ಭಾನುವಾರ, ಏಪ್ರಿಲ್ 27, 2025
Homebusinessಗೃಹಲಕ್ಷ್ಮೀ ಯೋಜನೆ ಭರ್ಜರಿ ಗುಡ್‌ನ್ಯೂಸ್‌: ಮತ್ತೆ 12 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಹಣ

ಗೃಹಲಕ್ಷ್ಮೀ ಯೋಜನೆ ಭರ್ಜರಿ ಗುಡ್‌ನ್ಯೂಸ್‌: ಮತ್ತೆ 12 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಹಣ

- Advertisement -

Gruha Lakshmi Yojana : ಗೃಹಲಕ್ಷ್ಮೀ ಯೋಜನೆಯಡಿಯ ಫಲಾನುಭವಿಗಳಿಗೆ ಸರಕಾರ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ. 11 ಮತ್ತು 12 ನೇ ಕಂತಿನ ( Gruha Lakshmi 12th Installment ) ಹಣವನ್ನು ಮೊದಲ ಹಂತದಲ್ಲಿ 16ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದ್ದ ಕರ್ನಾಟಕ ಸರಕಾರ ಇದೀಗ ಎರಡನೇ ಹಂತದಲ್ಲಿ ಮತ್ತೆ 12 ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದೆ. ನಿಮ್ಮ ಖಾತೆಗೂ ಹಣ ಜಮೆ ಆಗಿದ್ಯಾ ಚೆಕ್‌ ಮಾಡಿ.

Gruha Lakshmi Yojana Good News 12th Instalment Funds have been released to 12 districts again
Image Credit to Original Source

ಕರ್ನಾಟಕದಲ್ಲಿ ಈಗಾಗಲೇ ಬಹುತೇಕರಿಗೆ 10 ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗಿದೆ. ಆದರೆ 11ನೇ ಕಂತಿನ ಹಣ ಹಲವರಿಗೆ ಜಮೆ ಆಗಿಲ್ಲ. ಇದೀಗ 11 ಮತ್ತು 12 ನೇ ಕಂತಿನ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಟ್ಟಿಗೆ ಜಮೆ ಮಾಡುತ್ತಿದೆ. ಹೀಗಾಗಿ ಈ ಕಂತಿನಲ್ಲಿ 2000 ರೂಪಾಯಿಯ ಬದಲು, 4000 ರೂಪಾಯಿ ಮಹಿಳೆಯ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಗೃಹಲಕ್ಷ್ಮೀ ಯೋಜನೆಯನ್ನು ಆರಂಭದಲ್ಲಿ ಏಕಕಾಲದಲ್ಲಿ ಎಲ್ಲಾ ಮಹಿಳೆಯರಿಗೆ ಪಾವತಿ ಮಾಡುತ್ತೇವೆ ಅಂತಾ ಹೇಳಿರುವ ಸರಕಾರ ಇದೀಗ ಹಂತ ಹಂತವಾಗಿ ಪಾವತಿ ಮಾಡಲು ಸಜ್ಜಾಗಿದೆ. ಈ ತಿಂಗಳು ಮೊದಲ ಕಂತಿನ ಹಣ ಪಾವತಿಸಿದ್ದು, ಇದೀಗ ಎರಡನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿದೆ. ಎರಡನೇ ಕಂತಿನಲ್ಲಿ ಬಿಡುಗಡೆ ಆಗಿರುವ ಜಿಲ್ಲೆಗಳು ಯಾವುವು ಎಂದು ನೋಡೋದಾದ್ರೆ.

ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ

ಬೆಂಗಳೂರು, ರಾಯಚೂರು, ಬಳ್ಳಾರಿ, ಬೀದರ್‌, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಕೋಲಾರ, ಹಾವೇರಿ, ಗದಗ, ಕಲಬುರಗಿ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಗೃಹಲಕ್ಷ್ಮೀಯರ ಖಾತೆಗೆ ಈಗಾಗಲೇ ಡಿಬಿಟಿ (DBT Transfer) ಮೂಲಕ ಹಣ ವರ್ಗಾವಣೆಯನ್ನು ಮಾಡಲಾಗಿದೆ. ಗೃಹಲಕ್ಷ್ಮೀಯರು ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

Gruha Lakshmi Yojana Good News 12th Instalment Funds have been released to 12 districts again
Image Credit to Original Source

ನಿಮ್ಮ ಖಾತೆಗೆ ಹಣ ಬಾರದೇ ಇದ್ರೆ ಈ ಕೆಲಸ ಮಾಡಿ

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ತಮಗೆ ಹಣ ಬಂದಿಲ್ಲ ಅನ್ನೋದು ಹಲವರ ದೂರು. ಒಂದು ಬಾರಿ ಹಣ ಜಮೆ ಆಗಿ ಮತ್ತೆ ಹಣ ಬಾರದೇ ಇರೋದಕ್ಕೆ ಕೂಡ ಹಲವು ಕಾರಣಗಳಿವೆ. ಒಂದೊಮ್ಮೆ ನಿಮ್ಮ ಖಾತೆಗೆ ಹಣ ಬಾರದೇ ಇದ್ರೆ, ಒಮ್ಮೆ ನಿಮ್ಮ ಖಾತೆ ಹೊಂದಿರುವ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಸಿಗಲಿದೆ 4000 ರೂ.: ತಪ್ಪದೇ ಈ ಕೆಲಸ ಮಾಡಿ ಮುಗಿಸಿ

ನಿಮ್ಮ ಆಧಾರ್‌ ಕಾರ್ಡ್‌ (Aadhar Card)  ರೇಷನ್‌ ಕಾರ್ಡ್‌ (Ration Card) ಜೊತೆ ಹಾಗೂ ಬ್ಯಾಂಕ್‌ ಖಾತೆಗೆ (Bank Account) ಲಿಕ್‌ಆಗಿದ್ಯಾ ಅನ್ನೋದನ್ನು ಚೆಕ್‌ ಮಾಡಿ. ಬ್ಯಾಂಕ್‌ ಖಾತೆಯ ಜೊತೆಗೆ ನಿಮ್ಮ ಆಧಾರ್‌ ಕಾರ್ಡ್‌ಲಿಂಕ್‌ ಮಾಡುವ ಮೂಲಕ ಎನ್‌ಸಿಪಿಐ (NCPI) ಮ್ಯಾಪಿಂಗ್‌ ಆಗಿದ್ಯಾ ಅನ್ನೋದನ್ನು ಯಾವುದಕ್ಕೂ ಒಮ್ಮೆ ಪರಿಶೀಲಿಸಿಕೊಳ್ಳಿ. ಎಲ್ಲವೂ ಸರಿಯಾಗಿಯೇ ಇದ್ರೆ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಕ್ಕಾ ಜಮೆ ಆಗಲಿದೆ.

ಇದನ್ನೂ ಓದಿ : 7ನೇ ವೇತನ ಆಯೋಗ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

Gruha Lakshmi Yojana Good News 12th Instalment Funds have been released to 12 districts again

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular