ಭಾನುವಾರ, ಏಪ್ರಿಲ್ 27, 2025
HomeCinemaPunit Rajkumar : ಪುನೀತ್‌ ರಾಜ್‌ ಕುಮಾರ್‌ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ : ಈ ಮಾರ್ಗದಲ್ಲಿ...

Punit Rajkumar : ಪುನೀತ್‌ ರಾಜ್‌ ಕುಮಾರ್‌ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ : ಈ ಮಾರ್ಗದಲ್ಲಿ ಸಾಗುತ್ತೆ ಅಂತಿಮ ಯಾತ್ರೆ

- Advertisement -

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಪುನೀತ್‌ ರಾಜ್‌ ಕುಮಾರ್‌ ಅವರ ನಿಧನಕ್ಕೆ ಕರುನಾಡು ಕಂಬನಿ ಮಿಡಿಯುತ್ತಿದೆ. ಹೃದಯಾಘಾತದಿಂದ ಮೃತಪಟ್ಟಿರುವ ಅಪ್ಪು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ನಾಳೆ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಅಂತಿಮ ಯಾತ್ರೆ ಆರಂಭಗೊಳ್ಳಲಿದೆ.

ಸ್ಯಾಂಡಲ್‌ವುಡ್‌ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ನಡೆಯುತ್ತಿದ್ದು, ಮುಂಜಾನೆಯ ವರೆಗೂ ಅಭಿಮಾನಿಗಳು ಪುನೀತ್‌ ರಾಜ್‌ ಕುಮಾರ್‌ ಅವರ ದರ್ಶನ ಪಡೆಯಲಿದ್ದಾರೆ. ನಾಳೆ ನಡೆಯುವ ಅಂತ್ಯಕ್ರೀಯೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ನಾಳೆ ಬೆಳಗ್ಗೆ ಪುನೀತ್‌ ರಾಜ್‌ ಕುಮಾರ್‌ ಅವರ ಅಂತ್ಯ ಸಂಸ್ಕಾರದ ಹಿನ್ನೆಲೆಯಲ್ಲಿ ಬೆಳಗ್ಗೆ 5 ಗಂಟೆಗೆ ಕಠೀರವ ಸ್ಟುಡಿಯೋದಲ್ಲಿ ಕುಟುಂಬ ಸದಸ್ಯರು ಸೇರಲಿದ್ದೇವೆ. ನಂತರ ಅಂತಿಮ ವಿಧಿವಿಧಾನಗಳು ನಡೆಯಲಿದೆ. ಕುಟುಂಬಸ್ಥರಯ ಹಾಲು, ತುಪ್ಪ ಶಾಸ್ತ್ರ ಮಾಡಬೇಕಾಗಿರುವ ಹಿನ್ನೆಲೆಯ ಬೆಳಗ್ಗೆ ಬೇಗನೇ ಅಂತ್ಯಕ್ರೀಯೆಯನ್ನು ನಡೆಯಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ. ಆದ್ರೆ ಅಂತ್ಯಕ್ರೀಯೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮನವಿ ಮಾಡಿಕೊಂಡಿದ್ದಾರೆ.

ಕಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಡಾ.ರಾಜ್‌ ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ ಕುಮಾರ್‌ ಅವರ ಸಮಾಧಿಯ ಪಕ್ಕದಲ್ಲಿಯೇ ಪುನೀತ್‌ ರಾಜ್‌ ಕುಮಾರ್‌ ಸಮಾಧಿ ಮಾಡಲು ಸಿದ್ದತೆ ನಡೆದಿದೆ. ಕಠೀರವ ಕ್ರೀಡಾಂಗಣದಿಂದ ಅಂತಿಮ ಯಾತ್ರೆ ಆರಂಭಗೊಳ್ಳಲಿದ್ದು, ಕಂಠೀರವ ಕ್ರೀಡಾಂಗಣದ ಹಿಂಬದಿ ಬಾಗಿಲಿನ ಮೂಲಕ ಆರಂಭವಾಗಿ, ಆರ್‌ ಆರ್‌ಎಂಆರ್‌ ರಸ್ತೆಯ ಮೂಲಕ ಹಡ್ಸನ್‌ ವೃತ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್‌ ಸರ್ಕಲ್‌, ಕೆ.ಆರ್.‌ ಸರ್ಕಲ್‌, ಶೇಷಾದ್ರಿ ರಸ್ತೆ, ಸಿಐಡಿ ಜಂಕ್ಷನ್‌, ಚಾಲುಕ್ಯ ರಸ್ತೆ, ವಿಂಡ್ಸರ್‌ ಮ್ಯಾನರ್‌ ಜಂಕ್ಷನ್‌, ಬಿಡಿಎ ರಾಂಪ್‌, ಪಿ.ಜಿ.ಹಳ್ಳಿ ಕ್ರಾಸ್‌, ಭಾಷ್ಯಂ ವೃತ್ತ, ಸ್ಯಾಂಕಿ, ಮಲ್ಲೇಶ್ವರಂ ೧೮ನೇ ಕ್ರಾಸ್‌, ಮಾರಮ್ಮ ರಸ್ತೆ, ಬಿಎಚ್‌ಇಎಲ್‌ ಸರ್ವಿಸ್‌ ರಸ್ತೆ, ಬಿಎಸ್‌ಇಎಲ್‌ ವೃತ್ತದಿಂದ ಯಶವಂತಪುರ ವೃತ್ತ, ಮಾರಪ್ಪನ ಪಾಳ್ಯ, ಗೊರಗುಂಟೆ ಪಾಳ್ಯ, ಸಿಎಂಐಟಿ ಜಂಕ್ಷನ್‌ ಮೂಲಕ ಹಾದು ಕಂಠೀರವ ಸ್ಟುಡಿಯೋ ಪ್ರವೇಶಿಸಲಿದೆ.

ಬೆಳಗ್ಗೆ 10.30 ರ ಒಳಗಾಗಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನೆರವೇರಲಿದೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರೀಯೆಯನ್ನು ನಡೆಸಲು ರಾಜ್ಯ ಸರಕಾರ ಸಿದ್ದತೆಯನ್ನು ಮಾಡಿಕೊಂಡಿದೆ. ಈ ಕುರಿತು ಪುನೀತ್‌ ರಾಜ್‌ ಕುಮಾರ್‌ ಅವರ ಕುಟುಂಬಸ್ಥರ ಜೊತೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು : ತಂದೆಯಂತೆಯೇ ನೇತ್ರದಾನ ಮಾಡಿದ ಪುನೀತ್‌ ರಾಜ್‌ ಕುಮಾರ್‌

ಇದನ್ನೂ ಓದಿ :  ಪುನೀತ್‌ ರಾಜ್‌ ಕುಮಾರ್‌ ನಿಧನಕ್ಕೆ ಕಂಬನಿ ಮಿಡಿದ ಸೆಹವಾಗ್‌

( Puneeth Raj Kumar death and Last Slight, final procession and ritual Timings )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular