ಬುಧವಾರ, ಜೂನ್ 18, 2025
HomeCinemaಚಿರು ನೀನೆಲ್ಲಿದ್ದರೂ ಸಂತೋಷವಾಗಿರು...! ಮನಮುಟ್ಟುವ ಸಾಲು ಬರೆದಿದ್ದ್ಯಾರು ಗೊತ್ತಾ..?!

ಚಿರು ನೀನೆಲ್ಲಿದ್ದರೂ ಸಂತೋಷವಾಗಿರು…! ಮನಮುಟ್ಟುವ ಸಾಲು ಬರೆದಿದ್ದ್ಯಾರು ಗೊತ್ತಾ..?!

- Advertisement -

ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ಆರು ತಿಂಗಳು ಕಳೆಯುತ್ತಿದ್ದರೂ ಚಿರು ವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆತನ ಆಪ್ತರ ಪಾಲಿಗೆ ಇನ್ನೂ ಆ ಸತ್ಯ ಒಪ್ಪಿಕೊಳ್ಳೋದು ಕಷ್ಟವೇ. ಹೀಗಾಗಿ ಒಬ್ಬರಾದ ಮೇಲೊಬ್ಬರು ಚಿರು ಜೊತೆಗಿನ ಪೋಟೋ ಹಾಗೂ ನೆನಪು ಹಂಚಿಕೊಳ್ಳುತ್ತಲೇ ಇದ್ದಾರೆ.

Chiru

ಚಿರು ಜೊತೆಗಿನ ಪೋಟೋ, ಅವರ ಆಪ್ತ ಬರಹಗಳು ಚಿರುವಿನ ಆತನ ಆಪ್ತರು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸುವುದರ ಜೊತೆಗೆ ಚಿರು ಅಭಿಮಾನಿಗಳ ಕಣ್ಣಲ್ಲೂ ನೀರು ತರಿಸುತ್ತಿದೆ.

Chiru Sarja 1

ಮೊನ್ನೆ ಮೊನ್ನೆ ಅರ್ಜುನ ಸರ್ಜಾ ಚಿರು ಜೊತೆಗಿನ ಪೋಟೋ ಹಂಚಿಕೊಂಡು ಕಣ್ಣಿರಿಟ್ಟಿದ್ದರೇ, ಈಗ ನಟಿ ಅನು ಪ್ರಭಾಕರ ಸರದಿ. ಚಿರು ಜೊತೆಗಿನ ಬಾಲ್ಯದ ನೆನಪನ್ನು ಬಿಚ್ಚಿಟ್ಟಿರುವ ಅನು ಎಂಥಹವರ ಮನಸ್ಸು ಕರಗುವಂತ ಸಾಲುಗಳನ್ನು ಬರೆದುಕೊಂಡಿದ್ದಾರೆ.

Anuprabhakaer 1

ಅರ್ಜುನ್ ಸರ್ಜಾ ವಿವಾಹ ನಿಶ್ಚಿತಾರ್ಥದ ಪೋಟೋಗಳನ್ನು ಹಂಚಿಕೊಂಡಿರುವ ಅನು ಪ್ರಭಾಕರ್, ನಾನು ಅಕ್ಕ ನಿವೇದಿತಾ ತೊಡೆ ಮೇಲೆ, ನೀನು ಭಾವ ಅರ್ಜುನ್ ಸರ್ಜಾ ತೊಡೆ ಮೇಲೆ, ಇದೊಂದು ಬೆಲೆ ಕಟ್ಟಲಾಗದ ಪೋಟೋ ಚಿರು. ನೀನು ಎಲ್ಲಿದ್ದರೂ ಸಂತೋಷವಾಗಿ, ಶಾಂತವಾಗಿ ಎಂಬ ವಿಶ್ವಾಸ ನನಗಿದೆ ಎಂದು ಬರೆದುಕೊಂಡಿದ್ದಾರೆ.

Anu

ಅನು ಪ್ರಭಾಕರ್ ಈ ಭಾವನಾತ್ಮಕ ಬರಹ ಹಾಗೂ ಅಪ್ತ ಪೋಟೋಗೆ ಸರ್ಜಾ ಕುಟುಂಬದ ಸದಸ್ಯರು ಅಷ್ಟೇ ಹೃದಯಸ್ಪರ್ಶಿಯಾಗಿ ಪ್ರತಿಕ್ರಿಯಿಸಿದ್ದು, ಐಶ್ವರ್ಯಾ ಅರ್ಜುನ್, ಹಾರ್ಟ್ ಇಮೋಜಿ ಮೂಲಕ ತಮ್ಮ ರಿಪ್ಲೈ ನೀಡಿದ್ದಾರೆ.

ಚಿರುಗೆ ಬಾಲ್ಯದಿಂದಲೂ ಸ್ನೇಹಿತರ ಹಾಗೂ ಸಂಬಂಧಿಗಳ ಜೊತೆ ಆಹ್ಲಾದಕರ ಸಂಬಂಧವಿತ್ತು. ಎಲ್ಲರೊಂದಿಗೂ ಒಳ್ಳೆಯ ನಂಟು ಹೊಂದಿದ್ದರು.‌ಹೀಗಾಗಿ‌ ನಿಧನದ  ಆರು ತಿಂಗಳ ಬಳಿಕವೂ ಅವರ ಸ್ನೇಹಿತರು,ಕುಟುಂಬದ ಆಪ್ತರು, ಸಂಬಂಧಿಗಳು ಕಣ್ಣಿರಿಡುತ್ತಿದ್ದಾರೆ‌.

Chiru Sarja 3

ಚಿರು ನಿಧನದ ನಾಲ್ಕು ತಿಂಗಳ ಬಳಿಕ ಅಕ್ಟೋಬರ್ 22 ರಂದು ಮೇಘನಾ ರಾಜ್ ಗಂಡುಮಗುವಿಗೆ ಜನ್ಮ ನೀಡಿದ್ದು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಚಿರುವೇ ಮತ್ತೆ ಹುಟ್ಟಿಬಂದಿದ್ದಾನೆ ಎಂದು ಭಾವಿಸಿದ್ದಾರೆ

RELATED ARTICLES

Most Popular