ಬುಧವಾರ, ಜೂನ್ 18, 2025
HomeCrimeAcharya Shri 108 Kamkumarnandi Maharaj : ಕಣ್ಮರೆಯಾಗಿದ್ದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ...

Acharya Shri 108 Kamkumarnandi Maharaj : ಕಣ್ಮರೆಯಾಗಿದ್ದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಬರ್ಬರ ಕೊಲೆ

- Advertisement -

ಬೆಳಗಾವಿ : Acharya Shri 108 Kamkumarnandi Maharaj : ಆಶ್ರಮದಲ್ಲಿ ಕೋಣೆಯಲ್ಲಿದ್ದ ಜೈನಮುನಿಗಳು ಜುಲೈ 6ರಂದು ನಾಪತ್ತೆಯಾಗಿದ್ದಾರೆ ಎಂದು ಭಕ್ತರು ಆಶ್ರಮವಾಸಿಗಳು ಆತಂಕಗೊಂಡಿದ್ದರು. ಆದರೆ ಈ ಕುರಿತಂತೆ ಭಕ್ತರು ಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆದರೆ, ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಹತ್ಯೆಗೊಳಗಾದ ಜೈನಮುನಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎಂದು ಗುರುತಿಸಲಾಗಿದೆ. ಜೈನಮುನಿಗಳು ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಚಿಕ್ಕೋಡಿ ಪೊಲೀಸರು ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹುಡುಕಾಟ ಶುರು ಮಾಡಿದ್ದರು. ಈ ಹಿನ್ನಲೆ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದಾಗ ಹತ್ಯೆ ಬಗ್ಗೆ ಮಾಹಿತಿ ನೀಡಿದ್ದರು.

ನಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಇನ್ನೂ ನಿನ್ನೆಯಿಂದ ಜೈನಮುನಿ ಮೃತದೇಹ ಪತ್ತೆಯಾಗದ ಕಾರಣ ಹುಡುಕಾಟ ಶುರು ಮಾಡಲಾಗಿದೆ. ಮೊದಮೊದಲು ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸಲು ಗೊಂದಲದ ಹೇಳಿಕೆಗಳನ್ನು ನೀಡಿರುತ್ತಾರೆ. ಜೈನಮುನಿ ಮೃತ ದೇಹವನ್ನು ಒಂದು ಬಾವಿಗೆ ಎಸದಿರುವುದಾಗಿ, ಇನ್ನೊಂದು ಬಾರಿ ನದಿಗೆ ಎಸೆದಿರುವುದಾಗಿ ಹೇಳಿಕೆ ನೀಡಿದ್ದು ಪೊಲೀಸ್‌ ಅಧಿಕಾರಿಗಳು ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ : Crime News : ಬಂಟ್ವಾಳದಲ್ಲಿ ಮನೆಯ ಮೇಲೆ ಭೂ ಕುಸಿತ ಮಹಿಳೆ ಸಾವು

ಇದನ್ನೂ ಓದಿ : Vijayapur earthquake : ವಿಜಯಪುರದಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಜನರು

ಮೃತಪಟ್ಟ ಜೈನ ಮುನಿಗಳು ಸುಮಾರು 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ವಾಸವಿದ್ದರು. ಇನ್ನು ಅವರು ನಾಪತ್ತೆಯಾಗಿದ್ದು, ಅವರು ವಾಸವಿರುವ ಕೋಣೆಯಲ್ಲಿಯೇ ಸಾಮಾಗ್ರಿಗಳನ್ನು ಬಿಟ್ಟು ಹೋಗಿದ್ದರು. ಆಶ್ರಮವಾಸಿಗಳ ಪ್ರಕಾರ ಜೈನಮುನಿಗಳು ಎಲ್ಲಿಗೆ ಹೋಗುವುದಿದ್ದರೂ ತಮ್ಮ ಪಿಂಚಿ, ಕಮಂಡಲು ತೆಗೆದುಕೊಂಡು ಹೋಗುತ್ತಿದ್ದರು. ಹೀಗಿರುವಾಗ ಎಲ್ಲಾ ವಸ್ತುಗಳು ಕೋಣೆಯಲ್ಲಿಯೇ ಇರುವ ಹಿನ್ನಲೆ ಭಕ್ತರಲ್ಲಿ ಆತಂಕ ಮನೆ ಮಾಡಿತು. ಹೀಗಾಗಿ ಕೂಡಲೇ ಆಶ್ರಮವಾಸಿಗಳು ಠಾಣೆಯಲ್ಲಿ ದೂರು ನೀಡಲಾಗಿತ್ತು.

Acharya Shri 108 Kamkumarnandi Maharaj : Barbaric Murder of Jainamuni Acharya Shri 108 Kamkumarnandi Maharaj

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular