ಸೋಮವಾರ, ಏಪ್ರಿಲ್ 28, 2025
HomeCrimeBengaluru crime: ಅನಾರೋಗ್ಯದಿಂದ ಪತಿ ಸಾವು, ಅನುಮಾನಾಸ್ಪದವಾಗಿ ಪತ್ನಿಯ ಶವಪತ್ತೆ

Bengaluru crime: ಅನಾರೋಗ್ಯದಿಂದ ಪತಿ ಸಾವು, ಅನುಮಾನಾಸ್ಪದವಾಗಿ ಪತ್ನಿಯ ಶವಪತ್ತೆ

- Advertisement -

ಬೆಂಗಳೂರು : (Bengaluru crime) 40 ವರ್ಷದ ಮಹಿಳೆಯ ಶವ ಪತ್ತೆಯಾದ ಘಟನೆ ಬೆಂಗಳೂರಿನ ಕೆಆರ್ ಪುರಂ ಪ್ರದೇಶದ ಟಿಸಿ ಪಾಳ್ಯ ಮುಖ್ಯರಸ್ತೆಯಲ್ಲಿ ನಡೆದಿದೆ. ಮೃತಳನ್ನು ಅಂಬಿಕಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳಿದ್ದು, ಪೊಲೀಸರು ಕೊಲೆಯಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆಆರ್ ಪುರಂ ಪ್ರದೇಶದ ಟಿಸಿ ಪಾಳ್ಯ ಮುಖ್ಯರಸ್ತೆಯಲ್ಲಿ ಅಂಬಿಕಾ ಎನ್ನುವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಆಕೆಯ ಮೈಮೇಲೆ ಗಾಯಗಳು ಪತ್ತೆಯಾಗಿವೆ ಎಂದು ಕೆಆರ್ ಪುರಂ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಮೂರು ದಿನಗಳ ಹಿಂದೆ ಕೊಲೆ ನಡೆದಿದ್ದು, ಭಾನುವಾರ ತಡರಾತ್ರಿ ಬೆಳಕಿಗೆ ಬಂದಿದೆ.

ಆದರೆ ನಿಖರವಾಗಿ ಇದು ಕೊಲೆಯೇ ಎಂದು ಖಚಿತವಾಗಿಲ್ಲ. ಜೊತೆಗೆ ಕೊಲೆಯಾಗಿದ್ದಲ್ಲಿ ಕಾರಣಗಳೇನು ಎಂಬ ಬಗ್ಗೆಯೂ ನಿಖರ ಮಾಹಿತಿಗಳು ಇಲ್ಲ. ಇದೀಗ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಯಾನಕ ಘಟನೆ : ಬಿಯರ್‌ ಬಾಟಲಿಯಿಂದ ಹೊಡೆದು ರೌಡಿಶೀಟರ್‌ ಹತ್ಯೆ

ಬೆಂಗಳೂರು : ರಾಜ್ಯದಲ್ಲಿ ಚುನಾವಣೆಗೆ ತಯಾರಿ ನಡೆಸಿಕೊಳ್ಳಲಾಗುತ್ತಿದೆ. ಈ ಮಧ್ಯೆಯೇ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ರೌಡಿಶೀಟರ್‌ ಒಬ್ಬನ ಹತ್ಯೆಯಾಗಿದ್ದು, ಸುಬ್ರಹ್ಮಣ್ಯಪುರದ ರೌಡಿಶೀಟರ್‌ ಶಿವರಾಜ್‌ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೆಂಗಳೂರಿನ ಉತ್ತರಹಳ್ಳಿಯ ಬಾರ್‌ ಒಂದರಲ್ಲಿ ಇಬರು ರೌಡಿಶೀಟರ್‌ ಗಳು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ನಂತರ ಮಾತು ಜಗಳಕ್ಕೆ ತಿರುಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ರೌಡಿಶೀಟರ್‌ ಮಂಜ ಎನ್ನುವಾತ ಶಿವರಾಜ್‌ ತಲೆಗೆ ಬಿಯರ್‌ ಬಾಟಲ್‌ ನಿಂದ ಹೊಡೆದಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಭಯಾನಕ ಘಟನೆ : ಬಿಯರ್‌ ಬಾಟಲಿಯಿಂದ ಹೊಡೆದು ರೌಡಿಶೀಟರ್‌ ಹತ್ಯೆ

ಇದನ್ನೂ ಓದಿ : ಸಾಲಿಗ್ರಾಮ : ಮಾಲೀಕನ ಎದುರಲ್ಲೇ ಸ್ಕೂಟರ್‌ ಕದ್ದ ಕಳ್ಳ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು : Video

ಬಿಯರ್‌ ಬಾಟಲ್‌ ನಿಂದ ತಲೆಗೆ ಹೊಡೆದ ಪರಿಣಾಮ ರೌಡಿಶೀಟರ್‌ ಶಿವರಾಜ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪೊಲಾರ್‌ ಕಿರಿಕ್‌ ನಿಂದಾಗಿ ಈ ಕೊಲೆ ನಡೆದಿದ್ದು, ಆರೋಪಿ ರೌಡಿಶೀಟರ್‌ ಮಂಜ ಪರಾರಿಯಾಗಿದ್ದಾನೆ. ಇದೀಗ ಕೊಲೆ ಘಟನೆ ಸಂಬಂದ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಮಂಜನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಬೈಂದೂರು : ಕೊಸಳ್ಳಿ ಫಾಲ್ಸ್‌ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Bengaluru crime: Husband dies of illness, wife’s body found suspicious

RELATED ARTICLES

Most Popular