free kgf2 tickets : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾವು ಯಶಸ್ಸಿನ ಉತ್ತುಂಗದಲ್ಲಿದೆ. ಯಾವ ಸಿನಿಮಾ ತಜ್ಞರು ಊಹಿಸಲಿಕ್ಕೂ ಸಾಧ್ಯವಾಗದ ರೀತಿಯಲ್ಲಿ ಸಿನಿಮಾವು ನಾಗಾಲೋಟದಿಂದ ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುತ್ತಿದೆ. ಸಿನಿಮಾ ರಿಲೀಸ್ ಆದ ನಾಲ್ಕು ದಿನಗಳಲ್ಲಿ ಸಿನಿಮಾವು ಬರೋಬ್ಬರಿ 552 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ.
ಕೆಜಿಎಫ್ ಚಾಪ್ಟರ್ 2 ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿರುವ ಬೆನ್ನಲ್ಲೇ ಖಾಸಗಿ ಕಂಪನಿಯಾದ ಮೆಮೆಚಾಟ್ ತನ್ನ ಉದ್ಯೋಗಿಗಳಿಗೆ ಕೆಜಿಎಫ್ 2 ಸಿನಿಮಾದ ಟಿಕೆಟ್ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ತನ್ನ ಕಂಪನಿಯ ಉದ್ಯೋಗಿಗಳಿಗೆ ಮಾತ್ರವಲ್ಲದೇ ಇಂಟರ್ನ್ಗಳಿಗೂ ಉಚಿತ ಟಿಕೆಟ್ ನೀಡಲಿದೆ.
ಸಿನಿಮಾ ವಿಶ್ಲೇಷಕರು ನೀಡಿರುವ ಮಾಹಿತಿಯ ಪ್ರಕಾರ, ವಾರಾಂತ್ಯದಲ್ಲಿ ವಿಶ್ವದಲ್ಲೇ ಬಾಕ್ಸಾಫೀಸಿನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾದಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ. ಈ ಪಟ್ಟಿಯಲ್ಲಿ ಕೆಜಿಎಫ್ 2 ಸಿನಿಮಾವು ಫೆಂಟಾಸ್ಟಿಕ್ ಬೀಸ್ಟ್ 3 ಹಾಗೂ ಸೋನಿಕ್ ಹೆಡ್ಜ್ಹಾಗ್ 2 ವನ್ನು ಹಿಂದಿಕ್ಕಿದೆ. ಇದು ಮಾತ್ರವಲ್ಲದೇ ಜಾಗತಿಕವಾಗಿ ಟಾಪ್ 10 ಸಿನಿಮಾಗಳ ಪೈಕಿ ಏಪ್ರಿಲ್ 15ರಿಂದ 17ರ ಕಾಮ್ಸ್ಕೋರ್ ಪಟ್ಟಿಯಲ್ಲಿ ಕೆಜಿಎಫ್ 2 ಎರಡನೇ ಸ್ಥಾನದಲ್ಲಿದೆ.
Puneeth: ಮತ್ತೆ ಅಪ್ಪು ಬಂದ್ರು ಅಪ್ಪು: ಜೇಮ್ಸ್ ಏಪ್ರಿಲ್ 22 ರಿಂದ ಥಿಯೇಟರಿಗೆ! ಕಾರಣ ಏನು ಗೊತ್ತಾ?
ಪುನೀತ್ ರಾಜ್ ಕುಮಾರ್(Puneeth) ಅಭಿನಯದ ಜೇಮ್ಸ್ ಚಿತ್ರ ನೋಡಿದವರಿಗೆ ಒಂದೇ ಒಂದು ಕೊರತೆ ಎದ್ದು ಕಾಣುತ್ತಿತ್ತು. ಅದುವೇ, ಪುನೀತ್ ಪಾತ್ರಕ್ಕೆ ಪುನೀತ್ ಅವರದೇ ದನಿ ಇರಬೇಕಿತ್ತು ಅನ್ನೋದು. ಇದನ್ನು ಸರಿದೂಗಿಸಲೋ ಏನೋ ಶಿವರಾಜ್ ಕುಮಾರ್ ಅವರ ದನಿಯನ್ನು ಪುನೀತ್ ಪಾತ್ರಕ್ಕೆ ಹೊಂದಿಸಲಾಗಿತ್ತು. ಚಿತ್ರ ನೋಡಿದ ಅಭಿಮಾನಿಗಳು, ಪ್ರೇಕ್ಷಕರ ಮನಸ್ಸಲ್ಲಿ ಪುನೀತ್ ದನಿ ಇದ್ದಿದ್ದರೆ ಬಹಳ ಚೆನ್ನಾಗಿತ್ತು. ಹೋಗಲಿ, ಶಿವಣ್ಣನ ದನಿಯಾದರು ಇದೆಯಲ್ಲ ಅಂತ ಸಮಾಧಾನ ಪಟ್ಟುಕೊಂಡಿದ್ದರು.
ಈಗ ಚಿತ್ರತಂಡ ಹೊಸ ತಾಂತ್ರಿಕ ಪ್ರಯೋಗ ಮಾಡುವುದರ ಮೂಲಕ ಪುನೀತ್ ಅವರ ಪಾತ್ರಕ್ಕೆ ಅವರದೇ ದನಿಯನ್ನು ಸೇರಿಸಲು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೇಮ್ಸ್ ಸಿನಿಮಾವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ. ನಟರ ದನಿಯನ್ನು ಮರು ಸೃಷ್ಟಿ ಮಾಡುವುದು ಬಹಳ ಕಷ್ಟ. ಈ ವಿಚಾರವಾಗಿ ಕಳೆದ ಮೂರು ವರ್ಷಗಳಿಂದ ತೊಡಗಿಕೊಂಡಿರುವ ಸೌಂಡ್ ಎಂಜಿನಿಯರ್ ಶ್ರೀನಿವಾಸ್ ರಾವ್ ಪುನೀತ್ ಅವರ ದನಿಯನ್ನು ಮರುಸೃಷ್ಟಿ ಮಾಡುವಲ್ಲಿ ಗೆದ್ದಿದ್ದಾರೆ.
ಅಪ್ಪು ನಿಧನರಾದಾಗ ಜೇಮ್ಸ್ ನಿರ್ದೇಶಕ ಚೇತನ್, ಪುನೀತ್ ಅವರ ದನಿಯನ್ನೇ ಮರು ಸೃಷ್ಟಿಸುವ ಮಾತನ್ನು ಹೇಳಿದ್ದರು. ಆದರೆ, ಆ ಪ್ರಯತ್ನಗಳು ವಿಫಲವಾದವು. ಹೀಗಾಗಿ, ಶಿವರಾಜ್ ಕುಮಾರ್ ಅವರ ದನಿಯನ್ನು ಪಾತ್ರಕ್ಕೆ ಹೊಂದಿಸಿ ಸಿನಿಮಾ ಬಿಡುಗಡೆ ಮಾಡಿದ್ದರು. ‘ಈ ಹಿಂದೆ ಅಪ್ಪು ಅವರ ದನಿಯನ್ನು ಹೊಂದಿಸಲು ಪ್ರಯತ್ನ ಪಟ್ಟು ವಿಫಲರಾಗಿದ್ದು ನಿಜ. ಒಬ್ಬ ನಟನ 15 ಗಂಟೆಗಳ ಕಾಲ ಮಾತನಾಡಿದ ದನಿ ಸಿಕ್ಕರೆ ಮರುಸೃಷ್ಟಿ ಮಾಡಬಹುದಂತೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರ ಮೂಲಕ ಶ್ರೀನಿವಾಸ ರಾವ್ ಅವರನ್ನು ಹುಡುಕಿ, ಅಪ್ಪು ಅವರ ಹಿಂದಿನ ಚಿತ್ರಗಳು, ಕೋಟ್ಯಾಧಿಪತಿ ಶೋನ ಸುಮಾರು 15 ಗಂಟೆಗಳಷ್ಟು ದನಿಯನ್ನು ನೀಡಿದ್ದೆವು. ಅವರ ಸತತ 6 ತಿಂಗಳಕಾಲ ಕೆಲಸಮಾಡಿದ್ದರ ಫಲವಾಗಿ ಮತ್ತೆ ನಮಗೆ ಅಪ್ಪು ಅವರ ದನಿದೊರೆತಿದೆ’ ಎಂದು ಜೇಮ್ಸ ಚಿತ್ರದ ನಿರ್ದೇಶಕ ಚೇತನ್ ಹೇಳಿದ್ದಾರೆ.
ಅಪ್ಪು ದನಿ ಮರು ಸೃಷ್ಟಿಗಾಗಿ ಸುಮಾರು 16 ಮಂದಿ ಕೆಲಸ ಮಾಡಿದ್ದಾರಂತೆ. ಹೀಗಾಗಿ, ಏಪ್ರಿಲ್ 22 ರಿಂದ ಅಪ್ಪ ಧ್ವನಿಯಲ್ಲೇ ಮತ್ತೊಮ್ಮೆ ಜೇಮ್ಸ್ ಬಿಡುಗಡೆಯಾಗಲಿದೆ. ಆದರೆ, ಈ ಸಲ 61 ಸಿಂಗಲ್ ಥಿಯಟೇರ್ ಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುತ್ತಿದೆಯಂತೆ. ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನಗಳಿದ್ದು,ಪ್ರತಿದಿನ 2ರಿಂದ 3 ಶೋ ಇರಲಿದೆ. ಪ್ರಕ್ಷಕರ ಪ್ರತಿಕ್ರಿಯ ಆಧಾರದ ಮೇಲೆ ಥಿಯೇಟರ್ ಗಳ ಸಂಖ್ಯೆಯನ್ನು ಏರಿಸುವ ಯೋಚನ ನಿರ್ಮಾಪಕರ ಕಿಶೋರ್ ಪತ್ತಿಕೊಂಡ ಅವರಿಗಿದೆಯಂತೆ. ಒಟ್ಟಾರೆ, ಅಪ್ಪು ಅವರ ಸಿನಿಮಾದಲ್ಲಿ ಅಪ್ಪುದನಿಯಲ್ಲೇ ನೋಡುವುದು ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯಾಗಿದೆ.
ಇದನ್ನು ಓದಿ : RCB KGF 2 : ಆರ್ ಸಿ ಬಿ ಅಂಗಳದಲ್ಲಿ ಕೆಜಿಎಫ್-2 ಹವಾ : ಸಿನಿಮಾ ವೀಕ್ಷಿಸಿದ ಕ್ರಿಕೆಟ್ ಟೀಂ
ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್ನಲ್ಲಿ ವರ ಅರೆಸ್ಟ್
free kgf2 tickets has been announced by memechat app