ಭಾನುವಾರ, ಏಪ್ರಿಲ್ 27, 2025
HomeCrimeMandya Murder Case : ಹೆತ್ತ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ: ಪತ್ನಿಗೆ ಮಾರಣಾಂತಿಕ ಹಲ್ಲೆ

Mandya Murder Case : ಹೆತ್ತ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ: ಪತ್ನಿಗೆ ಮಾರಣಾಂತಿಕ ಹಲ್ಲೆ

- Advertisement -

ಮಂಡ್ಯ : ತಂದೆ ತಾಯಿ ಮಕ್ಕಳನ್ನು ಲಾಲನೆ ಪೋಷಣೆ (Mandya Murder Case) ಮಾಡುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಹೆತ್ತ ಮಕ್ಕಳನ್ನೇ ಕೊಲ್ಲುವವರು ಇರುತ್ತಾರೆ. ಅಂತಹದರಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು, ಪತ್ನಿಗೆ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.

ಸದ್ಯ ಈ ದುರ್ಘಟನೆಯು ಶ್ರೀರಂಗಪಟ್ಟಣ ತಾಲೂಕಿನ ಮರಳಾಗಲ ಎಂಬ ಗ್ರಾಮದಲ್ಲಿ ನಡೆದಿರುತ್ತದೆ. ಈ ಆಘಾತಕಾರಿ ಘಟನೆಯಲ್ಲಿ, ಆದಿತ್ಯ (4 ವರ್ಷ) ಮತ್ತುಅಮೂಲ್ಯ (3 ವರ್ಷ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೂಲತಃ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಾಣಗಾಪುರ ನಿವಾಸಿ ಶ್ರೀಕಾಂತ್‌ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಪತ್ನಿ ಲಕ್ಷ್ಮೀಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ತೀವ್ರ ಗಾಯಗೊಳಿಸಿದ್ದಾನೆ ಎಂದು ವರದಿ ಮಾಡಿದೆ. ಮರಳಗಾಲದ ಬಳಿಯಿರುವ ಮನೆಯೊಂದರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಅಂಬಿಕಾ ಎಂಬವರ ಮಗಳಾದ ಲಕ್ಷ್ಮೀ ಮಂಗಳವಾರ ಪತಿ, ಮಕ್ಕಳ ಜೊತೆ ಮರಳಗಾಲಕ್ಕೆ ಬಂದಿದ್ದಾರೆ.

ಇದನ್ನೂ ಓದಿ : LPG Blast : ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಎಲ್‌ಪಿಜಿ ಸೋರಿಕೆ 31 ಮಂದಿ ಸಾವು

ಇದನ್ನೂ ಓದಿ : TV actor Prajwal : ಬಾರ್‌ನಲ್ಲಿ ಕಿರಿಕ್‌ : ಅಮೃತವರ್ಷಿಣಿ ಧಾರಾವಾಹಿ ನಟನ ವಿರುದ್ದ ಎಫ್‌ಐಆರ್‌ ದಾಖಲು

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿ ಶ್ರೀಕಾಂತ್‌ ತನ್ನ ಮಕ್ಕಳಿಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿರುತ್ತಾನೆ. ಇದೇ ವೇಳೆ ಪತ್ನಿ ಲಕ್ಷ್ಮೀಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ತೀವ್ರವಾಗಿಗೊಳಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಘಟನೆ ಕಾರಣ ತಿಳಿದು ಬಂದಿಲ್ಲ. ಸದ್ಯ ಪತಿಯಿಂದ ಗಾಯಗೊಂಡ ಪತ್ನಿ ಲಕ್ಷ್ಮೀಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸ್ಥಳಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ಪರಿಶಿಲನೆ ನಡೆಸಿದ್ದಾರೆ.

Mandya Murder Case: Killing of two children by the father himself: Fatal assault on the wife

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular