ಸೋಮವಾರ, ಏಪ್ರಿಲ್ 28, 2025
HomeBreakingತರಿಕೆರೆಯಲ್ಲಿ ಭೀಕರ ಅಪಘಾತ ಕುಂದಾಪುರದ ಮೂವರ ದುರ್ಮರಣ

ತರಿಕೆರೆಯಲ್ಲಿ ಭೀಕರ ಅಪಘಾತ ಕುಂದಾಪುರದ ಮೂವರ ದುರ್ಮರಣ

- Advertisement -

ತರಿಕೆರೆ : ಹುಂಡೈ ಹಾರು ಹಾಗೂ ಇಕೋ ಸ್ಪೋರ್ಟ್ ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕುಂದಾಪುರ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿಯ ಬಳಿಯಲ್ಲಿ ನಡೆದಿದೆ.

ನಾಗೇಂದ್ರ ( 26 ವರ್ಷ), ಸುಜಿತಾ (30 ವರ್ಷ) ಹಾಗೂ ಅನಿಲ್ (35 ವರ್ಷ) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಹುಂಡೈ ಕಾರು, ಬೆಂಗಳೂರಿನಿಂದ ತೀರ್ಥಹಳ್ಳಿಯ ಕಡೆಗೆ ಬರುತ್ತಿದ್ದ ಇಕೋಸ್ಪೋರ್ಟ್ ಕಾರುಗಳ ನಡುವೆ ರಂಗೇನಹಳ್ಳಿಯ ಬಳಿಯಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದಲ್ಲಿ ನಾಗೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಅನಿಲ್ ಹಾಗೂ ಸುಜಿತಾ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಇಬ್ಬರೂ ಕೂಡ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಲಕ್ಕವಳ್ಳಿ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular