ಸೋಮವಾರ, ಜೂನ್ 16, 2025
HomeBreakingRakshith shetty : ಕೊಟ್ಟ ಮಾತು ಉಳಿಸಿಕೊಂಡ್ರು, ರಿಚರ್ಡ್‌ ಆಂಟನಿ ಕಥೆ ಹೇಳೋಕೆ ರೆಡಿಯಾದ್ರು ರಕ್ಷಿತ್‌...

Rakshith shetty : ಕೊಟ್ಟ ಮಾತು ಉಳಿಸಿಕೊಂಡ್ರು, ರಿಚರ್ಡ್‌ ಆಂಟನಿ ಕಥೆ ಹೇಳೋಕೆ ರೆಡಿಯಾದ್ರು ರಕ್ಷಿತ್‌ ಶೆಟ್ಟಿ

- Advertisement -

ಸಿಂಪಲ್ ಸ್ಟಾರ್‌ ಅಂತಾನೇ ಖ್ಯಾತಿ ಪಡೆದಿರೋ ಸ್ಯಾಂಡಲ್‌ ವುಡ್‌ ನಟ ರಕ್ಷಿತ್‌ ಶೆಟ್ಟಿ ಈಗಾಗಲೇ ನಟನೆ, ನಿರ್ದೇಶನದಲ್ಲಿಯೂ ಸೈ ಎನಿಸಿದ್ದಾರೆ. ಉಳಿದವರು ಕಂಡಂತೆ, ಕಿರಿಕ್‌ ಪಾರ್ಟಿ ಮೂಲಕ ವಿಭಿನ್ನ ಸಿನಿಮಾಗಳನ್ನು ನೀಡಿದ್ದ ರಕ್ಷಿತ್‌ ಶೆಟ್ಟಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ಅವರ ಮೈ ಮೇಲೆ ವಿವಾದವೊಂದು ಸುತ್ತಿಕೊಂಡಿದ್ದು ಜುಲೈ ೧೧ರಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಅಂತ ಹೇಳಿದ್ದರು. ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು ಅಂತ ಹೇಳಿದ್ದ ರಕ್ಷಿತ್‌ ಶೆಟ್ಟಿ ಇದೀಗ ತಾವು ಹೇಳಿಕೊಂಡಂತೆ ನಡೆದುಕೊಂಡಿದ್ದಾರೆ. ಪುಣ್ಯಕೋಟಿಯ ಕಥೆ ಹೇಳೋಕೆ ಹೊರಟಿದ್ದ ರಕ್ಷಿತ್‌ ಶೆಟ್ಟಿ ಸಡನ್‌ ಆಗಿ ರಿಚರ್ಡ್‌ ಆಂಟನಿ ಕಥೆಯನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.

ಕೆಜಿಎಫ್‌, ರಾಜಕುಮಾರ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಹೊಂಬಾಳೆ ಫಿಲ್ಸ್ಮ್‌ ಇದೀಗ ರಕ್ಷಿತ್‌ ಶೆಟ್ಟಿ ನಿರ್ದೇಶನದ ಸಿನಿಮಾಕ್ಕೆ ಬಂಡವಾಳ ಹೂಡಲು ಸಜ್ಜಾಗಿದೆ. ಹೊಂಬಾಳೆ ಫಿಲ್ಮ್ಸ್‌ ಕೂಡ ಗುಡ್‌ ನ್ಯೂಸ್‌ ಕೊಡುವುದಾಗಿ ಹೇಳಿತ್ತು. ಅಂತೆಯೇ ಭರ್ಜರಿಯಾಗಿಯೇ ತಮ್ಮ ನಿರ್ಮಾಣದ ಹೊಸ ಸಿನಿಮಾದ ಟೈಟಲ್‌ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಮಾಡಿದೆ.

ಕೆಲವು ಕಂಡಿದ್ದು, ಕೆಲವು ಕಾಣದ್ದು ಉಳಿದವು ಅಂತೆ ಕಂತೆಗಳು ಮತ್ತು ಇತರ ಸುಳ್ಳುಗಳು ಎಂದು ಟೀಸರ್‌ ನಲ್ಲಿ ಹೇಳಲಾಗಿದೆ. ಟೀಸರ್‌ ನೋಡಿದ್ರೆ ಉಳಿದವರು ಕಂಡಂತೆ ಸಿನಿಮಾದ ಮುಂದುವರಿದ ಭಾಗ ಎನ್ನಲಾಗುತ್ತಿದೆ. ನಟ ಅಚ್ಯುತ್‌ ಕುಮಾರ್‌ ನಟನೆಯಲ್ಲಿ ಮೂಡಿಬಂದಿರುವ ಟೀಸರ್‌ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ.

ರಿಚರ್ಡ್‌ ಆಂಟನಿ ಸಿನಿಮಾವನ್ನು ನಟ ರಕ್ಷಿತ್‌ ಶೆಟ್ಟಿ ಅವರೇ ನಿರ್ದೇಶನ ಮಾಡಲಿದ್ದು, ವಿಜಯ ಕಿರಗುಂದರ ಬಂಡವಾಳ ಹೂಡಲಿದ್ದಾರೆ. ಅಲ್ಲದೇ ಅಜನೀಶ್‌ ಲೋಕನಾಥ್‌ ಸಂಗೀತದ ಜೊತೆಗೆ ಕರಮ್‌ ಚಾವ್ಲಾ ಛಾಯಾಗ್ರಹಣ ಇರಲಿದೆ. ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದನ್ನ ಚಿತ್ರತಂಡ ಸಸ್ಪೆನ್ಸ್‌ ಆಗಿ ಇಟ್ಟಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular