ಬೆಂಗಳೂರು : ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ ಬಜೆಟ್ (Karnataka Budget 2023) ಮಂಡಿಸಿ ಎಲ್ಲಾ ಜಿಲ್ಲೆ,ಜನಾಂಗಗಳಿಗೂ ಯೋಜನೆಗಳ ಮಹಾಪೂರವನ್ನೇ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಯ ಜನರ ಪಾಲಿಗೆ ಅತೀ ಅವಶ್ಯಕವಾಗಿದ್ದ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ (Multi Specialty Hospital at Kumta) ಘೋಷಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಜನರು ಪಕ್ಷಾತೀತವಾಗಿ ಜಿಲ್ಲೆಗೊಂದು ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಬೇಕೆಂದು ಕೇಳುತ್ತಲೇ ಬಂದಿದ್ದರು. ಆದರೆ ರಾಜಕೀಯ ಪಕ್ಷಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆಸ್ಪತ್ರೆ ನಿರ್ಮಾಣವಾಗಿರಲಿಲ್ಲ. ಆದರೆ ಈಗ ಬಜೆಟ್ ನಲ್ಲಿ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಘೋಷಿಸಲಾಗಿದೆ.
ಆಸ್ಪತ್ರೆ ಅಗತ್ಯವೇಕೆ?! ಪ್ರವಾಸೋದ್ಯಮ, ಶಿಕ್ಷಣ ಹಾಗೂ ಕೃಷಿ ಯಿಂದಲೇ ಬದುಕು ಕಟ್ಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯನ್ನು ಒಳಗೊಂಡಿದೆ. ಅಲ್ಲದೇ ಒಟ್ಟು 11 ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗೆ ರಸ್ತೆ,ಸಾರಿಗೆ ಹಾಗೂ ವಾಹನ ಸೌಲಭ್ಯ ದಲ್ಲಿ ಇಂದಿಗೂ ನೀರಿಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ.
ಈಗಲೂ ಜಿಲ್ಲಾ ಕೇಂದ್ರಕ್ಕಾಗಿ ಒಂದೊಂದು ತಾಲೂಕಿನ ಜನರು 100-120 ಕಿಲೋಮೀಟರ್ ಪ್ರಯಾಣಿಸಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಒಂದೇ ಒಂದು ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ ಗಳಿಲ್ಲ.
ಹೀಗಾಗಿ ಅಪಘಾತ, ತುರ್ತು ಸಂದರ್ಭ ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ಜನರು ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಉಡುಪಿ,ಮಂಗಳೂರು,ಕೊಲ್ಲಾಪುರ, ಮಹಾರಾಷ್ಟ್ರ, ಗೋವಾದಂತಹ ದೂರದ ಪ್ರದೇಶಗಳಿಗೆ ತೆರಳೋದು ಅನಿವಾರ್ಯ.
ಪ್ರವಾಸಕ್ಕೆ ಬಂದವರು ಕಡಲಿನನೀರಿನಲ್ಲಿ ಸಿಲುಕಿ ಅಸ್ವಸ್ಥರಾದರೂ ಅವರನ್ನು ಅಂಬುಲೆನ್ಸ್ ನಲ್ಲಿ ದೂರದ ಮಂಗಳೂರಿಗೆ ಕರೆದುಕೊಂಡು ಹೋಗಬೇಕು. ಈ ವೇಳೆ ರಸ್ತೆಯಲ್ಲೇ ರೋಗಿಗಳು ಸಾಯುವ ಸಂದರ್ಭ ಮರುಕಳಿಸುತ್ತಿದೆ. ಹೀಗಾಗಿ ಜಿಲ್ಲೆಗೊಂದು ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ ಜಿಲ್ಲೆಯ ಎಲ್ಲ ತಾಲೂಕಿಗೆ ಮಧ್ಯಭಾಗದಲ್ಲಿ ನಿರ್ಮಾಣವಾಗಬೇಕೆಂಬ ಒತ್ತಡ ಕೇಳಿಬಂದಿತ್ತು. ಇದಕ್ಕಾಗಿ ಕುಮಟಾದಲ್ಲಿ ಈಗಾಗಲೇ ಜಾಗ ಪರಿಶೀಲನೆ ಕೂಡ ಮಾಡಲಾಗಿತ್ತು.
ಇದನ್ನೂ ಓದಿ : ಕರ್ನಾಟಕ ರಾಜ್ಯ ಬಜೆಟ್ 2023 : ಶೂನ್ಯ ಬಡ್ಡಿದರದಲ್ಲಿ ರೈತರಿಗೆ 5 ಲಕ್ಷ ರೂಪಾಯಿ ಸಾಲ : ರೈತರಿಗೆ ಬಂಪರ್ ಗಿಫ್ಟ್
ಇದನ್ನೂ ಓದಿ : Fishermen Budget 2023 : ಬೈಂದೂರಿನಲ್ಲಿ ಸೀ ಪುಡ್ ಪಾರ್ಕ್ : ಬಜೆಟ್ ನಲ್ಲಿ ಮೀನುಗಾರರಿಗೆ ಸಿಕ್ಕಿದ್ದೇನು ?
ಆದರೆ ಕೊನೆಗೆ ಅರ್ಥಿಕ ಇಲಾಖೆ ಬಜೆಟ್ ಕೊರತೆಯ ಕಾರಣಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಅನುದಾನದ ಕೊರತೆ ಕಾರಣವೊಡ್ಡಿ ಆಸ್ಪತ್ರೆ ನಿರ್ಮಾಣ ಕೈಬಿಟ್ಟಿತ್ತು.ಈಗ ಮತ್ತೊಮ್ಮೆ ಸಿಎಂ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣ ಘೋಷಿಸಿದ್ದಾರೆ. ಆದರೆ ಇದು ಕೇವಲ ಚುನಾವಣೆಯ ಹೊತ್ತಿನಲ್ಲಿ ಜನರ ಮನವೊಲಿಸಲು ಮಾಡಿರೋ ಘೋಷಣೆ ಎಂಬ ಮಾತು ಬಲವಾಗಿ ಕೇಳಿ ಬರ್ತಿದ್ದು, ಚುನಾವಣೆ ಮುಗಿದ ಮೇಲೆ ಮತ್ತೆ ಆಸ್ಪತ್ರೆ ಗಾಗಿ ಜನರು ಬೀದಿಗಿಳಿಯೋ ದಿನ ಬರಲಿದೆ ಎಂದು ಹೇಳಲಾಗ್ತಿದೆ.
Karnataka Budget 2023: Bommai Gift to People of Uttara Kannada: Multi Specialty Hospital at Kumta