ಸೋಮವಾರ, ಜೂನ್ 16, 2025
HomeBreakingಸಿಗಂದೂರು ಎದುರು ಹಾಕಿಕೊಂಡ್ರೇ ಬಿಎಸ್ವೈ ರಾಜಕೀಯವಾಗಿ ಸರ್ವನಾಶವಾಗ್ತಾರೆ…! ಭವಿಷ್ಯ ನುಡಿದ ಬೇಳೂರು..!!

ಸಿಗಂದೂರು ಎದುರು ಹಾಕಿಕೊಂಡ್ರೇ ಬಿಎಸ್ವೈ ರಾಜಕೀಯವಾಗಿ ಸರ್ವನಾಶವಾಗ್ತಾರೆ…! ಭವಿಷ್ಯ ನುಡಿದ ಬೇಳೂರು..!!

- Advertisement -

ಶಿವಮೊಗ್ಗ: ಶಕ್ತಿಪೀಠವಾಗಿರುವ ಸಿಗಂದೂರು ಚೌಡೇಶ್ವರಿ ಕ್ಷೇತ್ರವನ್ನು ಸ್ವಾರ್ಥಕ್ಕೊಸ್ಕರ ಎದುರು ಹಾಕಿಕೊಂಡರೇ, ಯಡಿಯೂರಪ್ಪನವರ ರಾಜಕೀಯ ಭವಿಷ್ಯವೇ  ನಾಶವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಿಎಂ ಬಿಎಸ್ವೈಗೆ ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಮುಖಂಡರ ನಿರ್ಧಾರಗಳನ್ನು ಟೀಕಿಸಿದ್ದಾರೆ.  ಖಾಸಗಿಯವರ ದೇವಾಲಯವನ್ನು ಸರ್ಕಾರಕ್ಕೆ ಸೇರಿಸಲು ಹೊರಟ ನಿಮ್ಮ ನಿರ್ಧಾರಕ್ಕೆ ಕಾರಣವಾದ್ರು ಏನು ಎಂದು ಬೇಳೂರು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ ಬೇಳೂರು, ಈಡಿಗರ ಜಾತಿ ಒಡೆಯಲು ಶಾಸಕ ಹರತಾಳು ಹಾಲಪ್ಪ ಸಿದ್ಧವಾಗಿದ್ದಾರೆ. ಎಲ್ಲ ಮಠ-ಮಂದಿರದಲ್ಲೂ ಗಲಾಟೆ ಸಾಮಾನ್ಯ. ಆದರೆ ಆ ಎಲ್ಲ ದೇವಾಲಯಗಳನ್ನು ನೀವು ಸರ್ಕಾರಕ್ಕೆ ಸೇರಿಸಿಕೊಳ್ಳುತ್ತೀರಾ?

ಹಾಗಿದ್ದರೇ ಸಿಗಂದೂರಿನ ವಿಚಾರದಲ್ಲಿ ನಿಮಗ್ಯಾಕೆ ಇಷ್ಟೊಂದು ಆಸಕ್ತಿ ಎಂದು ಪ್ರಶ್ನಿಸಿದ್ದಾರೆ. ಸಿಗಂದೂರಿನಲ್ಲಿ ಗಲಾಟೆ ಮಾಡಿಕೊಂಡ ಅರ್ಚಕರು ಹಾಗೂ ಧರ್ಮದರ್ಶಿಗಳನ್ನು ನೀವು ಕೂರಿಸಿ ಮಾತನಾಡುವ ಬದಲು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ನಿರ್ಣಯ ಯಾಕೆ? ಇದು ಒಳ್ಳೆಯ ಆಯ್ಕೆಯಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಅಲ್ಲದೇ ಜಿಲ್ಲಾಧಿಕಾರಿಗಳು ಈಡಿಗ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಅತಿಯಾದ ಆಸಕ್ತಿ ತೋರಿಸಿದರೇ ಬಿಎಸ್ವೈ ಅವರಿಗೆ ಒಳ್ಳೆಯದಾಗೋದಿಲ್ಲ ಎಂದು ಬೇಳೂರು ಶಾಪ ಹಾಕಿದ್ದು, ಸುದ್ದಿಗೋಷ್ಠಿಯ ವಿಶೇಷ.

RELATED ARTICLES

Most Popular