PM-SYM Yojana : ಗೃಹಲಕ್ಷ್ಮೀ ಯೋಜನೆಯಡಿ ಗೃಹಿಣಿಯರ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಜಮೆ ಮಾಡುತ್ತಿದೆ. ಆದರೆ ಗೃಹಲಕ್ಷ್ಮೀ ಯೋಜನೆಯನ್ನೇ ಮೀರಿಸುವ ಯೋಜನೆಯೊಂದನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತೀ ತಿಂಗಳು 3000 ರೂಪಾಯಿ ದೊರೆಯಲಿದೆ. ಮಹಿಳೆಯರಿಗಷ್ಟೇ ಅಲ್ಲಾ ಪುರಷರಿಗೂ ಹಣ ಸಿಗೋದು ಪಕ್ಕಾ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (Pradhan Mantri Shram Yogi Maandhan Yojana)’ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬರೂ ಕೂಡ ಪ್ರತೀ ತಿಂಗಳು 3000 ರೂಪಾಯಿ ಪಡೆಯಬಹುದಾಗಿದೆ. ಪುರುಷರೂ ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರು, ವ್ಯಾಪಾರಿಗಳು, ವಾಹನಗಳ ಚಾಲಕರು, ರಿಕ್ಷಾ ಚಾಲಕರು, ಬೀಡಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. 60 ವರ್ಷದ ಕಳೆದ ನಂತರ ವೃದ್ದಾಪ್ಯದಲ್ಲಿ ಯಾರೂ ಇತರರಿಗೆ ಆಶ್ರಯಿಸುವ ಅಗತ್ಯ ಇನ್ಮುಂದೆ ಇರೋದಿಲ್ಲ.
ಕೇಂದ್ರ ಸರಕಾರ ಈ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು, ಲಕ್ಷಾಂತರ ಮಂದಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರ ಫೆಬ್ರವರಿ 2019 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.
ಇದೊಂದು ಪಿಂಚಣಿ ಯೋಜನೆಯಾಗಿದ್ದು, ಈ ಯೋಜನೆಯ ಪ್ರಯೋಜನ ಪಡೆಯಲು 60 ವರ್ಷ ವಯಸ್ಸಾಗಿರಬೇಕು. 60 ವರ್ಷ ಕಳೆದ ನಂತರದಲ್ಲಿ ಪ್ರತೀ ತಿಂಗಳು 3000 ರೂಪಾಯಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ದೇಶಾದ್ಯಂತ 46,29,664ಕ್ಕೂ ಅಧಿಕ ಮಂದಿ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
Also Read : Ration Card ekyc : ಜೂನ್ 30 ಕೊನೆಯ ದಿನ : ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
PM-SYMಗೆ ಅರ್ಜಿ ಸಲ್ಲಿಸುವುದು ಹೇಗೆ ? ಯಾರು ಯೋಜನೆಗೆ ಅರ್ಹರು ?
- ಮಾಸಿಕ ಆದಾಯವು ರೂ. 15,000 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅರ್ಜಿದಾರರು ವಯಸ್ಕರಾಗಿರಬೇಕು. ಅಂದ್ರೆ ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 40 ವರ್ಷದ ಒಳಗಿನವರಾಗಿರಬೇಕು.
- ಬೀದಿ ವ್ಯಾಪಾರಿಗಳು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಮನೆ ಕೆಲಗಾರರು, ಬೀಡಿ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
- ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರಲು ಅರ್ಹರಲ್ಲ.
- ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಅಥವಾ ನೌಕರರ ರಾಜ್ಯ ವಿಮಾ ನಿಗಮ (ESIC) ಸದಸ್ಯರಾಗಿರುವವರು ಸಹ ಈ ಯೋಜನೆಗೆ ಅರ್ಹರಲ್ಲ.
- ಉದ್ಯೋಗಿ ಯಾವುದೇ ಮೊತ್ತವನ್ನು ಠೇವಣಿ ಮಾಡಿದರೆ, ಸರ್ಕಾರವು ಆ ಖಾತೆಗೆ ಅದೇ ಮೊತ್ತವನ್ನು ಜಮಾ ಮಾಡುತ್ತದೆ. ಉದಾಹರಣೆಗೆ, ಒಬ್ಬ ಕೆಲಸಗಾರ ತಿಂಗಳಿಗೆ ರೂ. 500 ಠೇವಣಿ ಇಟ್ಟರೆ, ಸರ್ಕಾರವು ತನ್ನ ಬದಿಯಲ್ಲಿ ರೂ. 500 ಠೇವಣಿ ಇಡುತ್ತದೆ, ಒಟ್ಟು ಮಾಸಿಕ ಠೇವಣಿ ರೂ. 1,000 ಆಗಿರುತ್ತದೆ.
- ಈ ಯೋಜನೆಗೆ ಅತೀ ಸಣ್ಣ ವಯಸ್ಸಿನಲ್ಲಿ ಸೇರ್ಪಡೆ ಆದ್ರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರುವ ವ್ಯಕ್ತಿಯು ತಿಂಗಳಿಗೆ ರೂ. 55 ಮಾತ್ರವೇ ನೀಡಬೇಕಾಗುತ್ತದೆ. 40 ವರ್ಷ ವಯಸ್ಸಿನ ವ್ಯಕ್ತಿಗೆ, ಮಾಸಿಕ ಕೊಡುಗೆ 200 ರೂ.
- ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ನೀವು ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
Also Read : Lakhpati Didi Yojana : ಬಡ್ಡಿಯಿಲ್ಲದೇ ಮಹಿಳೆಯರಿಗೆ 5 ಲಕ್ಷ ರೂ ಸಾಲ : ಕೇಂದ್ರ ಸರಕಾರದ ಹೊಸ ಯೋಜನೆ ಜಾರಿ
ಯೋಜನೆ ಸೇರ್ಪಡೆಗೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಉಳಿತಾಯ ಬ್ಯಾಂಕ್ ಖಾತೆ. ನಿಮ್ಮ ಖಾತೆಯೊಂದಿಗೆ ನೀವು IFSC ವಿವರಗಳನ್ನು ಸಹ ಒದಗಿಸಬೇಕಾಗುತ್ತದೆ.
- ಅರ್ಜಿ ಪ್ರಕ್ರಿಯೆ (CSC ಮೂಲಕ)
- ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ.
- ಅಗತ್ಯವಿರುವ ದಾಖಲೆಗಳನ್ನು (ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್) ಸಲ್ಲಿಸಿ.
- CSC ಆಪರೇಟರ್ ನಿಮ್ಮ ಮಾಹಿತಿಯನ್ನು ನಮೂದಿಸಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ.
- ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನೀವು CSC ನಿಂದಲೇ ನಿಮ್ಮ ಶ್ರಮ ಯೋಗಿ ಪಿಂಚಣಿ ಖಾತೆ ಸಂಖ್ಯೆ (SPNA) ಮತ್ತು ಶ್ರಮ ಯೋಗಿ ಕಾರ್ಡ್ ಅನ್ನು ಪಡೆಯುತ್ತೀರಿ.
- ಆನ್ಲೈನ್ ಅರ್ಜಿ (ಸ್ವಯಂ)
ಯೋಜನೆಯ ಅಧಿಕೃತ ವೆಬ್ಸೈಟ್ https://maandhan.in/ ಗೆ ಭೇಟಿ ನೀಡಿ.
PM-SYM Yojana- Pradhan Mantri Shram Yogi Maandhan Yojana Under this scheme Rs 3000 will be given every month Men will get money in Kannada News