ಸೋಮವಾರ, ಏಪ್ರಿಲ್ 28, 2025
HomeCoastal News4 Members Suicide : ಮಂಗಳೂರಲ್ಲಿ ಘೋರ ದುರಂತ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

4 Members Suicide : ಮಂಗಳೂರಲ್ಲಿ ಘೋರ ದುರಂತ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

- Advertisement -

ಮಂಗಳೂರು : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ( 4 Members Suicide) ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ಮಾರ್ಗನ್ಸ್‌ ಗೇಟ್‌ ಬಳಿಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಘಟನೆಯಿಂದಾಗಿ ಕರಾವಳಿಗರು ಬೆಚ್ಚಿಬಿದ್ದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಸುನಗ್ ಗ್ರಾಮದ ಬೀಳಗಿ ಮೂಲದ ನಾಗೇಶ್ ಶೇರಿಗುಪ್ಪಿ(30 ವರ್ಷ ), ವಿಜಯಲಕ್ಷ್ಮಿ(26 ವರ್ಷ), ಮಕ್ಕಳಾದ ಸಪ್ನಾ(8 ವರ್ಷ) ಮತ್ತು ಸಮರ್ಥ್(4 ವರ್ಷ ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ. ಪತ್ನಿ ಮಕ್ಕಳಿಗೆ ವಿಷವಿಕ್ಕಿ ನಂತರ ನಾಗೇಶ್‌ ಶಿರಗುಪ್ಪಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಬಾಗಲಕೋಟೆ ಜಿಲ್ಲೆಯ ಈ ಕುಟುಂಬ ಸುಮಾರು 15 ದಿನಗಳ ಹಿಂದಷ್ಟೇ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ನಾಗೇಶ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ರೆ, ಪತ್ನಿ ವಿಜಯಲಕ್ಷ್ಮೀ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ನಾಲ್ವರ ಮೃತ ದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ವಿದ್ಯುತ್‌ ಮೀಟರ್‌ ರೀಡರ್‌

ಭೋಪಾಲ್ : ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೆ ಕಠಿಣ ಕಾನೂನು ಜಾರಿಗೆ ತಂದ್ರೂ ಕೂಡ ಕಾಮುಕರು ಮಾತ್ರ ತಮ್ಮ ಅಟ್ಟಹಾಸವನ್ನು ಮೆರೆಯುತ್ತಲೇ ಇದ್ದಾರೆ. ಇದೀಗ ವಿದ್ಯುತ್ ಮೀಟರ್ ರೀಡಿಂಗ್‌ ಮಾಡಲು ಮನೆಗೆ ಬಂದಿದ್ದ ಸಿಬ್ಬಂದಿಯೋರ್ವ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಧ್ಯಪ್ರದೇಶದ ಹಬೀಬ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ವಿದ್ಯುತ್‌ ಇಲಾಖೆಯ ಸಿಬ್ಬಂದಿ ಸೋನು ವರ್ಮಾ ವಿರುದ್ಧ ದೂರು ದಾಖಲಾಗಿದೆ.

ಬಾಲಕಿಯ ಪೋಷಕರು ಸಂಬಂಧಿಯೋರ್ವರ ಅಂತ್ಯಕ್ರೀಯೆಗೆ ತೆರಳಿದ್ದರು. ಹೀಗಾಗಿ ಬಾಲಕ ಒಬ್ಬಳೆ ಮನೆಯಲ್ಲಿದ್ದಳು. ಈ ವೇಳೆಯಲ್ಲಿ ಮನೆಗೆ ಬಂದಿದ್ದ ವಿದ್ಯುತ್‌ ಮೀಟಿಂಗ್‌ ರೀಡಿಂಗ್‌ ಮಾಡುವ ಸಿಬ್ಬಂದಿ ಬಾಲಕಿಯ ಬಳಿಯಲ್ಲಿ ಕುಡಿಯಲು ಒಂದು ಲೋಟ ನೀರು ಕೇಳಿದ್ದಾನೆ. ನಂತರ ಬಾಲಕಿ ಮತ್ತೊಂದು ಲೋಟ ನೀರು ತರಲು ತೆರಳಿದ್ದ ವೇಳೆಯಲ್ಲಿ ಮನೆಗೆ ನಿಗ್ಗಿದ ಸೋನು ವರ್ಮಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆಯಿಂದಾಗಿ ಹೆದರಿಯ ಬಾಲಕಿ ಕಿರುಚಿಕೊಂಡಿದ್ದಾಳೆ. ಈ ವೇಳೆಯಲ್ಲಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ನೆರೆ ಹೊರೆಯವರು ಸಿಬ್ಬಂದಿ ಸೋನು ವರ್ಮಾನನ್ನು ಸೆರೆ ಹಿಡಿದು ಥಳಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಹನಿಮೂನ್​ ದಿನವೇ ಪತ್ನಿಯ ಎದುರು ವಿಚಿತ್ರ ಬೇಡಿಕೆ ಇಟ್ಟ ಪತಿರಾಯ..! ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಇದನ್ನೂ ಓದಿ : ಕ್ಲಿನಿಕ್​​ನಲ್ಲಿಯೇ ಸ್ನೇಹಿತನೊಂದಿಗೆ ವೈದ್ಯೆಯ ಲವ್ವಿ-ಡವ್ವಿ..! ವಿಡಿಯೋ ರೆಕಾರ್ಡ್​ ಮಾಡಿದ ಕಾಂಪೌಂಡರ್​ ಮಾಡಿದ್ದೇನು ಗೊತ್ತಾ..?

( 4 Members Suicide same family commit suicide in mangalore)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular