ಸೋಮವಾರ, ಏಪ್ರಿಲ್ 28, 2025
HomeCrimepsi exam scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಮಂಜುನಾಥ, ಶ್ರೀಧರ್​ ಸಿಐಡಿ...

psi exam scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಮಂಜುನಾಥ, ಶ್ರೀಧರ್​ ಸಿಐಡಿ ಕಸ್ಟಡಿಗೆ

- Advertisement -

ಕಲಬುರಗಿ :psi exam scam : ರಾಜ್ಯದಲ್ಲಿ ಬಹುದೊಡ್ಡ ಸಂಚಲನವನ್ನೇ ಸೃಷ್ಟಿಸಿರುವ ಪಿಎಸ್​ಐ ನೇಮಕಾತಿ ಅಕ್ರಮ ಪ್ರಕಣದಲ್ಲಿ ಈಗಾಗಲೇ ಸಾಕಷ್ಟು ಮಂದಿಯ ಬಂಧನವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮಂಜುನಾಥ್​ ಮೇಳಕುಂದಿ ಹಾಗೂ ಜ್ಞಾನಜ್ಯೋತಿಯ ಮುಖ್ಯೋಪಾಧ್ಯಾಯ ಕಾಶಿನಾಥ್​ ಎಂಬವರು ತಾವಾಗಿಯೇ ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಕಿಂಗ್​ಪಿನ್​ ಮಂಜುನಾಥ ಮೇಳಕುಂದಿ ಹಾಗೂ ಶ್ರೀಧರ್​ ಪವಾರ್​​ನ್ನು ನ್ಯಾಯಾಲಯವು ಮುಂದಿನ ಮೂರು ದಿನಗಳ ಸಿಐಡಿ ಕಸ್ಟಡಿಗೆ ನೀಡಿದೆ.


ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕಿಂಗ್​​ಪಿನ್​ ಮಂಜುನಾಥ ಮೇಳಕುಂದಿ ಕಳೆದ 21 ದಿನಗಳಿಂದ ಸಿಐಡಿ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ . ಆದರೆ ನಿನ್ನೆ ಸ್ವಯಂಪ್ರೇರಿತನಾಗಿ ಸಿಐಡಿ ಮುಂದೆ ಹಾಜರಾಗಿದ್ದ. ಮತ್ತೊಬ್ಬ ಆರೋಪಿ ಶ್ರೀಧರ್​ ಪವಾರ್​ನನ್ನು ಸಿಐಡಿ ಅಧಿಕಾರಿಗಳೇ ಬಂಧಿಸಿದ್ದರು. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಮೂರನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.


ಇಬ್ಬರೂ ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕಾದ್ದರಿಂದ ತಮ್ಮ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಅದೇ ರೀತಿ ಮೂರನೇ ಜೆಎಂಎಫ್​ಸಿ ನ್ಯಾಯಾಲಯವು ಮುಂದಿನ ಮೂರು ದಿನಗಳ ಕಾಲ ಆರೋಪಿಗಳಾದ ಕಿಂಗ್​ಪಿನ್ ಮಂಜುನಾಥ ಮೇಳಕುಂದಿ ಹಾಗೂ ಶ್ರೀಧರ್​​ ಪವಾರ್​​​ನ್ನು ಸಿಐಡಿ ಕಸ್ಟಡಿಗೆ ನೀಡಿದೆ.

ಇದನ್ನು ಓದಿ : Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

ಇದನ್ನೂ ಓದಿ : ಕುಂದಾಪುರ : ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

psi exam scam accused manjunath sridhar given to cid custody

RELATED ARTICLES

Most Popular