ಭಾನುವಾರ, ಏಪ್ರಿಲ್ 27, 2025
HomeBreakingಉಡುಪಿ : ಮೊಬೈಲ್ ಗೇಮ್ ಆಡಬೇಡ ಅಂದಿದಕ್ಕೆ 16 ವರ್ಷದ ಬಾಲಕಿ ಆತ್ಮಹತ್ಯೆ

ಉಡುಪಿ : ಮೊಬೈಲ್ ಗೇಮ್ ಆಡಬೇಡ ಅಂದಿದಕ್ಕೆ 16 ವರ್ಷದ ಬಾಲಕಿ ಆತ್ಮಹತ್ಯೆ

- Advertisement -

ಉಡುಪಿ : ಮೊಬೈಲ್ ಗೇಮ್ ಇತ್ತೀಚಿನ‌ ದಿ‌ನಗಳಲ್ಲಿ ಯುವ ಜನರನ್ನು ಬಲಿ ಪಡೆಯುತ್ತಿದೆ. ಅಂತೆಯೇ ಮೊಬೈಲ್ ಗೇಮ್ ಆಡಬೇಡ ಅಂತ ಬುದ್ದಿ‌ ಹೇಳಿದಕ್ಕೆ 16 ವರ್ಷ ಬಾಲಕಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಣಿಪುರ ಗ್ರಾಮದ ಮಣಿಪುರ ಕೋಟೆಯ ನಿವಾಸಿ ಮೃತಳನ್ನು ಜುಬೇರಾ ಹಾಗೂ ಶಬಾನು ಅವರ ಪುತ್ರಿ ಸುಹೀಬತ್ ಅಸ್ಲಮಿಯಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡವಳು  ಎಂದು ಗುರುತಿಸಲಾಗಿದೆ.

ಬಾಲಕಿ ನಿರಂತರವಾಗಿ ಮೊಬೈಲ್ ಫೋನ್‌ನಲ್ಲಿ ಗೇಮ್ ಆಡುವುದ ರಲ್ಲಿ ತಲ್ಲೀನಳಾಗಿರುತ್ತಿದ್ದಳು. ಮೇ 15 ರ ಸಂಜೆ ಬಾಲಕಿಗೆ ತಂದೆ ತಾಯಿ ಮೊಬೈಲ್‌ನಲ್ಲಿ ಆಟವಾಡುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದರು ಮತ್ತು ಅವಳಿಂದ ಮೊಬೈಲ್ ಕಸಿದುಕೊಂಡಿದ್ದಾರೆ.

ಸ್ವಲ್ಪ ಹೊತ್ತಲ್ಲೇ  ಬಾಲಕಿ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಅಗ್ನಿ ಶಾಮಕ‌‌ ಸಿಬ್ಬಂಧಿಯ ಸಹಕಾರದೊಂದಿಗೆ ರಕ್ಷಣೆಗೆ ಮುಂದಾದರೂ ಕೂಡ ಯಾವುದೇ  ಪ್ರಯೋಜನವಾಗಿರಲಿಲ್ಲ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular