Manipal : ಉಡುಪಿ : ಹೆತ್ತ ತಾಯಿಯನ್ನೇ ಕೊಲೆಗೈದು ಅನಾರೋಗ್ಯದಿಂದ ತಾಯಿ ಸತ್ತಿದ್ದಾಳೆ ಅಂತಾ ಕಥೆ ಕಟ್ಟಿದ್ದಾನೆ. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪಾಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದವರನ್ನು ಮಣಿಪಾಲದ ನಿವಾಸಿ ಪದ್ಮಾಬಾಯಿ (45 ವರ್ಷ) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಈಶ ನಾಯಕ್ ನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.
Manipal : ತಾಯಿಯನ್ನು ಕೊಲೆಗೈದು ಅನಾರೋಗ್ಯದ ನಾಟಕ
ಪದ್ಮಾಬಾಯಿ ಅವರು ಸೊಂಟ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಜೂನ್ 18 ರಂದು ಉಡುಪಿಯ ಅಜ್ಜರಕಾಡಿನ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಂದು ರಾತ್ರಿ ಪದ್ಮಬಾಯಿ ತನ್ನ ತಂಗಿಯಾದ ಶಿಲ್ಪಾ ಅವರಿಗೆ ಕರೆ ಮಾಡಿ ಅನಾರೋಗ್ಯದ ಬಗ್ಗೆ ತಿಳಿಸಿದ್ದರು.
ರಾತ್ರಿ ಪದ್ಮಾಬಾಯಿ ಅವರ ಮಗ ಈಶ ನಾಯಕ್ ಶಿಲ್ಪಾ ಅವರಿಗೆ ಕರೆ ಮಾಡಿ ತಾಯಿಗೆ ಆರೋಗ್ಯ ಕೈಕೊಟ್ಟಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ನೀಡುವಂತೆ ಕೇಳಿಕೊಂಡಿದ್ದ. ಆದರೆ ಜೂನ್ 19 ರಂದು ಬೆಳಗ್ಗೆ ಈಶ ನಾಯಕ್ ಶಿಲ್ಪ ಅವರಿಗೆ ಕರೆ ಮಾಡಿ ತಾಯಿ ಮೃತಪಟ್ಟಿರುವ ವಿಚಾರ ತಿಳಿಸಿದ್ದಾನೆ.
Also Read : Vastu Tips : ಈ ಫೋಟೋಗಳನ್ನುನಿಮ್ಮ ಮನೆಯಲ್ಲಿ ಇಟ್ಟುಕೊಂಡ್ರೆ ಅಧಿಕ ಲಾಭ : ಸದಾ ಸಂತೋಷ, ಸಮೃದ್ಧಿ
ಉಡುಪಿಯ ಜಿಲ್ಲಾಸ್ಪತ್ರೆಗೆ ಬಂದು ತನ್ನ ಅಕ್ಕನನ್ನು ನೋಡಿದ ಶಿಲ್ಪಾ ಅವರಿಗೆ ಅನುಮಾನ ಬಂದಿತ್ತು. ಪದ್ಮಾಬಾಯಿ ಕತ್ತಿನ ಮೇಲೆ ಗಾಯದ ಗುರುತುಗಳಿದ್ದವು. ಕೂಡಲೇ ಮಣಿಪಾಲ ಠಾಣೆಯ ಪೊಲೀಸರಿಗೆ ಶಿಲ್ಪಾ ದೂರು ನೀಡಿದ್ದಾರೆ.
Manipal : ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ..!
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯ ನಡೆಸಲಾಗಿದೆ. ಫಾರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಇದೊಂದು ಸಹಜ ಸಾವಲ್ಲ ಕೊಲೆ ಅನ್ನುವ ಕುರಿತು ಪ್ರಾಥಮಿಕ ವರದಿಯನ್ನು ನೀಡಿದ್ದರು.
Also Read : ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್ : ಗೋಲ್ಡ್ ಲೋನ್ಗೆ RBI ಹೊಸ ರೂಲ್ಸ್
ಜೂನ್ 18ರ ರಾತ್ರಿಯಿಂದ ಜೂನ್ 19ರ ನಡುವೆ ಈ ಕೊಲೆ ನಡೆದಿದೆ ಅನ್ನೋದು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಕೂಡಲೇ ಮಣಿಪಾಲ ಪೊಲೀಸರು ಮಗ ಈಶ ನಾಯಕ್ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಈಶ ನಾಯಕ್ ನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಹಣ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಸತ್ಯಾಂಶ ಪೊಲೀಸರ ತನಿಖೆಯಿಂದಷ್ಟೆ ಹೊರ ಬರಬೇಕಾಗಿದೆ.
Manipal Son Killed Mother Udupi News Kannada News