ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 06-08-2020

ನಿತ್ಯಭವಿಷ್ಯ : 06-08-2020

- Advertisement -

ಮೇಷರಾಶಿ
ದೇವತಾ ಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಕಂಡು ಬಂದಾವು. ನಿರುದ್ಯೋಗಿಗಳು ಉದ್ಯೋಗಭಾಗ್ಯವನ್ನು ಪಡೆದಾರು. ಕುಟುಂಬದ ಹಿರಿಯರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು. ಶತ್ರು ದಮನ, ಕಾರ್ಯಕರ್ತರಲ್ಲಿ ಬೇಸರ, ಅವಕಾಶಗಳು ಕೈತಪ್ಪುವ ಸಾಧ್ಯತೆ

ವೃಷಭರಾಶಿ
ಉದ್ಯೋಗ ನಿಮಿತ್ತ ಪ್ರಯಾಣ, ದೈವಾನುಗ್ರಹವಿಲ್ಲದೆ ನಿರೀಕ್ಷಿತ ಕೆಲಸಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ಸರಕಾರಿ ಅಧಿಕಾರಿ ವರ್ಗದವರಿಂದ ಕ್ಲೇಶವಿದೆ. ಮುಂಗೋಪದಿಂದಾಗಿ ಆಪ್ತೇಷ್ಟರ ವಿರಸ ಕಟ್ಟಿಕೊಳ್ಳುವಂತಾದೀತು. ವ್ಯವಹಾರದಲ್ಲಿ ಸಂತೃಪ್ತಿ. ಆರ್ಥಿಕವಾಗಿ ಮೋಸ, ಕಿರಿಕಿರಿಗಳು, ಸೋಲು, ನಷ್ಟ, ನಿರಾಸೆ, ಸಹೋದರನಿಂದ ಬೇಸರ, ವಾಹನ ಚಾಲನೆಯಲ್ಲಿ ಎಚ್ಚರ.

ಮಿಥುನರಾಶಿ
ಸ್ವಯಂಕೃತ ತಪ್ಪಿನಿಂದ ತೊಂದರೆ, ಅನಾರೋಗ್ಯ, ಸಂಗಾತಿ ನಡವಳಿಕೆಯಿಂದ ಬೇಸರ, ಮಾನಸಿಕ ಖನ್ನತೆಯಿಂದ ಬಳಲಲಿದ್ದೀರಿ. ಕ್ರಿಮಿನಲ್‌ ಮೊಕದ್ದಮೆಯಿಂದ ಕ್ಲೇಶವಿದೆ. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು ಕಂಡು ಬಂದೀತು. ತೋಟಗಾರಿಕೆ, ಕೃಷಿ ಕಾರ್ಯದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಉದ್ಯೋಗ ಬದಲಾವಣೆ, ಪಾಲುದಾರಿಕೆಯಲ್ಲಿ ಸಮಸ್ಯೆ.

ಕಟಕರಾಶಿ
ದುಃಸ್ವಪ್ನಗಳಿಂದ ಗಾಬರಿ, ಅನಾರೋಗ್ಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಬೇಸರ, ಪ್ರಯಾಣ ರದ್ದು, ವಾಹನಾಪಘಾತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಲಿದೆ. ಆರ್ಥಿಕ ಮುಗ್ಗಟ್ಟು ಆಗಾಗ ತೋರಿ ಬರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಸಾಲ ಮಾಡುವ ಪರಿಸ್ಥಿತಿ.

ಸಿಂಹರಾಶಿ
ಅನಿರೀಕ್ಷಿತ ಲಾಭ, ಮಕ್ಕಳ ಜೀವನ ಪ್ರಗತಿ, ರಿಪೇರಿ, ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ನೂತನ ನೆಂಟರಿಷ್ಟರ ಸಮಾಗಮದಿಂದ ಸಂತಸ ಹೆಚ್ಚಲಿದೆ. ಕಡ್ಡಾಯವಾಗಿ ಧನ ಸಂಗ್ರಹಕ್ಕೆ ಮನಸ್ಸು ಮಾಡುವುದು ಉತ್ತಮ. ದಿನಾಂತ್ಯ ಕಿರು ಸಂಚಾರ. ಉದ್ಯೋಗದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಆರ್ಥಿಕವಾಗಿ ತಪ್ಪು ನಿರ್ಧಾರ, ಆಪ್ತರಿಂದ ಸೋಲು.

ಕನ್ಯಾರಾಶಿ
ಸ್ಥಿರಾಸ್ತಿ ಮತ್ತು ವಾಹನ ತೊಂದರೆ, ಆಧ್ಯಾತ್ಮದತ್ತ ಒಲವು, ಉದ್ಯೋಗದಲ್ಲಿ ಗೊಂದಲ, ರಿಪೇರಿ, ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ನೂತನ ನೆಂಟರಿಷ್ಟರ ಸಮಾಗಮದಿಂದ ಸಂತಸ ಹೆಚ್ಚಲಿದೆ. ಕಡ್ಡಾಯವಾಗಿ ಧನ ಸಂಗ್ರಹಕ್ಕೆ ಮನಸ್ಸು ಮಾಡುವುದು ಉತ್ತಮ. ದಿನಾಂತ್ಯ ಕಿರು ಸಂಚಾರ. ಪಾಲುದಾರಿಕೆಯಲ್ಲಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ತುಲಾರಾಶಿ
ಸತ್ಕಾರ್ಯಗಳಿಗೆ ಧನವಿನಿಯೋಗವಾಗಿ ಸಂತಸ ತರಲಿದೆ. ಉದ್ಯೋಗಿ ಮಹಿಳೆಯರಿಗೆ ವೃತ್ತಿರಂಗದಲ್ಲಿ ಸಮಾಧಾನ ಸಿಗಲಿದೆ. ರಾಜಕೀಯ ವರ್ಗದವರಿಗೆ ಸ್ಥಾನಮಾನಕ್ಕಾಗಿ ಹೋರಾಟ ವಿರುತ್ತದೆ. ಪ್ರವಾಸ ಮುದ ನೀಡಲಿದೆ. ಸಾಲಬಾಧೆ, ಶತ್ರು ಕಾಟ, ಮಾಟ ಮಂತ್ರ ತಂತ್ರಗಳು, ಭವಿಷ್ಯದ ಚಿಂತೆ, ಬಂಧುಗಳಿಂದ ಕಿರಿಕಿರಿ, ಅನಗತ್ಯ ತಿರುಗಾಟ, ಆರ್ಥಿಕವಾಗಿ ಹಿನ್ನಡೆ.

ವೃಶ್ಚಿಕರಾಶಿ
ಆರ್ಥಿಕ ಪ್ರಗತಿ, ನೂತನ ಗೃಹ ನಿರ್ಮಾಣ ಕಾರ್ಯಕ್ಕೆ ಧನವ್ಯಯವಾದೀತು. ಬರಬೇಕಾದ ಹಳೇ ಬಾಕಿ ದೊರಕಲಿದೆ. ಸಾಂಸಾರಿಕವಾಗಿ ಚಾಡಿಕೋರರ ಮಾತು ತಲೆಯನ್ನು ಕೆಡಿಸಲಿದೆ. ವ್ಯಾಪಾರಿಗಳು ಜಾಣ್ಮೆ ವಹಿಸಿದ್ದಲ್ಲಿ ಲಾಭ ಪಡೆಯುವಿರಿ. ಗುರುಗಳ ಮಾರ್ಗದರ್ಶನ, ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿ, ವಿದ್ಯಾಭಿವೃದ್ಧಿ, ಉದ್ಯೋಗದ ಅನುಕೂಲ, ಆಧ್ಯಾತ್ಮದ ಒಲವು

ಧನಸ್ಸುರಾಶಿ
ಸ್ವಯಂಕೃತಾಪರಾಧ, ವಿದ್ಯಾರ್ಥಿಗಳಿಗೆ ವಿದೇಶಿ ಉದ್ಯೋಗದ ಭಾಗ್ಯವನ್ನು ತಂದು ಕೊಡಲಿದೆ. ಮುಖ್ಯವಾಗಿ ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸುವುದು ಅಗತ್ಯವಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ ವಿರುತ್ತದೆ. ಆರೋಗ್ಯ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರ್ಥಿಕ ಮೋಸ, ಮನೆ ವಾತಾವರಣ ಕಲುಷಿತ, ಗುಪ್ತ ತೀರ್ಮಾನದಿಂದ ತೊಂದರೆ.

ಮಕರರಾಶಿ
ಕೆಲಸಕಾರ್ಯಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗುವುದು ಉತ್ತಮ. ನೂತನ ದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತರಲಿದೆ. ಒಮ್ಮೊಮ್ಮೆ ನಿಮ್ಮ ಅತ್ಮೀಯರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿಯಾರು. ದುಃಸ್ವಪ್ನಗಳು, ಅವಮಾನ, ಅಪವಾದ, ಸುಖದಿಂದ ವಂಚಿತರಾಗುವಿರಿ, ತಜ್ಞರ ಭೇಟಿ, ದೂರ ಪ್ರಯಾಣ

ಕುಂಭರಾಶಿ
ಲಾಭದ ಪ್ರಮಾಣ ಅಧಿಕ, ಕುಟುಂಬಿಕರ ಹಳೆಯ ನಿಷ್ಠುರ ಪುನಃಪ್ರಕಟವಾದೀತು. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯು ಬೇಸರ ತರಲಿದೆ. ಹಿರಿಯರ ಮಾತಿಗೆ ತಾಳ್ಮೆಯಿಂದ ವ್ಯವಹರಿಸಿರಿ. ಪತ್ರಿಕೋದ್ಯಮಿಗಳಿಗೆ ಯಶಸ್ಸು ದೊರಕಲಿದೆ. ಉತ್ತಮ ವಾತಾವರಣ, ಆರೋಗ್ಯ ಚೇತರಿಕೆ, ಶುಭ ಕಾರ್ಯಗಳು, ಕುಟುಂಬದ ಏಳಿಗೆ, ಮಕ್ಕಳಿಂದ ಬೇಸರ.

ಮೀನರಾಶಿ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಿವಾಹಪೇಕ್ಷಿಗಳಿಗೆ ದಾಂಪತ್ಯದ ಯೋಗವಿದೆ. ಸಾಮಾಜಿಕ ಕಾರ್ಯರಂಗದಲ್ಲಿ ನಿಮ್ಮ ಕ್ರಿಯಾಶೀತೆಗೆ ಉತ್ತಮ ಗೌರವ ಲಭಿಸಲಿದೆ. ಹಿರಿಯರಿಗೆ ದೇವತಾಕಾರ್ಯಗಳು ಮನಸ್ಸಿಗೆ ಶಾಂತಿ, ಸಮಾಧಾನ ನೀಡಲಿದೆ. ಬಡ್ತಿಯ ಮುಂದಾಲೋಚನೆ, ಸ್ವಂತ ಕರ್ತವ್ಯದಲ್ಲಿ ಪ್ರಗತಿ, ಆರೋಗ್ಯದ ಕಡೆ ಹೆಚ್ಚು ಗಮನ, ಆತ್ಮಾಭಿಮಾನ ಸ್ಥಿರಾಸ್ತಿ ಗೊಂದಲ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular