ಮಂಗಳವಾರ, ಜೂನ್ 17, 2025
HomeCinemaChiru Sarja:ಸಾಯೋ ಮೂರು ದಿನ ಮೊದಲು ಚಿರು ಹೇಳಿದ ಮಾತು ಇನ್ನೂ ಕಿವಿಯಲ್ಲಿದೆ: ಸುಂದರ ರಾಜ್

Chiru Sarja:ಸಾಯೋ ಮೂರು ದಿನ ಮೊದಲು ಚಿರು ಹೇಳಿದ ಮಾತು ಇನ್ನೂ ಕಿವಿಯಲ್ಲಿದೆ: ಸುಂದರ ರಾಜ್

- Advertisement -

ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಹಿಂದೆಂದೂ ಬಾರದ ಲೋಕಕ್ಕೆ ಹೋಗಿ ವರ್ಷಗಳೇ ಕಳೆದಿವೆ. ಆದರೂ ಅಭಿಮಾನಿಗಳು, ಕುಟುಂಬ ವರ್ಗ ಇನ್ನೂ ಚಿರು ನೆನಪಿನಲ್ಲಿಯೇ ಬದುಕುತ್ತಿದೆ. ಮೊಮ್ಮಗನ ನಾಮಕರಣದ ದಿನ ಭಾವುಕರಾಗಿ ಮಾತನಾಡಿದ ಅಜ್ಜ ಸುಂದರ ರಾಜ್ ಚಿರು ಸಾಯೋ ಮೂರು ದಿನ ಮೊದಲು ಆಡಿದ ಮಾತನ್ನು ನೆನೆದು ಭಾವುಕರಾಗಿದ್ದಾರೆ.

Meghanaraj 1

ಚಿರು ಮತ್ತು ಮೇಘನಾ ರಾಜ್ ಪುತ್ರನಿಗೆ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ನಟ ಸುಂದರ ರಾಜ್, ಚಿರು ಸಾಯೋದಿಕ್ಕೆ ಮೂರು ದಿನ ಇರುವಾಗ ಆಡಿದ ಮಾತು ನನ್ನ ಕಿವಿಯಲ್ಲೇ ಇದೆ. ಅವನು ಅಂದು ಯಾಕೆ ಹಾಗಂದ ಅಂತ ಈಗ ಅರ್ಥವಾಗುತ್ತಿದೆ ಎಂದರು.

Meghana Raj Amp Chiru Sarja Son Thotilu Shastra Photos 1605189498160

2020 ರ ಜೂನ್ 04 ರಂದು ಮನೆಯಲ್ಲಿ ಎಲ್ಲರೂ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಿರು ಸುಂದರ ರಾಜ್ ಬಳಿ ನಾನು ಫಿನಿಕ್ಸ್ ಹಕ್ಕಿ ಇದ್ದಂತೆ ಮತ್ತೆ ಹುಟ್ಟಿ ಬರ್ತಿನಿ ಎಂದಿದ್ದರಂತೆ. ಚಿರು ಆಟದ ವಿಷ್ಯಕ್ಕೆ ಅಥವಾ ಸಿನಿಮಾರಂಗದ ವಿಚಾರಕ್ಕೆ ಹೀಗಂದಿರಬೇಕೆಂದು ಆಗ ಸುಂದರರಾಜ್ ಅರ್ಥೈಸಿಕೊಂಡಿದ್ದರಂತೆ.

Junior chiru Name reveal

ಆದರೆ ಈಗ ಚಿರು ಆ ಮಾತನ್ನು ಯಾಕೆ ಆಡಿದ ಎನ್ನುವುದು ಅರ್ಥವಾಗುತ್ತಿದೆ.   ಜೂನ್ 04 ರಂದು ಈ ಮಾತು ಹೇಳಿದವ, ಜೂನ್ 5 ರಂದು ಹುಟ್ಟುಹಬ್ಬದ ಪಾರ್ಟಿ ಮಾಡಿದ, ಜೂನ್ 7 ರಂದು ನಮ್ಮೆಲ್ಲರನ್ನು ಬಿಟ್ಟು ಹೊರಟು ಹೋದ. ಯಾರಿಗೂ ಸಣ್ಣ ಸುಳಿವು ಕೊಡದೆ ಹೋದ. ಆದರೆ ಈಗ ಮೊಮ್ಮಗನ ರೂಪದಲ್ಲಿ ಥೇಟ್ ಅಪ್ಪನ ರೂಪವನ್ನೇ ಹೊತ್ತು ಮತ್ತೆ ನಮಗಾಗಿ ಮರಳಿ ಬಂದಿದ್ದಾನೆ ಎಂದು ಸುಂದರರಾಜ್ ಭಾವುಕರಾಗಿದ್ದಾರೆ.

ನನ್ನ ಮೊಮ್ಮಗ ನನಗೆ ಸ್ನೇಹಿತನಿದ್ದಂತೆ. ಅವನನ್ನು ರಾಜ್ ನಂತೆ ಸಾಕುತ್ತೇವೆ. ನಮ್ಮ ಚಿರು ನಮಗೆ ಮರಳಿ ಸಿಕ್ಕಿದಂತಾಗಿದೆ ಎಂದು ಸುಂದರ ರಾಜ್ ಹೇಳಿದ್ದು, ಚಿಂಟು ಎಂದು ಕರೆಯುತ್ತಿದ್ದ ಮೊಮ್ಮಗನಿಗೆ ನಾವು ಈಗ ಯುವರಾಜ್ ಎಂದು ಅರ್ಥ ಬರುವ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.

sandalwood actor sundar raj talked about chiru sarja words he said before he died

RELATED ARTICLES

Most Popular