ನವದೆಹಲಿ : ರೋಗಿಯೊಬ್ಬರನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ (Ambulance Service) ಸಾಗಿಸುವ ದಾರಿ ಮಧ್ಯೆದಲ್ಲೇ ಇಂಧನ ಖಾಲಿಯಾಗಿ, ರೋಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದಿದೆ. ಆದರೆ ಸಚಿವರು ಮಾತ್ರ ನಿರ್ವಹಣೆಯ ಕೊರತೆ ಎಂದು ಜಾರಿಗೊಳ್ಳಲು ಯತ್ನಿಸಿದ್ದಾರೆ.
ಆಂಬುಲೆನ್ಸ್ನಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಇಂಧನ ಮುಗಿದಿದ್ದು, ರೋಗಿಯ ಸಂಬಂಧಿಕರು ಆಂಬ್ಯುಲೆನ್ಸ್ ಅನ್ನು ತಳ್ಳುತ್ತಿರುವುದು ಕಂಡುಬಂದಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಘಟನೆಯ ಬಗ್ಗೆ ನಮಗೆ ತಿಳಿದು ಬಂದಿದೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ನಾವು ಸಂತ್ರಸ್ತೆಯ ಸಂಬಂಧಿಕರನ್ನು ಭೇಟಿ ಮಾಡಿ ನಿರ್ಲಕ್ಷ್ಯದ ಬಗ್ಗೆ ತಿಳಿದುಕೊಳ್ಳುತ್ತೇವೆ. 108 ಅನ್ನು ಖಾಸಗಿ ಏಜೆನ್ಸಿ ನಡೆಸುತ್ತಿದೆ, ಆಂಬ್ಯುಲೆನ್ಸ್ಗಳ ನಿರ್ವಹಣೆಯ ಜವಾಬ್ದಾರಿ ಅವರ ಮೇಲಿದೆ. ತನಿಖೆ ನಡೆಯುತ್ತಿದೆ” ಎಂದು ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಬನ್ಸ್ವಾರಾ ಹೇಳಿದ್ದಾರೆ.
Rajasthan | A patient, in Banswara, died in an ambulance allegedly due to a delay caused because of lack of fuel in it due to which the vehicle stopped in between. Relatives of patients were also seen pushing the ambulance on the way. (25.11) pic.twitter.com/7vuD3hrC0H
— ANI MP/CG/Rajasthan (@ANI_MP_CG_RJ) November 26, 2022
ಇದನ್ನೂ ಓದಿ : South Korea Murder Case : ಸತ್ತ ಮಗುವನ್ನು 3 ವರ್ಷಗಳ ಕಾಲ ಕಂಟೇನರ್ನಲ್ಲಿ ಬಚ್ಚಿಟ್ಟ ದಂಪತಿ
ಇದನ್ನೂ ಓದಿ : The selfie craze: ಸೆಲ್ಫಿ ಕ್ರೇಜ್ ಗೆ ನಾಲ್ವರು ಯುವತಿಯರು ಬಲಿ
ಇದನ್ನೂ ಓದಿ : Bomb blast case: ಮಂಗಳೂರು ಬಾಂಬ್ ಸ್ಫೋಟ ಪ್ರಕರಣ: ತನಿಖೆಯನ್ನು ಎನ್ಐಎ ಗೆ ವರ್ಗಾಯಿಸಲು ರಾಜ್ಯ ಸರ್ಕಾರದ ನಿರ್ಧಾರ
ಇದನ್ನೂ ಓದಿ : Brazil School Shooting : ಹಳೆ ವಿದ್ಯಾರ್ಥಿಯಿಂದ ಶಾಲೆಯಲ್ಲಿ ಗುಂಡಿನ ದಾಳಿ : 3 ಬಲಿ, 13 ಮಂದಿ ಗಾಯ
ರಾಜ್ಯ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಘಟನೆಯನ್ನು “ನಿರ್ವಹಣೆಯ ವೈಫಲ್ಯ” ಎಂದು ಹೇಳಿದ್ದಾರೆ. ಪ್ರಸ್ತುತ ಸಾರಿಗೆ ಮತ್ತು ಸೈನಿಕರ ಕಲ್ಯಾಣ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನಮ್ಮ ಸರಕಾರವು ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಿದೆ. ಆಂಬ್ಯುಲೆನ್ಸ್ನಲ್ಲಿ ಇಂಧನ ಕೊರತೆಯಿಂದ ರೋಗಿಯು ಸಾವನ್ನಪ್ಪಿದ ಘಟನೆಯಾದರೆ ಅದು ನಿರ್ವಹಣೆಯ ವೈಫಲ್ಯವೇ ಹೊರತು ವ್ಯವಸ್ಥೆಯದ್ದಲ್ಲ, ಅದಕ್ಕೆ ಕಾರಣರಾದವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
Banswara: We came to know about the incident & have initiated the enquiry. We'll meet victim's relatives & find out about the negligence. 108 is being run by private agency. They have the responsibility for the maintenance of ambulances. Probe is underway: CMHO, Banswara pic.twitter.com/8u11KVc6GU
— ANI MP/CG/Rajasthan (@ANI_MP_CG_RJ) November 26, 2022
Ambulance Service: Ambulance ran out of fuel in the middle of the road: Minister said that the patient’s life was lost due to management failure.