ಗಣರಾಜ್ಯೋತ್ಸವಕ್ಕೆ ಓಪನ್ ಆಯ್ತು ಚಾಂದಿನಿ ಬಾರ್ !

0

ಸ್ಯಾಂಡಲ್ ವುಡ್ ನಲ್ಲಿ ಹೊಸಪ್ರಯತ್ನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತೆ. ಇಂಥಹ ಹೊಸಬರ ಹೊಸ ಪ್ರಯತ್ನದ ಸಾಲಿಗೆ ಮತ್ತೊಂದು ತಂಡ ಸೇರ್ಪಡೆಯಾಗಿದ್ದು, ಮೊದಲ ಬಾರಿಗೆ ರಾಘವೇಂದ್ರ ಕುಮಾರ್ ಆಕ್ಷನ್ ಕಟ್ ಹೇಳಿ ನಾಯಕ ನಟನಾಗಿ ನಟಿಸಿದ್ದಾರೆ. ಕ್ಯಾಮೆರಾ ಮೂವೀಸ್ ನಿರ್ಮಾಣದ ಈ ಸಿನಿಮಾ ಟೈಟಲ್ ನಿಂದನೇ ಸಾಕಷ್ಟು ಸದ್ದು ಮಾಡ್ತಿದ್ದು, ಸಿನಿಮಾ ತಂಡ ಈಗಾಗಲೇ ಚಿತ್ರೀಕರಣ ಮುಗಿಸಿದೆ.

ಈ ಚಾಂದಿನಿ ಬಾರ್ ಎಂಬ ವಿಭಿನ್ನ ಟೈಟಲ್ ಮೂಲಕ ಚಂದನವನದಲ್ಲಿ ಸದ್ದು ಮಾಡಲು ಹೊರಟಿರೋ ರಾಘವೇಂದ್ರ ಕುಮಾರ್ ಮತ್ತು ತಂಡ, ಗಣರಾಜ್ಯೋತ್ಸವ ದಿನದಂದೇ ಪೋಸ್ಟರ್ ರಿಲೀಸ್ ಮಾಡಿದೆ.

ಬಾರ್ ನಲ್ಲಿ ಕೆಲ್ಸ ಮಾಡೋವ್ರ ಕಥೆಯಾಗಿದ್ದು, ಇದೊಂದು ಕುಡಿಯೋವ್ರ ಕಥೆಯಲ್ಲಾ ದುಡಿಯೋವ್ರ ಕಥೆ ಅಂತ ಹೇಳ್ತಾರೆ ನಿರ್ದೇಶಕ ಮತ್ತು ನಟ ರಾಘವೇಂದ್ರ ಕುಮಾರ್.

ಟೈಟಲ್ ಜೊತೆ ಸಬ್ ಟೈಟಲ್ ನಲ್ಲಿ ಸರ್ವೇ ಜನೋ ಸುಖಿನೋ ಭವಂತು ಎಂಬ ಸಾಲಿನೊಂದಿಗೆ ಸಾಕಷ್ಟು ಕುತೂಹಲ ಮೂಡಿಸೋ ಪೋಸ್ಟರ್, ಮದ್ಯದ ಅಂಗಡಿಯ ಬೋರ್ಡ್ ತರನೇ ಇರೋದು ವಿಶೇಷ ಅನ್ಸುತ್ತೆ. ಚಿತ್ರದ ನಾಯಕಿಯಾಗಿ ಸುಕೃತಿ ಪ್ರಭಾಕರ್ ನಟಿಸುತ್ತಿದ್ದು, ಚೇತನ್ ಶರ್ಮಾ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ.

ಉಳಿದಂತೆ ತಾರಾಂಗಣದಲ್ಲಿ ಸಂಪತ್ ಕುಮಾರ್ (ಕವಲುದಾರಿ), ಸೂರ್ಯ ಶೇಖರ್ (ಕೆ ಜಿ ಎಫ್),ಶ್ರೀ ವತ್ಸ, ರಶ್ಮಿ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ರಾಮ್ ಕ್ರಿಷ್ ಅವರ ಸಂಗೀತ ಚಿತ್ರಕ್ಕಿದ್ದು, ಬಿಎಸ್ ಕೆಂಪರಾಜ್ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಪೋಸ್ಟರ್ ಮೂಲಕನೇ ಸದ್ದು ಮಾಡ್ತಿರೋ ಈ ಚಾಂದಿನಿ ಬಾರ್ ಚಿತ್ರತಂಡ ಸೆನ್ಸಾರ್ ಮುಗಿಸಿದ್ದು, ಅಂದುಕೊಂಡಂತೆ ಆದ್ರೆ ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇಡೀ ತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.

Leave A Reply

Your email address will not be published.