ಭಾನುವಾರ, ಜೂನ್ 15, 2025
HomeCrimeMaharashtra bus accident : ಕಂದಕಕ್ಕೆ ಉರುಳಿದ ಬಸ್‌ : ಓರ್ವ ಸಾವು, 16 ಮಂದಿ...

Maharashtra bus accident : ಕಂದಕಕ್ಕೆ ಉರುಳಿದ ಬಸ್‌ : ಓರ್ವ ಸಾವು, 16 ಮಂದಿ ಗಾಯ

- Advertisement -

ಮಹಾರಾಷ್ಟ್ರ : ಮುಂಜಾನೆ ಮುಸುಕಿನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ (Maharashtra bus accident) ಬಸ್ ಆಳವಾದ ಕಮರಿಗೆ ಬಿದ್ದ ಪರಿಣಾಮ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದು, ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾಪಡೆ ಗಾಯಗೊಂಡವರನ್ನು ರಕ್ಷಣೆಗೆ ಮುಂದಾಗಿದ್ದಾರೆ

ಈ ದುರಂತ ಘಟನೆಯು ಮಹಾರಾಷ್ಟ್ರದ ನಾಸಿಕ್‌ನ ಸಪ್ತಶೃಂಗಿ ಘರ್‌ನಲ್ಲಿ ಇಂದು ಸಂಭವಿಸಿದೆ. ಮಾಹಿತಿಗಳ ಪ್ರಕಾರ, ಈ ಪ್ರದೇಶದ ಗಣಪತಿ ಪಾಯಿಂಟ್ ಬಳಿ ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ ಒಟ್ಟು 22 ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದು, ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Helicopter crash in Nepal : ನೇಪಾಳ : 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ

ಇದನ್ನೂ ಓದಿ : Andhra Pradesh Bus Accident‌ : ಕಾಲುವೆಗೆ ಉರುಳಿದ‌ ಬಸ್ 7 ಮಂದಿ ಸಾವು, 15 ಮಂದಿ ಗಂಭೀರ

ಗಾಯಾಳುಗಳನ್ನು ನಂದೂರಿ ಹಾಗೂ ವಾಣಿ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ದಾದಾ ಭೂಸೆ ಹಾಗೂ ನಗರ ಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಸದ್ಯ ಘಟನೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Maharashtra bus accident: Bus fell into ditch: One dead, 16 injured

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular