ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : 25-12-2020

ನಿತ್ಯಭವಿಷ್ಯ : 25-12-2020

- Advertisement -

ಮೇಷರಾಶಿ
ಆಕಸ್ಮಿಕ ಸ್ವತ್ತು ಪ್ರಾಪ್ತಿ, ಸಾಂಸಾರಿಕವಾಗಿ ಕೆಲವೊಂದು ವಿಚಾರಗಳನ್ನು ಅನಾವಶ್ಯಕವಾಗಿ ಯೋಚಿಸುವಂತಾಗಲಿದೆ, ಆಸೆ-ಆಕಾಂಕ್ಷೆಗಳು ಹೆಚ್ಚು, ಸಂಗಾತಿಯಿಂದ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ, ಭೂಮಿಯಿಂದ ಲಾಭ, ಸ್ತ್ರೀಯರಿಂದ ಅನುಕೂಲ, ಹಿರಿಯರ ಜಂಜಾಟದಿಂದ ಆಗಾಗ ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿಯ ಎದುರಾದೀತು. ಶುಭವಿದೆ.

ವೃಷಭರಾಶಿ
ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗುತ್ತಲೇ ಹೋಗಲಿದೆ, ಸ್ವಂತ ಉದ್ಯಮದಲ್ಲಿ ಅನುಕೂಲ, ಅಧಿಕ ಒತ್ತಡ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಾಲದ ಸಹಾಯ, ಆರೋಗ್ಯ ವ್ಯತ್ಯಾಸಗಳು, ಸೋಲು ಮತ್ತು ಅವಮಾನ , ನಿಮ್ಮ ಕ್ರಿಯಾಶೀಲತೆ, ಪ್ರೌಢಿಮೆ, ಪರಿಶ್ರಮಗಳನ್ನು ಹಾಕಿರಿ. ಅದರ ಫ‌ಲವು ನಿಮಗೆ ದೊರಕಲಿದೆ, ಬದುಕಿನ ಕಷ್ಟನಷ್ಟಗಳ ಅನುಭವವು ನಿಮಗೆ ಪಾಠವಾದೀತು

ಮಿಥುನರಾಶಿ
ದುಶ್ಚಟಗಳು ಅಧಿಕ, ಅಧಿಕ ಖರ್ಚು, ಅನಾರೋಗ್ಯ ಸಮಸ್ಯೆ, ಕಾರ್ಯರಂಗದಲ್ಲಿ ಪರಿಚಯಸ್ಥರಿಂದಲೇ ಕಾರ್ಯಸಾಧನೆಯಾಗಲಿದೆ, ಪ್ರೀತಿ ಪ್ರೇಮ ಭಾವನೆಗಳಿಂದ ಕೂಡಿರುವುದು, ಸ್ತ್ರೀಯರಿಂದ ಧನಲಾಭ, ತಾಯಿಂದ ಅನುಕೂಲ, ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ ಸದ್ಯದಲ್ಲೇ ಫ‌ಲ ನೀಡಲಿದೆ. ಮಾನಸಿಕವಾಗಿ ಧೈರ್ಯವನ್ನು ಕಳೆದುಕೊಳ್ಳದಿರಿ. ಸಹನೆ ಇರಲಿ.

ಕಟಕರಾಶಿ
ಕಾರ್ಯಕ್ಷೇತ್ರದಲ್ಲಿ ನಿಮ್ಮ ವೃತ್ತಿ ಭವಿಷ್ಯವನ್ನು ನೀವೇ ನಿರ್ಧರಿಸುವ ಸಂದರ್ಭಗಳು ಒದಗಿ ಬರುತ್ತವೆ, ಭೂಮಿ ಮತ್ತು ವಾಹನ ಖರೀದಿ ಆಲೋಚನೆ, ವಿಲಾಸಿ ಜೀವನ, ಮಹಿಳೆಯರೊಂದಿಗೆ ಮನಃಸ್ತಾಪ, ಮನೆಯ ವಾತಾವರಣ ಕಲುಷಿತ, ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಅಪವಾದ, ಯೋಗ್ಯ ವಯಸ್ಕರಿಗೆ ಒಂಟಿತನದ ಕಷ್ಟ ಸದ್ಯದಲ್ಲೇ ನಿವಾರಣೆಯಾಗಲಿದೆ, ಸದ್ಯದ ಪರಿಸ್ಥಿತಿಯಲ್ಲಿ ಸುಮ್ಮನಿರಿ.

ಸಿಂಹರಾಶಿ
ನಿರಾಶೆಗಳಿಗೆ ಮನಸ್ಸು ಘಾಸಿಗೊಳ್ಳದಂತೆ ಹೃದಯವನ್ನು ಗಟ್ಟಿಗೊಳಿಸ ಬೇಕಾಗುತ್ತದೆ, ಸ್ತ್ರೀಯರಿಂದ ನೋವು ಮತ್ತು ಭಾದೆ, ದಾಂಪತ್ಯದಲ್ಲಿ ಗೊಂದಲ ಮತ್ತು ಮನಸ್ತಾಪಗಳು, ಉದ್ಯೋಗ ಬದಲಾವಣೆಯ ಮನಸ್ಸು, ಉದ್ಯೋಗ ನಿಮಿತ್ತ ಪ್ರಯಾಣ, ಗೃಹ ಬದಲಾವಣೆಯ ಮನಸ್ಸು, ಊಹಾಪೋಹದ ಮಾತು ಕೇಳುವಿರಿ, ಜೀವನದಲ್ಲಿ ಎದುರಾಗುವ ಸೋಲು, ಆರ್ಥಿಕವಾಗಿ ಹಣಕಾಸಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಗಮನಹರಿಸಿರಿ, ಅನಿರೀಕ್ಷಿತ ಶುಭವಾರ್ತಾ ಶ್ರವಣ.

ಕನ್ಯಾರಾಶಿ
ಅವಿಭಕ್ತ ಕುಟುಂಬದವರಿಗೆ ಹೊಂದಾಣಿಕೆಯ ಅಗತ್ಯವಿದೆ, ಮಾತಿನಿಂದ ಕಲಹ, ಗುಪ್ತ ತೊಂದರೆ, ಹಲ್ಲು ಮತ್ತು ಗಲ್ಲಕ್ಕೆ ಪೆಟ್ಟು, ಕೋರ್ಟ್ ಕೇಸುಗಳಲ್ಲಿ ಜಯ, ಶಕ್ತಿ ದೇವತೆಯ ದರ್ಶನ, ಆಕಸ್ಮಿಕ ಪ್ರಯಾಣ ಮತ್ತು ನಷ್ಟ, ಆಕಸ್ಮಿಕ ಧನ ಸಂಪತ್ತು, ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ, ಅವಿವಾಹಿತರಿಗೆ ತಪ್ಪಿ ಹೋದ ಅವಕಾಶಗಳು ಪುನಃ ಲಭ್ಯವಾಗಲಿದೆ, ಚಾಲನೆ ಹಾಗೂ ಆರೋಗ್ಯ ಜಾಗ್ರತೆ ಮಾಡಿರಿ.

ತುಲಾರಾಶಿ
ವಿಚಾರ ವಿನಿಮಯದಿಂದ ಕಾರ್ಯಾನುಕೂಲಕ್ಕೆ ಸುಲಭವಾಗುತ್ತದೆ. ಶುಭಮಂಗಲ ಕಾರ್ಯಕ್ಕಾಗಿ ಓಡಾಟ ತಂದೀತು. ವಿದ್ಯಾರ್ಥಿಗಳಿಗೆ ಉತ್ಸಾಹದ ವಾತಾವರಣ ವಿರುತ್ತದೆ, ಖರ್ಚಿನ ಬಗ್ಗೆ ಜಾಗ್ರತೆ, ವಿಪರೀತ ಕೋಪ ಆತುರ ದುಡುಕುತನ, ಜಗಳದ ಪ್ರವೃತ್ತಿ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಭಾವನಾತ್ಮಕವಾಗಿ ಮೋಸ, ಸಂಶಯಾತ್ಮಕ ಮಾತುಗಳು, ದಾಂಪತ್ಯದಲ್ಲಿ ಕಲಹ, ಅಪಮೃತ್ಯು ಭಯ, ಅಪವಾದ ಮತ್ತು ಆತಂಕ, ಉದ್ಯೋಗ ಸ್ಥಳದಲ್ಲಿ ನಿರಾಸೆ.

ವೃಶ್ಚಿಕರಾಶಿ
ಅಧಿಕ ಖರ್ಚು, ಅನಾರೋಗ್ಯ ಸಮಸ್ಯೆಗಳು, ಆಯುಧಗಳಿಂದ ಪೆಟ್ಟು, ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಹುಡುಕಾಟ, ಗುಪ್ತ ಚಿಂತನೆ, ಜೈಲುವಾಸದ ಭೀತಿ. ಜಾಗ ಖರೀದಿ ಮಾಡುವ ಯೋಚನೆ ತೋರಿ ಬಂದು ಅನುಕೂಲವಾಗಲಿದೆ. ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ತಿಕ್ಕಾಟಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡುವುದು ಅಗತ್ಯ.

ಧನಸ್ಸುರಾಶಿ
ನಿರೀಕ್ಷಿತ ಕಾರ್ಯಸಾಧನೆ ಮನಸ್ಸಿಗೆ ನೆಮ್ಮದಿ ತಂದೀತು. ಕಾರ್ಯರಂಗದಲ್ಲಿ ಹೆಚ್ಚಿನ ಗಮನಹರಿಸ ಬೇಕಾದೀತು. ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ, ಕಾರ್ಯರಂಗದಲ್ಲಿ ತುಂಬಾ ಸಮಾಧಾನದ ವಾತಾವರಣ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ಶತ್ರುತ್ವ ಬೆಳೆಯುವುದು.

ಮಕರರಾಶಿ
ಆರ್ಥಿಕ ಪರಿಸ್ಥಿತಿ ಸುಧಾರಣೆ, ಸ್ಥಿರಾಸ್ತಿ ಮತ್ತು ವಾಹನದಿಂದ ಧನಾಗಮನ, ಕುಟುಂಬ ಕಲಹ, ಮಕ್ಕಳ ಜೀವನದಲ್ಲಿ ಪ್ರಗತಿ, ಪ್ರೀತಿ ಪ್ರೇಮ ವಿಷಯಗಳಿಂದ ಒತ್ತಡ, ಸಂತಾನ ದೋಷಗಳು, ಸ್ತ್ರೀಯರಿಂದ ಕಿರಿಕಿರಿ, ಸಂಗಾತಿಯಿಂದ ಲಾಭ, ಅನಾವಶ್ಯಕ ಚಿಂತೆಗಳಿಂದ ತಲೆನೋವು ಬರಿಸಿಕೊಳ್ಳುವಂತಾದೀತು. ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುವವರು ಹೆಚ್ಚಿನ ಜಾಗ್ರತೆ ವಹಿಸ ಬೇಕಾಗುತ್ತದೆ, ಸ್ವಾಭಿಮಾನಕ್ಕೆ ಭಂಗ ತಂದೀತು. ಶುಭವಿದೆ.

ಕುಂಭರಾಶಿ
ವಿದ್ಯಾರ್ಥಿಗಳಿಗೆ ಅನುಕೂಲ, ಸ್ಥಿರಾಸ್ತಿ ವಾಹನ ಯೋಗ ಪ್ರಾಪ್ತಿ, ಶಕ್ತಿದೇವತೆಯ ದರ್ಶನ ಯೋಗ, ಪ್ರಯಾಣದಿಂದ ತೊಂದರೆ, ರಕ್ತ ಸಂಬಂಧಿಗಳಿಂದ ಅಪವಾದ, ಉಸಿರಾಟ ಸಮಸ್ಯೆ, ಉದ್ಯೋಗ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ಹಲವು ದಿನಗಳಿಂದ ಬಾಕಿ ಉಳಿದಿದ್ದ ಕಾರ್ಯವೊಂದು ಕೈಗೂಡಲಿದೆ. ಮನಸಿಗೆ ನೆಮ್ಮದಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಮೀನರಾಶಿ
ಉದ್ಯೋಗಿಗಳಿಗೆ ಬಡ್ತಿ, ವಾಹನಗಳಿಂದ ಪೆಟ್ಟು, ನಂಬಿದವರಿಂದಲೇ ಮೋಸ, ನಷ್ಟ ಸೋಲು ನಿರಾಸೆ, ಹಣಕಾಸಿನಲ್ಲಿ ಅಡೆತಡೆ, ಗೌರವಕ್ಕೆ ಚ್ಯುತಿ, ಬೆಂಕಿಯಿಂದ ತೊಂದರೆ, ಚಿಂತಿತ ಕೆಲಸ ಕಾರ್ಯಗಳು ಅಡೆತಡೆ ಗಳಿಂದಲೇ ಪೂರ್ಣವಾಗುತ್ತದೆ, ಸಾಂಸಾರಿಕವಾಗಿ ಮಹಿಳೆಯರು ಅನಾವಶ್ಯಕವಾಗಿ ಮನೋವ್ಯಾಕುಲತೆಗೆ ಗುರಿಯಾಗಲಿದ್ದಾರೆ,

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular