ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : 19-12-2020

ನಿತ್ಯಭವಿಷ್ಯ : 19-12-2020

- Advertisement -

ಮೇಷರಾಶಿ
ಭೂಮಿ ವಾಹನಗಳಿಂದ ಅಧಿಕ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ವಯೋವೃದ್ಧರಿಂದ ಅನಿರೀಕ್ಷಿತವಾಗಿ ಭಾದೆ, ಹೆಚ್ಚಿನ ವ್ಯವಹಾರಗಳೆಲ್ಲಾ ಸ್ಥಗಿತ, ಆರ್ಥಿಕವಾಗಿ ಕಂಗಾಲಾದ ನಿಮಗೆ ಈಗ ವೆಚ್ಚಗಿಂತ ಆದಾಯವು ಹೆಚ್ಚಾಗಿದ್ದು ಸ್ವಲ್ಪ ಸಮಾಧಾನ ತರಲಿದೆ. ಅರ್ಧಕ್ಕೆ ನಿಂತುಹೋದ ಕೆಲಸ ಪುನಾರಂಭವಾಗಲಿದೆ.

ವೃಷಭರಾಶಿ
ದಿನವಿಡೀ ಆರೋಗ್ಯದ ಬಗ್ಗೆ ಚಿಂತೆ ಮಾಡಿಕೊಂಡಿದ್ದ ನಿಮಗೆ ಈಗ ಸ್ವಲ್ಪ ಶ್ವಾಸ ಬಿಡುವ ಹಾಗೆ ಆದೀತು, ಧರ್ಮಕಾರ್ಯಗಳಲ್ಲಿ ವಿಘ್ನ ಕಂಡು ಬಂದೀತು. ವ್ಯವಹಾರದಲ್ಲಿ ಮೋಸ, ವಂಚನೆ ಇದ್ದೀತು. ಭೂಮಿ ಮತ್ತು ಪತ್ರ ವ್ಯವಹಾರಗಳಿಗೆ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗದ ಒತ್ತಡದಿಂದ ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು.

ಮಿಥುನರಾಶಿ
ನಿಮಗೆ ಅಷ್ಟಮ ಶನಿಯ ಕಾಟವು ಈಗಲೂ ಕಾಡಲಿದೆ, ತಂದೆಯಿಂದ ಧನಾಗಮನ, ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು, ಉಷ್ಣಭಾದೆಯಾ ರಕ್ತದೋಷದಿಂದಲೊ ಆರೋಗ್ಯದಲ್ಲಿ ಹಾನಿಯಿದೆ, ಹೊಸ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ವಿದ್ಯಾರ್ಥಿಗಳಿಗೆ ಅಡೆತಡೆಗಳಿವೆ.

ಕಟಕರಾಶಿ
ಸ್ವಯಂಕೃತ ಅಪರಾಧಿಗಳ ಸಾಧ್ಯತೆ, ಹಾಳು ವ್ಯಸನದಿಂದ ಆರೋಗ್ಯ ಕೆಡಲಿದೆ. ಅನವರತ ಅನುಗ್ರಹದಿಂದ ಅಂತಿಮವಾಗಿ ಪರಿಶ್ರಮ ಸಫ‌ಲತೆಯನ್ನು ಪಡೆಯಲಿದೆ, ಸ್ಥಾನ ಪ್ರಾಪ್ತಿ, ಸಂತತಿ ಸೌಖ್ಯವೂ ಉಂಟಾದೀತು. ಮದುವೆ ಪ್ರಸ್ತಾಪ ಬಂದೀತು., ಬಂಧು ಬಾಂಧವರಿಂದ ತೊಂದರೆ, ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯ.

ಸಿಂಹರಾಶಿ
ಸಂಗಾತಿ ಗೋಸ್ಕರ ಅಧಿಕ ಖರ್ಚು, ಸ್ವಾಭಿಮಾನಿಗಳೂ, ಶೂರರೂ, ಸಾಹಸ ಶೂರರೂ ಆದ ನಿಮಗೆ ಈ ವರ್ಷ ಶುಭದ ಹೆಗ್ಗಳಿಕೆಯ ಕಾಲವೆನ್ನಬಹುದು. ಗೃಹ ಬದಲಿಯೋ ಪಿಠೊಪಕರಣಗಳ ಖರೀದಿಯಿಂದ ಖರ್ಚು ತಂದೀತು. ಮನದ ಇಚ್ಛೆ ನಡೆದೀತು. ಸ್ತ್ರೀಯರೊಂದಿಗೆ ಕಲಹ, ಮಾನಸಿಕವಾಗಿ ನೋವು.

ಕನ್ಯಾರಾಶಿ
ಮಕ್ಕಳೇ ಶತ್ರುಗಳಾಗುವರು, ವಿಧಿಯು ಇತ್ತ ಕೈಕೊಟ್ಟಿàತು. ಅನ್ಯ ಕಾರ್ಯ ನಿಮಿತ್ತ ದೂರ ಪ್ರಯಾಣ ಕಂಡುಬರಬಹುದು. ಆರ್ಥಿಕ ನಷ್ಟದೊಂದಿಗೆ ನ್ಯಾಯಾಲಯದ ದರ್ಶನವೂ ಆದೀತು. ಆರೋಗ್ಯದಲ್ಲಿ ಏರುಪೇರು, ರೋಗ ಬಾಧೆಗಳಿಂದ ಆಸ್ಪತ್ರೆಗೆ ದಾಖಲು, ಸಾಲದ ಸಹಾಯ ಲಭಿಸುವುದು, ದಾಯಾದಿಗಳ ಕಿರಿಕಿರಿ, ನಿದ್ರಾಭಂಗ.

ತುಲಾರಾಶಿ
ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ನಿಮ್ಮ ಮನಸ್ಸು ತಕ್ಕಡಿಯಂತೆ ಡೋಲಾಯಮಾನವಾದೀತು. ಸಂದೇಹಗಳು ಹೆಚ್ಚೇ ಆದಾವು. ನೀವು ಹಾಕಿದ ಯೋಜನೆಗಳೆಲ್ಲ ಉತ್ತಮ ಆದರೆ ಅದಕ್ಕೆ ತಗಲುವ ಖರ್ಚು ಅತೀ ಹೆಚ್ಚು ಅದರ ಬಗ್ಗೆ ಆಲೋಚಿಸಿರಿ, ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ, ಸಹೋದರನೊಂದಿಗೆ ವಾಗ್ವಾದ.

ವೃಶ್ಚಿಕರಾಶಿ
ಆರಂಭದಲ್ಲಿರುವ ಧೈರ್ಯವು ನಿಧಾನವಾಗಿ ಮರೆಯಾಗಬಹುದು, ರೋಗಭಾದೆಗಳಿಂದ ಮುಕ್ತಿ ಹೊಂದುವಿರಿ, ಉದ್ಯೋಗ ಸ್ಥಳದಲ್ಲಿ ಕಲಹ, ಅಧಿಕ ಸಾಲದ ಚಿಂತೆ, ಆದರೂ ಶತ್ರು ನಿವಾರಣೆ, ಗೃಹ ಸುಖ ಶಾಂತಿಯನ್ನು ಆಗಾಗ ಪಡೆದು ನೆಮ್ಮದಿ ತಾಳುವಿರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿರಿ.

ಧನಸ್ಸುರಾಶಿ
ರಾಜಕೀಯವಾಗಿ ಸ್ಥಾನಲಾಭವಿದೆ. ಪ್ರೇಮ ಪ್ರಕರಣದ ಬಗ್ಗೆ ಮನೆಯಲ್ಲಿ ರಾದ್ದಾಂತ ಎಬ್ಬಿಸಲಿದೆ. ಬಂಧುಗಳ ಸಮಾಗಮ ಸಂತಸ ತರಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯ ಹಾನಿ. ವೈದ್ಯ ಸಂದರ್ಶನದಿಂದ ಖರ್ಚು, ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಉದ್ಯೋಗ ಮತ್ತು ಮೇಲಾಧಿಕಾರಿಗಳ ಕಿರಿಕಿರಿ, ಆತ್ಮೀಯರು ಮತ್ತು ನೆರೆಹೊರೆಯವರು ದೂರ.

ಮಕರರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ, ಧನ ಸಂಪತ್ತಿನಿಂದ ಎಲ್ಲವನ್ನೂ ಪಡೆಯ ಬಹುದು ಎಂಬುದು ನಿಮ್ಮ ಭ್ರಮೆ. ಉಷ್ಣವಾಯುಪೀಡೆ ಎಂದು ಅಲಕ್ಷ್ಯ ಬೇಡ. ಕಾರ್ಯಸಾಧನೆ ಉತ್ತಮವಿದ್ದರೂ ದೇಹಾಯಾಸ ಹೆಚ್ಚು. ಮನೆಯಲ್ಲಿ ಸ್ವಲ್ಪ ರಂಪಾಟವಿದ್ದೀತು, ಕೋರ್ಟ್ ಕೇಸುಗಳಲ್ಲಿ ಜಯ, ಮಿತ್ರರಿಂದ ಅನುಕೂಲ.

ಕುಂಭರಾಶಿ
ಗೃಹ-ವಾಹನಾದಿಗಳಿಂದ ಖರ್ಚು ಬಂದೀತು. ನೀರಿನಂತೆ ಹಣ ವ್ಯಯವಾದರೂ ನೆಮ್ಮದಿ ಕಾಣದು. ನಿರಂತರ ಆರ್ಥಿಕ ದುಃಸ್ಥಿತಿಯನ್ನು ಅನುಭವಿಸಿದ ನಿಮಗೆ ಬೇಸರ ತರಲಿದೆ. ಕಿರು ಪ್ರಯಾಣ ಮಾಡಬೇಕಾದೀತು, ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ಗೆಲ್ಲಬೇಕೆಂಬ ಛಲ, ಅಧಿಕ ಪತ್ರ ವ್ಯವಹಾರಗಳಿಂದ ಲಾಭ, ಗೃಹ ಉದ್ಯೋಗ ಸ್ಥಳ ಬದಲಾವಣೆಯಿಂದ ತೊಂದರೆ.

ಮೀನರಾಶಿ
ಹಳೇ ಮನೆ ರಿಪೇರಿಗೆಂದು ಹೋದ ನಿಮಗೆ ಹೊಸ ಮನೆ ಕಟ್ಟಿದಷ್ಟು ಹಣ ಪೋಲಾಗಲಿದೆ. ಆದರೂ ಮುಗಿಸಿದ ಸಂತೃಪ್ತಿ ನಿಮಗೆ ಸಿಗಲಿದೆ. ಕೈಗೆ ಬಂದ ಹಣವನ್ನು ಆದಷ್ಟು ಜಾಗ್ರತೆಯಿಂದ ಇಟ್ಟುಬಿಡಿರಿ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ಮಾಡುವ ಪರಿಸ್ಥಿತಿ ಬರುವುದು, ಮಕ್ಕಳು ದೂರವಾಗುವರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular