ಸೋಮವಾರ, ಏಪ್ರಿಲ್ 28, 2025
HomeBreakingಪೋಟೋಗೆ ಪೂಜೆ ಮಾಡಿ ವಿವಾದಕ್ಕೆ ಸಿಲುಕಿದ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ರಾಮಲಿಂಗ ರೆಡ್ಡಿ...

ಪೋಟೋಗೆ ಪೂಜೆ ಮಾಡಿ ವಿವಾದಕ್ಕೆ ಸಿಲುಕಿದ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ರಾಮಲಿಂಗ ರೆಡ್ಡಿ ..!!!

- Advertisement -

ಬೆಂಗಳೂರು : ನವರಾತ್ರಿಯ ಸಂದರ್ಭದಲ್ಲಿ ಸರ್ವ ಧರ್ಮದ ದೇವರಿರುವ ಪೋಟೋವೊಂದಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಫೋಟೊದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿಸಚಿವ ರಾಮಲಿಂಗಾ ರೆಡ್ಡಿ ಇಬ್ಬರು ಸೇರಿಕೊಂಡು ಗಣಪತಿ, ಮಸೀದಿ ಹಾಗೂ ಏಸು ಇರುವ ಫೋಟೊವನ್ನು ಇಟ್ಟು ಅದಕ್ಕೆ ಹೂ ಮಾಲೆ ಹಾಕಿದ್ದಾರೆ. ಅಲ್ಲದೆ ಸೌಮ್ಯ ರೆಡ್ಡಿ ಅದಕ್ಕೆ ಆರತಿ ಬೆಳಗುತ್ತಾರೆ. ಈ ಎಲ್ಲಾ ಕೆಲಸಗಳಿಗೆ ರಾಮಲಿಂಗಾ ರೆಡ್ಡಿ ಸಾಥ್‌ ನೀಡಿದ್ದಾರೆ.

ಸರ್ವಧರ್ಮದ ದೇವರ ಪೋಟೋಗೆ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ಪೂಜೆ ಸಲ್ಲಿಸಿರುವ ಪೋಟೋವನ್ನು ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲರಾದ ಮೀರಾ ರಾಘವೇಂದ್ರ ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಈ ಥರದ ಆಚರಣೆ ಬೇಕಿತ್ತಾ ಅಪ್ಪ ಮಗಳಿಗೆ ಎಂದು ಪ್ರಶ್ನಿಸಿದ ಅವರು, ಇಸ್ಲಾಂನಲ್ಲಿ ಮಂಗಳಾರತಿಗೆ ಅವಕಾಶ ಇದೆಯಾ. ಇದನ್ನು ಮುಸ್ಲೀಮರು ಒಪ್ಪುವರೇ ಅಥವಾವಿರೋಧಿಸುವರೇ, ಕಾಂಗ್ರೆಸಿಗರು ಏನೆ ಮಾಡಿದ್ರೂ ಏಕೆ ಎನ್ನುವರೇ ಎಂದು ಪ್ರಶ್ನೆಗಳ ಸುರಿಗಳೆ ಗೈದಿರುವ ಮೀರಾ ರಾಘವೇಂದ್ರ ಅವರು, ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಯಿ ಬಿಟ್ಟು ಮೌಲ್ವಿಗಳು ಉತ್ತರಿಸಿ ಎಂದು ಟ್ವಿಟ್ ಮಾಡಿದ್ದಾರೆ.

ಮೀರಾ ರಾಘವೇಂದ್ರ ಅವರ ಟ್ವೀಟ್ ಬೆನ್ನಲ್ಲೇ ಪರ ವಿರೋಧದ ಚರ್ಚೆಗಳು ಶುರುವಾಗಿದೆ. ಹಲವರು ಸೌಮ್ಯ ರೆಡ್ಡಿ ಅವರು ಮಾಡಿರು ಕಾರ್ಯವನ್ನು ಸಮರ್ಥಿಸಿಕೊಳ್ಳುವ ಕಾರ್ಯವನ್ನು ಮಾಡಿದ್ದಾರೆ. ಇನ್ನೂ ಹಲವರು ಜಾತ್ಯಾತೀತತೆಯ ಪರಮಾವಧಿ ಎಂದಿದ್ದಾರೆ.

ಒಟ್ಟಿನಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸೌಮ್ಯ ರೆಡ್ಡಿ ಅವರು ನವರಾತ್ರಿಯ ಸಂದರ್ಭದಲ್ಲಿಯೇ ವಿವಾದಕ್ಕೆ ಸಿಲುಕಿದ್ದಾರೆ. ಪೋಟೋಗೆ ಪೂಜೆ ಸಲ್ಲಿಸಿರೋ ವಿಚಾರ ಇದೀಗ ಟ್ವಿಟರ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular