ಸೋಮವಾರ, ಜೂನ್ 16, 2025
HomeCinemaJothe Jotheyali : ಜೊತೆಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ಶಿಲ್ಪಾ ಅಯ್ಯರ್‌

Jothe Jotheyali : ಜೊತೆಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ಶಿಲ್ಪಾ ಅಯ್ಯರ್‌

- Advertisement -

ಕನ್ನಡ ಕಿರುತೆರೆಯ ಮಟ್ಟಿಗೆ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಧಾರವಾಹಿಗಳ ಪೈಕಿ ಜೊತೆ ಜೊತೆಯಲಿ ಕೂಡ ಒಂದು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಧಾರಾವಾಹಿಯಲ್ಲಿ ಅನು ಸಿರಿಮನೆ ಹಾಗೂ ಆರ್ಯವರ್ಧನ್‌ ಒಂದಾಗಿದ್ದಾರೆ. ಅದ್ದೂರಿಯಾಗಿಯೇ ಮದುವೆ ಸಮಾರಂಭವನ್ನು ಮಾಡಿ ಮುಗಿಸಿದ್ದ ಚಿತ್ರತಂಡಕ್ಕೆ ಶಾಕ್‌ ಎದುರಾಗಿದ್ದು, ತಂಡದಿಂದ ನಟಿಯೋರ್ವರು ಹೊರ ನಡೆದಿದ್ದಾರೆ.

ಖ್ಯಾತ ನಿರ್ದೇಶಕ ಆರೂರು ಜಗದೀಶ್‌ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಜೊತೆ ಜೊತೆಯಲ್ಲಿ ಧಾರಾವಾಹಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತ ನಟ ವಿಷ್ಣುವರ್ಧನ್‌ ಹಾಗೂ ನಟಿ ಭಾರತಿ ಅವರ ಅಳಿಯ ಅನಿರುದ್ದ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಕರಾವಳಿ ಬೆಡಗಿ ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರದಲ್ಲಿ ಜನರಿಗೆ ಬಹುವಾಗಿ ಇಷ್ಟವಾಗಿದ್ದರು. ಆದರೆ ಈ ನಡುವಲ್ಲೇ ಮೇಘಾ ಶೆಟ್ಟಿ ಜೊತೆ ಜೊತೆಯಲಿ ತಂಡದಿಂದ ಹೊರ ನಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.

ನಂತರದಲ್ಲಿ ಸಿನಿಮಾ ತಂಡ, ಝಿ ಕನ್ನಡವಾಹಿನಿ ಮುಖ್ಯಸ್ಥರ ನಡುವೆ ನಡೆದ ಮಾತುಕತೆಯ ಬೆನ್ನಲ್ಲೇ ಮೇಘಾ ಶೆಟ್ಟಿ ಅವರೇ ಅನು ಸಿರಿಮನೆ ಮಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಈ ನಡುವಲ್ಲೇ ರಾಜನಂದಿನಿಯ ಎಂಟ್ರಿ ಯಾವಾಗ ಆಗುತ್ತೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿತ್ತು. ಸಿನಿಮಾದ ಪ್ರತೀ ಪಾತ್ರಗಳನ್ನೂ ಕೂಡ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಇದೇ ಹೊತ್ತಲ್ಲಿ ಮಾನ್ಸಿ ಪಾತ್ರದಲ್ಲಿ ನಟಿಸುತ್ತಿದ್ದ ಶಿಲ್ಪಾ ಅಯ್ಯರ್‌ ಇದೀಗ ಧಾರಾವಾಹಿ ತಂಡದಿಂದ ಹೊರ ನಡೆದಿದ್ದಾರೆ.

ಆರ್ಯವರ್ಧನ್‌ ಸಹೋದರ ಹರ್ಷ ಪತ್ನಿಯಾಗಿ ನಟಿಸುತ್ತಿದ್ದ ಶಿಲ್ಪಾ ಅಯ್ಯರ್‌ ಮಾತು, ನಡತೆ, ನಟನೆ ಪ್ರೇಕ್ಷಕರಿಗೆ ಬಹುವಾಗಿ ಇಷ್ಟವಾಗಿತ್ತು. ಆದ್ರೀಗ ವೈಯಕ್ತಿಕ ಕಾರಣಗಳಿಂದಾಗಿ ತಾನು ಧಾರಾವಾಹಿ ತಂಡದಿಂದ ಹೊರ ನಡೆಯುತ್ತಿರೋದಾಗಿ ಖುದ್ದು ಶಿಲ್ಪಾ ಅಯ್ಯರ್‌ ಹೇಳಿಕೊಂಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಶಿಲ್ಪಾ ಅಯ್ಯರ್‌, ತಾನೂ ಕೂಡ ಮಾನ್ಸಿ ಪಾತ್ರವನ್ನು ಮಿಸ್‌ ಮಾಡಿಕೊಳ್ಳುತ್ತೇನೆ ಅಂತಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಜೊತೆ ಜೊತೆಯಲಿ ಸೀರಿಯಲ್ ಜೊತೆ ಮುಗಿಯುತ್ತಾ ಮೇಘಾ ಶೆಟ್ಟಿ ಬಣ್ಣದ ಬದುಕು…?!

ಇಷ್ಟು ದಿನಗಳ ಕಾಲ ತನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೂಡ ಥ್ಯಾಂಕ್ಸ್‌ ಹೇಳಿರುವ ಶಿಲ್ಪಾ ಅಯ್ಯರ್‌, ತನ್ನ ಮುಂದಿನ ಪ್ರಾಜೆಕ್ಟ್‌ ಬಗ್ಗೆಯೂ ಅತೀ ಶೀಘ್ರದಲ್ಲಿಯೇ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಮೇಘಾ ಶೆಟ್ಟಿ ಕೂಡ ಹೀಗೆಯೇ ಹೇಳಿಕೊಂಡು ಧಾರಾವಾಹಿ ತಂಡದಿಂದ ಹೊರ ನಡೆಯುತ್ತಿರೋದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ : ಜೊತೆ ಜೊತೆಯಲಿ ಪಯಣ ಅರ್ಧಕ್ಕೆ ನಿಲ್ಲಿಸಿದ್ರಾ ಅನುಸಿರಿಮನೆ…?! ಮೇಘಾ ಶೆಟ್ಟಿ ಹೇಳಿದ್ದೇನು ಗೊತ್ತಾ?!

ಆದರೆ ತದನಂತರದಲ್ಲಿ ಅನು ಸಿರಿಮನೆ ಪಾತ್ರದಲ್ಲಿಯೇ ಅವರು ಮುಂದುವರಿದಿದ್ದರು. ಇದೀಗ ಮಾನ್ಸಿ ಪಾತ್ರಧಾರಿಯಾಗಿ ಶಿಲ್ಪಾ ಅಯ್ಯರ್‌ ಮುಂದುವರಿಯುತ್ತಾರಾ ? ಇಲ್ಲಾ ಹೊಸ ನಟಿಯ ಎಂಟ್ರಿಯಾಗುತ್ತಾ. ಒಂದೊಮ್ಮೆ ಹೊಸ ನಟಿ ಬರೋದೇ ಆದ್ರೆ ಆ ಪಾತ್ರವನ್ನು ಯಾರೂ ಮಾಡಬಹುದು ಅನ್ನೋ ಕುತೂಹಲ ಇದೀಗ ಪ್ರೇಕ್ಷಕರಿಗೆ ಮೂಡುತ್ತಿದೆ.

ಇದನ್ನೂ ಓದಿ : ಜೊತೆ ಜೊತೆಯಲಿ ರೋಮ್ಯಾನ್ಸ್ ಮುಂದುವರಿಸಿದ ಅನು-ಆರ್ಯ….! ಮೇಘಾ ಶೆಟ್ಟಿ ಮಾದಕ ಪೋಸ್ ಗೆ ಟೀಕೆ…!!

ಇದನ್ನೂ ಓದಿ : ಜೊತೆ ಜೊತೆಯಲಿ ಕಹಾನಿ ಮೇ ಟ್ವಿಸ್ಟ್….! ಮೀರಾ ಪಾತ್ರಧಾರಿಯೇ ರಾಜನಂದಿನಿ…!!

( Actress Shilpa Iyer, who walked out of the Jothe Jotheyali serial )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular