ಸೋಮವಾರ, ಏಪ್ರಿಲ್ 28, 2025
HomeBreakingಬ್ರಹ್ಮಾವರ : ನೀರು ತರಲು ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು

ಬ್ರಹ್ಮಾವರ : ನೀರು ತರಲು ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು

- Advertisement -

ಬ್ರಹ್ಮಾವರ : ನದಿಗೆ ನೀರು ತರಲು ತೆರಳಿದ್ದ ವೇಳೆಯಲ್ಲಿ ಮಹಿಳೆಯೋರ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸೂರಾಲಿನಲ್ಲಿ ನಡೆದಿದೆ.

ಸೂರಾಲಿನ ಸೊಳ್ಳೆಕಟ್ಟು ಕಂಬಳಗದ್ದೆ ನಿವಾಸಿ ಚಂದು ಮರಕಾಲ್ತಿ ( 60 ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಮನೆ ಸಮೀಪದಲ್ಲಿರುವ ಹೊಳೆಗೆ ನೀರು ತರೋದಕ್ಕೆ ಮಹಿಳೆ ಹೋಗಿದ್ದಾರೆ. ಈ ವೇಳೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಚಂದು ಮರಕಾಲ್ತಿ ಅವರು ಮುಳುಗುತ್ತಿರೋದನ್ನು ರಾಜೇಶ್ ಎಂಬವರು ಗಮನಿಸಿದ್ದಾರೆ.

ಕೂಡಲೇ ನದಿಯಿಂದ ಅವರನ್ನು ರಕ್ಷಿಸಿ, ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ, ಚಂದು ಮರಕಾಲ್ತಿ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular