ಭಾನುವಾರ, ಏಪ್ರಿಲ್ 27, 2025
HomeCrimeಹುಟ್ಟುಹಬ್ಬದಂದೇ ಸಂಕಷ್ಟಕ್ಕೆ ಸಿಲುಕಿದ ದುನಿಯಾ ವಿಜಿ

ಹುಟ್ಟುಹಬ್ಬದಂದೇ ಸಂಕಷ್ಟಕ್ಕೆ ಸಿಲುಕಿದ ದುನಿಯಾ ವಿಜಿ

- Advertisement -

ಬೆಂಗಳೂರು : ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದುನಿಯಾ ವಿಜಯ್ ವಿವಾದವೊಂದನ್ನು ಮೈಮೆಳೆದುಕೊಂಡಿದ್ದಾರೆ. ತನ್ನ ಕುಟುಂಬ ಹಾಗೂ ಅಭಿಮಾನಿಗಳ ಜೊತೆ ದುನಿಯಾ ವಿಜಯ್ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದಕ್ಷಿಣ ವಲಯ ಡಿಸಿಪಿ ರೋಹಿಣಿ ಕಟೋಚ್ ವಿಜಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ.


ದುನಿಯಾ ವಿಜಿ ಕಳೆದ ರಾತ್ರಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರೋ ನಿವಾಸದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆಯಲ್ಲಿ ತಲ್ವಾರ್ ನಿಂದ ಕೇಕ್ ಕತ್ತಿರಿಸಿರೋ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಗಿರಿನಗರ ಠಾಣೆ ಇನ್ಸ್​ಪೆಕ್ಟರ್​ ಸಿದ್ದಲಿಂಗಯ್ಯ ಅವರಿಗೆ ಡಿಸಿಪಿ ರೋಹಿಣಿ ಕಟೋಚ್ ವಿಚಾರಣೆ ನಡೆಸುವಂತೆ ಸೂಚನೆಯನ್ನು ನೀಡಿದ್ದಾರೆ.

ಕಾನೂನು ಪ್ರಕಾರ ಐದು ಇಂಚಿಗೂ ಉದ್ದದ ಕತ್ತಿಯನ್ನು ಬಳಸುವಂತಿಲ್ಲ, ಇಟ್ಟುಕೊಳ್ಳುವಂತಿಲ್ಲ. ಅಕ್ರಮವಾಗಿ ಅಂತಹ ಕತ್ತಿಯನ್ನು ಇಟ್ಟುಕೊಂಡಲ್ಲಿ ಪೊಲೀಸರು ಅಂತಹವರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿ ಕೇಸ್ ದಾಖಲಿಸಲು ಅವಕಾಶವಿದೆ. ಅದರಲ್ಲೂ ನಟನಾದವರು ಸಮಾಜಕ್ಕೆ ಇಂತಹ ಕೆಟ್ಟ ಸಂದೇಶ ರವಾನೆ ಮಾಡಿರುವುದು ಎಷ್ಟು ಸರಿ ಅನ್ನೋ ಮಾತುಗಳು ಇದೀಗ ಕೇಳಿಬರುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular