ಸೋಮವಾರ, ಏಪ್ರಿಲ್ 28, 2025
HomeCinemaಅಪ್ಪುಗೆ ಅವಮಾನ : ತಮಿಳು ನಟರ ವಿರುದ್ಧ ಧ್ವನಿಎತ್ತಿದ ನಟಭಯಂಕರ

ಅಪ್ಪುಗೆ ಅವಮಾನ : ತಮಿಳು ನಟರ ವಿರುದ್ಧ ಧ್ವನಿಎತ್ತಿದ ನಟಭಯಂಕರ

- Advertisement -

ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ಮೂರು ದಿನ ಕಳೆದಿದೆ. ಹಗಲು ರಾತ್ರಿಯ ಪರಿವೇ ಇಲ್ಲದೇ ೨೦ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಆದರೆ ತಮಿಳು ಚಿತ್ರರಂಗ ಮಾತ್ರ ಪುನೀತ್ ಮರೆತಿದ್ದು ಇದಕ್ಕೆ ನಟಭಯಂಕರ ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ವೀಟ್ ಮಾಡಿರೋ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್, ಅಪ್ಪು ಸರ್ ಸತ್ತ 3 ದಿನ ಮಣ್ಣಾದ್ರು. ತಮಿಳಿನಿದ ಕಲಾವಿದರು ಅಂತಿಮ ದರ್ಶನಕ್ಕೆ ಬಂದ್ರಾ ಅಂತ ಪ್ರಶ್ನಿಸಿದ್ದಾರೆ.

ಮಾತ್ರವಲ್ಲ, ರಜನಿಕಾಂತ್ ಗೆ ಹುಶಾರಿಲ್ಲ ಒಕೆ, ಮಿಕ್ಕವರು ಏನು ಕಿತ್ತಾಕ್ತಿದ್ರಿ ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಮ್ಮವರಿಗೆ ಸ್ವಾಭಿಮಾನ ಇದ್ದರೇ ಅವ್ರ ಸಿನಿಮಾ ನೋಡ್ಬೇಡಿ ಹಾಗೇ ಕರ್ನಾಟಕದಲ್ಲಿ ರಿಲೀಸ್ ಮಾಡಬೇಡಿ ಎಂದು ಪ್ರಥಮ್ ತಾಕೀತು ಮಾಡಿದ್ದಾರೆ. ರಜನಿಕಾಂತ್, ಆಕ್ಟರ್ ವಿಜಯ್,ಕಮಲ್ ಹಾಸನ್,ರಾಘವ್ ಲಾರೇನ್ಸ್ ಹಾಗೂ ಅಜಿತ್ ರನ್ನು ಟ್ಯಾಗ್ ಮಾಡಿದ್ದಾರೆ.

ಪುನೀತ್ ನಿಧನದ ಹಿನ್ನೆಲೆಯಲ್ಲಿ ತಮಿಳು ಸೇರಿದಂತೆ ಸೌತ್ ಇಂಡಸ್ಟ್ರಿಯ ಹಲವು ಖ್ಯಾತ ನಟರು ಆಗಮಿಸಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದು ಕೊಂಡಿದ್ದಾರೆ. ಆದರೆ ತಮಿಳು ನಟರು ಮಾತ್ರ ಪುನೀತ್ ರಿಗೆ ಕೊನೆಯ ಸಲ ಗೌರವ ಸಲ್ಲಿಸಲು ಬಾರದೇ ಇರೋದು ಪ್ರಥಮ್ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಥಮ್ ಟ್ವೀಟ್ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದು ಕನ್ನಡಿಗರು ತಮಿಳು ಸಿನಿಮಾ ಹಾಗೂ ನಟರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular