Renukaswamy Murder Case; ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ 17 ಜನ ಆರೋಪಿಗಳಲ್ಲಿ 3 ಜನರಿಗೆ ಸೆಪ್ಟಂಬರ್ 23 ರಂದು ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಪ್ರಕರಣದ ಎ 15 ಕಾರ್ತಿಕ್, ಎ16 ಕೇಶವ್ ಮೂರ್ತಿ,ಎ 17 ನಿಖಿಲ್ ನಾಯಕ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಸೆಪ್ಟಂಬರ್ 23 ರಂದು ಎ 15 ಹಾಗೂ ಎ17 ಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಎ 16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಆರೋಪಿಗಳು ಷ್ಯೂರಿಟಿ ಸಲ್ಲಿಸಿದ ಕಾರಣ ಇಂದು ಷ್ಯೂರಿಟಿ ಸಲ್ಲಿಸಿದ ಬಳಿಕ ರಿಲೀಸ್ ಆಗಿದ್ದಾರೆ.

ಇನ್ನು ಈ ಮೂವರು ಆರೋಪಿಗಳು ನೇರವಾಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹಾಗೂ ಪ್ರಕರಣದ ಸಾಕ್ಷ್ಯ ನಾಶಕ್ಕೆ ಅಷ್ಟೇ ಯತ್ನಿಸಿದ್ದಾರೆಂದು ಅವರಿಗೆ ಜಾಮೀನು ದೊರೆತಿದೆ. ಜಾಮೀನು ಸಿಕ್ಕಿ 10 ದಿನವಾದ್ರೂ ನಿಖಿಲ್ , ಕಾರ್ತಿಕ್ ಹಾಗೂ ಕೇಶವಮೂರ್ತಿಗೆ ಷ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆರೋಪಿಗಳಿಗೆ ಜಾಮೀನಿಗೆ ಷ್ಯೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಟ ನಡೆಸಿದ್ದರು. ಸತತ 9 ದಿನಗಳಿಂದ ಷ್ಯೂರಿಟಿದಾರರಿಗಾಗಿ ಪರದಾಡುತ್ತಿದ್ದರು.ನಿನ್ನೆ ಜಾಮೀನಿಗೆ ಷ್ಯೂರಿಟಿ ಸಿಕ್ಕಿದ್ದರಿಂದ ಎಲ್ಲಾ ಕಾನೂನು ಪ್ರಕ್ರಿಯೆ ಮುಕ್ತಾಯವಾಗಿದೆ. ಅಲ್ಲದೇ ನಿನ್ನೆ ರಾತ್ರಿಯೇ ತುಮಕೂರು ಜೈಲಾಧಿಕಾರಿಗೆ ಆರೋಪಿಗಳ ಜಾಮೀನು ಆದೇಶ ಪ್ರತಿ ಮೇಲ್ ಮೂಲಕ ದೊರೆತಿದೆ. ಹೀಗಾಗಿ ಇಂದು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಅವರನ್ನು ತುಮಕೂರು ಜೈಲಿನ ಜೈಲಾಧಿಕಾರಿ ರಿಲೀಸ್ ಮಾಡಿದ್ದಾರೆ. ಇನ್ನು ಆರೋಪಿಗಳಲ್ಲಿ ಕೇಶವಮೂರ್ತಿ ಹಾಗೂ ಕಾರ್ತಿಕ್ ಇಬ್ಬರು ಸ್ನೇಹಿತರು ಎನ್ನಲಾಗಿದೆ. ಸ್ನೇಹಿತರಾಗಿದ್ದರು ನಾವು ಜೈಲಿನಲ್ಲಿ ಬೇರೆ ಬೇರೆಯಾಗಿಯೇ ಇದ್ದೆವು. ಜೈಲಿನ ಒಳಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೇಶವಮೂರ್ತಿ ಹೇಳಿದ್ದಾನೆ. ಅಲ್ಲದೇ ಮಾಧ್ಯಮದ ಮುಂದೆ ಮಾತನಾಡೋದಕ್ಕೆ ಮೂವರು ಆರೋಪಿಗಳು ಕೂಡ ಹಿಂದೇಟು ಹಾಕಿದ್ದಾರೆ. ನಾವು ಏನು ಹೇಳಬೇಕೋ ಅದನ್ನು ವಿಚಾರಣೆ ವೇಳೆ ಸ್ಟೇಟ್ ಮೆಂಟ್ ರೂಪದಲ್ಲಿ ಹೇಳಿದ್ದೇವೆ. ಈಗ ನಾವು ಏನೂ ಹೇಳೋದಕ್ಕೂ ಇಲ್ಲ. ಕೋರ್ಟಿದೆ. ಕಾನೂನಿದೆ. ಷ್ಯೂರಿಟಿ ಸಿಗೋದು ತಡವಾದ ಕಾರಣ ಹತ್ತು ದಿನಗಳ ಬಳಿಕ ನಾವು ಮೂವರು ತುಮಕೂರು ಜೈಲಿಂದ ಇವತ್ತು ರಿಲೀಸ್ ಆಗಿದ್ದೇವೆ ಎಂದಿದ್ದಾರೆ.

Renuka Swamy Murder case three-accused-released-from-jail