ ಆಗಲಿದೆ. ಆದರಿಂದ ದೇಶದ ಹೆಚ್ಚಿನ ರೈತರು 14 ನೇ ಕಂತು ನಿರೀಕ್ಷೆಯಲ್ಲಿದ್ದಾರೆ. ಇದುವರೆಗೆ ಸರಕಾರ ರೈತರಿಗೆ 13 ಕಂತುಗಳನ್ನು ನೀಡಿದೆ. ಆದರೆ ಈಗ ಈ ಯೋಜನೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್‌ಡೇಟ್ ಬರುತ್ತಿದ್ದು, ಕೆಲವು ರಾಜ್ಯಗಳ ರೈತರು 14 ನೇ ಕಂತಿನಿಂದ ವಂಚಿತರಾಗಬಹುದು.

PM Kisan Yojana Benefits : ಏನಿದು ಪಿಎಂ ಕಿಸಾನ್ ಯೋಜನೆ ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ವರ್ಷದಲ್ಲಿ 6 ಸಾವಿರ ರೂ. ಈ ಮೊತ್ತವನ್ನು ಒಂದೇ ಬಾರಿಗೆ ನೀಡುವುದಿಲ್ಲ, ಬದಲಿಗೆ 3 ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ರೈತರಿಗೆ ಒಂದು ಕಂತು ಬಿಡುಗಡೆಯಾಗುತ್ತದೆ. ರೈತರಿಗೆ ಪ್ರತಿ ಕಂತಿನಲ್ಲಿ 2 ಸಾವಿರ ರೂ. ಸಿಗುತ್ತದೆ.

ಬಿಹಾರದ ಈ ರೈತರಿಗೆ ಕಂತು ಏಕೆ ಸಿಗುವುದಿಲ್ಲ?
ಈ ಬಾರಿ ಬಿಹಾರ ರಾಜ್ಯದ ಹಲವು ರೈತರಿಗೆ 14ನೇ ಕಂತು ಸಿಗುವುದಿಲ್ಲ. ಬಿಹಾರದಲ್ಲಿ 14.60 ಲಕ್ಷ ರೈತರು ಇನ್ನೂ ಇ-ಕೆವೈಸಿ ಮಾಡಿಲ್ಲ. ರೈತರಿಗೆ ಜಿಲ್ಲಾವಾರು ಪಟ್ಟಿಯನ್ನು ಕಳುಹಿಸಿ ಇ-ಕೆವೈಸಿ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಪಟ್ಟಿಯನ್ನು ಕೃಷಿ ಸಂಯೋಜಕರಿಗೆ ನೀಡಲಾಗುವುದು. ಇಲ್ಲಿ ಸಂಯೋಜಕರು ರೈತರ ಮನೆಗೆ ಹೋಗಿ ಇ-ಕೆವೈಸಿ ಮಾಡುತ್ತಾರೆ. ಈ ಇ-ಕೆವೈಸಿ ಇತ್ತೀಚೆಗೆ ಬಿಡುಗಡೆಯಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ 14 ನೇ ಕಂತು ಜೂನ್ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದು ಎಂದು ನಂಬಲಾಗಿದೆ. ಈ ಬಾರಿ ಇ-ಕೆವೈಸಿ ಮೂಲಕ ತಮ್ಮ ಭೂಮಿಯನ್ನು ಪರಿಶೀಲಿಸಿದ ರೈತರಿಗೆ ಮಾತ್ರ ಕಂತು ಸಿಗಲಿದೆ.

ಇದನ್ನೂ ಓದಿ : ರೈತರು ಬೇರೆಯರ ಹೊಲದಲ್ಲಿ ಕೃಷಿ ಮಾಡುತ್ತಿದ್ದರೆ, ಪಿಎಂ ಕಿಸಾನ್ ಯೋಜನೆಯ ಪ್ರಯೊಜನ ಪಡೆಯಬಹುದೇ ?

ಇದನ್ನೂ ಓದಿ : PM Kisan Yojana : ಪಿಎಂ ಕಿಸಾನ್‌ ಯೋಜನೆಯಡಿ ಪತಿ, ಪತ್ನಿ ಇಬ್ಬರೂ ಲಾಭವನ್ನು ಪಡೆಯಬಹುದೇ ?

ಇ-ಕೆವೈಸಿ ಮಾಡುವುದು ಹೇಗೆ?

  • ನೀವು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
  • ಇಲ್ಲಿ ಹೋಮ್ ಸ್ಕ್ರೀನ್‌ನಲ್ಲಿ ಇರುವ ಇ-ಕೆವೈಸಿ ಆಯ್ಕೆಯನ್ನು ಆರಿಸಬೇಕಾಗುತ್ತದೆ.
  • ಇದರ ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಬೇಕು.
  • ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು OTP ಅನ್ನು ಪಡೆಯುತ್ತೀರಿ. Get OTP ಕ್ಲಿಕ್ ಮಾಡಿ ಮತ್ತು OTP ನಮೂದಿಸಿದ ನಂತರ Enter ಬಟನ್‌ ಒತ್ತಬೇಕು
  • ನಿಮ್ಮ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

PM Kisan Yojana Benefits: These farmers will not get the 14th installment of PM Kisan Yojana, here is the complete information

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular