ಭಾನುವಾರ, ಏಪ್ರಿಲ್ 27, 2025
HomeCrimeಗೋಡೆ ಒಡೆದು ಬ್ಯಾಂಕ್ ಗೆ ಕನ್ನ ಯತ್ನ : ಬರಿಗೈಲಿ ವಾಪಾಸಾದ ದರೋಡೆಕೋರರು

ಗೋಡೆ ಒಡೆದು ಬ್ಯಾಂಕ್ ಗೆ ಕನ್ನ ಯತ್ನ : ಬರಿಗೈಲಿ ವಾಪಾಸಾದ ದರೋಡೆಕೋರರು

- Advertisement -

ಕೊಡಗು : ಬ್ಯಾಂಕ್ ವೊಂದರ ಗೋಡೆ ಒಡೆದು ಖದೀಮರ ತಂಡವೊಂದು ದರೋಡೆಗೆ ಯತ್ನಿಸಿದ್ದಾರೆ. ಆದರೆ ಸ್ಟ್ರಾಂಗ್ ರೂಮ್ ಪ್ರವೇಶಿಸೋದಕ್ಕೆ ಸಾಧ್ಯವಾಗದೇ ಬರಿಗೈಲಿ ವಾಪಾಸಾಗಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ನಡೆದಿದೆ. ರಾತ್ರಿಯ ವೇಳೆಯಲ್ಲಿ ದರೋಡೆಕೋರರು ಕಬ್ಬಿಣದ ಹಾರೆ ಮತ್ತು ಸಲಾಕೆಗಳಿಂದ ಹಿಂಬದಿಯ ಗೋಡೆಯನ್ನು ಒಡೆದು ಬ್ಯಾಂಕಿನೊಳಗೆ ಪ್ರವೇಶಿಸಿದ್ದಾರೆ. ಮೊದಲು ಬ್ಯಾಂಕ್‌ಗೆ ಕಲ್ಪಿಸುವ ವಿದ್ಯುತ್ ತಂತಿಯನ್ನು ಕತ್ತರಿಸಿದ್ದಾರೆ. ಬಳಿಕ ಸಿಸಿಟಿವಿಯ ವೈಯರ್ ಗಳನ್ನು ಕತ್ತರಿಸಿದ್ದಾರೆ. ಇದಾದ ಮೇಲೆ ಸ್ರ್ಟಾಂಗ್ ರೂಮ್‌ಗೆ ನುಗ್ಗಲು ಸ್ಟ್ರಾಂಗ್ ರೂಮಿನ ಗೋಡೆಯನ್ನು ಹೊಡೆಯಲು ಯತ್ನಿಸಿದ್ರೂ ಸಾಧ್ಯವಾಗಿಲ್ಲ. ಹೀಗಾಗಿ ಖದೀಮರು ಬಂದ ದಾರಿಗೆ ಸುಂಕವಿಲ್ಲದಂತೆ ಸ್ಥಳದಿಂದ ವಾಪಸ್ ಆಗಿದ್ದಾರೆ. ಈ ಘಟನೆಯನ್ನು ಸ್ಥಳೀಯರು ಬೆಳಗ್ಗೆ ಗಮನಿಸಿ ವಿಷಯವನ್ನು ಅಚ್ಚರಿಯಿಂದ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ.

ಬ್ಯಾಂಕಿನ ವ್ಯವಸ್ಥಾಪಕರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಸಿಪಿಐ ದಿವಾಕರ್ ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನಪತ್ತೆ ದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಹಾರೆ ಹಾಗೂ ಬ್ಯಾಂಕ್ ಹಿಂಬದಿ ಮದ್ಯ ಸೇವಿಸಿ ಬಿಸಾಡಿದ್ದ ಮದ್ಯದ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular