ಭಾನುವಾರ, ಏಪ್ರಿಲ್ 27, 2025
HomeBreakingಮಲ್ಪೆಯ ಲಕ್ಷ್ಮೀನಗರದಲ್ಲಿ ಯೋಗೀಶ್ ಸುವರ್ಣ ಬರ್ಬರ ಹತ್ಯೆ

ಮಲ್ಪೆಯ ಲಕ್ಷ್ಮೀನಗರದಲ್ಲಿ ಯೋಗೀಶ್ ಸುವರ್ಣ ಬರ್ಬರ ಹತ್ಯೆ

- Advertisement -

ಉಡುಪಿ : ಯುವಕನೋರ್ವನನ್ನು ನಾಲ್ವರು ದುಷ್ಕರ್ಮಿಗಳ ತಂಡ ಹತ್ಯೆಗೈದು ಪರಾರಿಯಾಗಿರುವ ಘಟನ ನಡೆದಿದೆ. ಉಡುಪಿ ಜಿಲ್ಲೆಯ ಮಲ್ಪೆಯ ಲಕ್ಷ್ಮೀನಗರದ ಶಾಲೆಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಲ್ಪೆಯ ಬಂದರಿನಲ್ಲಿ ಬೋಟ್ ಗಳಿಗೆ ಮಂಜುಗಡ್ಡೆ ಹಾಕುವ ವೃತ್ತಿಯನ್ನು ಮಾಡಿಕೊಂಡಿದ್ದ ಯೋಗೀಶ್ ಸುವರ್ಣ (29) ನಿನ್ನೆ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ತನ್ನ ಮನೆಗೆ ಹಿಂದಿರುಗುತ್ತಿದ್ದ. ಈ ವೇಳೆಯಲ್ಲಿ ಬಂದ ನಾಲ್ವರ ತಂಡವು ತಲ್ವರಿನಿಂದ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದೆ.

ಸ್ವೌಮ್ಯ ಸ್ವಭಾವದವನಾಗಿರುವ ಯೋಗೀಶ್ ಸುವರ್ಣ ನನ್ನು ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎನ್ನುವುದು ಖಚಿತವಾಗಿಲ್ಲ. ಆದರೆ ಹಣಕಾಸಿನ ವಿಚಾರಕ್ಕೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ರೌಡಿಶೀಟರ್ ವಕ್ವಾಡಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಜಿತ್ ಪಿಂಟೋ ಎಂಬಾತ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಸುಜಿತ್ ಪಿಂಟೋ ಹಾಗೂ ಆತನ ಅಣ್ಣ ಬಡ್ಡಿ ವ್ಯವಹಾರವನ್ನು ನಡೆಸುತ್ತಿದ್ದು, ಯೋಗೀಶ್ ಹಣವನ್ನು ಪಡೆದಿದ್ದ. ಇದೇ ವಿಚಾರಕ್ಕೆ ಈ ಹಿಂದೆಯೂ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular